ಹೊಸ ನ್ಯಾಯಬೆಲೆ ಅಂಗಡಿಗಳಿಗಾಗಿ ಅರ್ಜಿ ಆಹ್ವಾನಧಾರವಾಡ ಜಿಲ್ಲೆಯಲ್ಲಿ 3 ಹೊಸ ಅಂಗಡಿಗಳಿಗೆ ಅವಕಾಶ – ಆಹಾರ ನಾಗರಿಕ ಸರಬರಾಜು ಇಲಾಖೆಯ ಪ್ರಕಟಣೆ

ಧಾರವಾಡ: ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ ವ್ಯಾಪ್ತಿಯ ಬೆಂಗೇರಿ–ಗೋಪನಕೊಪ್ಪ, ಕರ್ಕಿ ಬಸವೇಶ್ವರನಗರ ಹಾಗೂ ಆನಂದನಗರ ಪ್ರದೇಶಗಳಲ್ಲಿ ಹೊಸದಾಗಿ ಮೂರು ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಕುರಿತು ಅರ್ಜಿಗಳನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಹ್ವಾನಿಸಿದೆ. ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016ರ ಕಲಂ 11(2) ರನ್ವಯ ಪ್ರತಿ…

Read More

ಪದವೀಧರ ಮತದಾರರ ನೋಂದಣಿಗೆ ತಾಲೂಕುವಾರು ಐಇಸಿ ಕಾರ್ಯಕ್ರಮಗಳ ಆಯೋಜನೆಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಎಸ್. ತೊದಲಬಾಗಿ ಸೂಚನೆ

ಪದವೀಧರ ಮತದಾರರ ನೋಂದಣಿಗೆ ತಾಲೂಕುವಾರು ಐಇಸಿ ಕಾರ್ಯಕ್ರಮಗಳ ಆಯೋಜನೆಗೆ ಸೂಚನೆಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಎಸ್. ತೊದಲಬಾಗಿ ಸೂಚನೆ ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಪದವೀಧರ ಮತದಾರರ ನೋಂದಣಿಯನ್ನು ಉತ್ತೇಜಿಸಲು ತಾಲೂಕುಮಟ್ಟದಲ್ಲಿ ಐಇಸಿ (IEC) ಹಾಗೂ ಸ್ವೀಪ್ (SVEEP) ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಸೂಚಿಸಿದರು. ಅವರು (ಅ.18) ಸಂಜೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು….

Read More

ಶಿರಗುಪ್ಪಿಯಲ್ಲಿ ಸಹಸ್ರ ಬಿಲ್ವಾರ್ಚನೆ, ಸದ್ವಿಚಾರ ಪಾಲನೆಗೆ ಶ್ರೀ ಬಸವಣ್ಣಜ್ಜನವರ ಕರೆ

ಶಿರಗುಪ್ಪಿ : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್‌ (ರಿ), ಕುಂದಗೋಳ ವಲಯದ ವತಿಯಿಂದ ಶಿರಗುಪ್ಪಿ ಗ್ರಾಮದ ಶ್ರೀ ಗುರುಪಾದೇಶ್ವರ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ನೆಮ್ಮದಿಗೆ ಸದ್ವಿಚಾರವೇ ಮಾರ್ಗ :ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪರಮಪೂಜ್ಯ ಶ್ರೀ ಅಭಿನವ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಆಶೀರ್ವಚನ ನೀಡಿದರು. “ಜೀವನದಲ್ಲಿ ಸದ್ವಿಚಾರ, ಸದಾಚಾರ ಮತ್ತು ಸಚ್ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ದೇವರು ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟು ನಡೆಸುವ ಎಲ್ಲ…

Read More

ಕುಂದಗೋಳದ ಸಾಲಿಯರ ಪ್ಲಾಟಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಶಾಸಕ ಎಂ ಆರ್ ಪಾಟೀಲ ಚಾಲನೆ

ಕುಂದಗೋಳ: ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅಡಿಯಲ್ಲಿ ಮಂಜೂರಾದ 5 ಲಕ್ಷ ರೂ. ವೆಚ್ಚದ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಕುಂದಗೋಳ ಪಟ್ಟಣದ ಸಾಲಿಯರ ಪ್ಲಾಟಿನಲ್ಲಿ ರವಿವಾರದಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಾಸಕ ಎಂ. ಆರ್. ಪಾಟೀಲ್ ಅವರಿಂದ ಚಾಲನೆಸ್ಥಳೀಯ ಶಾಸಕರಾದ ಎಂ. ಆರ್. ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈ…

Read More

“ರಾಜೀವ್ ತಾರಾನಾಥ್‌ ಸಂಗೀತ ಲೋಕದ ಮಾಂತ್ರಿಕ, ಬಹುತ್ವ ಭಾರತದ ಕನಸುಗಾರ”: ಡಾ. ರಹಮತ್ ತರೀಕೆರೆ ಅಭಿಮತ

ಧಾರವಾಡ: ಪಂಡಿತ ರಾಜೀವ್ ತಾರಾನಾಥ್ ಅವರು ವಿಶ್ವ ಕಂಡ ಸರ್ವಶ್ರೇಷ್ಠ ಸರೋದ್ ವಾದಕರು ಮಾತ್ರವಲ್ಲದೆ, ಸಂಗೀತ ಲೋಕದ ಮಾಂತ್ರಿಕರೂ, ಬಹುತ್ವ ಭಾರತದ ಭವ್ಯ ಕನಸುಗಾರರೂ ಆಗಿದ್ದರು ಎಂದು ಹೊಸಪೇಟೆಯ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ಶನಿವಾರದಂದು ಆಯೋಜಿಸಿದ್ದ ಪಂ. ರಾಜೀವ್ ತಾರಾನಾಥ್ ಅವರ 93ನೇಯ ಜನ್ಮದಿನದ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರೊ. ರಾಜೀವ್ ತಾರಾನಾಥರು ಜಾತಿ, ಧರ್ಮ, ಗಡಿಗಳನ್ನು ಮೀರಿ ಬೆಳೆದವರಾಗಿದ್ದರು. ಭಾರತದ ಮಹಾನ್ ದಾರ್ಶನಿಕರು ಮತ್ತು…

Read More

‘ಸಂಸ್ಕಾರ-ಸಂಸ್ಕೃತಿ ಬದುಕಿಗೆ ಆಧಾರ, ಕಾನೂನು ಅರಿವು ಅಗತ್ಯ’: ಸರ್ಕಾರಿ ಕಾಲೇಜಿನಲ್ಲಿ ‘ಮಹಿಳಾ ವೇದಿಕೆ-ನಕ್ಷತ್ರ’ ಉದ್ಘಾಟನೆ

ಧಾರವಾಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 2025-26 ನೇ ಸಾಲಿನ ‘ಮಹಿಳಾ ವೇದಿಕೆ-ನಕ್ಷತ್ರ’ ವತಿಯಿಂದ ಉದ್ಘಾಟನಾ ಸಮಾರಂಭ ಹಾಗೂ “ಕಾನೂನು ಅರಿವು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕರಾದ ಡಾ. ಜ್ಯೋತಿರ್ಲಿಂಗ ಚಂದ್ರಮ ಹೊನಕಟ್ಟಿ ಅವರು, ಜಾನಪದದ ಸೊಗಡಿನ ಮೂಲಕ ಮಹಿಳೆಯರನ್ನು ಭಾವನಾತ್ಮಕವಾಗಿ ತಲುಪಿದರು. “ತವರೂರ ದಾರಿಯಲ್ಲಿ ಕಲ್ಲಿಲ್ಲ ಮುಳ್ಳಿಲ್ಲ, ಸಾಸಿವೆಯಷ್ಟು ಮರಳಿಲ್ಲ” ಎಂಬ ಜಾನಪದ ಹಾಡಿನೊಂದಿಗೆ…

Read More

ಧಾರವಾಡ ಬೆಳೆ ಹಾನಿಗೆ ₹60 ಕೋಟಿ ಹೆಚ್ಚುವರಿ ಅನುದಾನ: ಒಟ್ಟು 80 ಕೋಟಿ ಪರಿಹಾರ ಜಮೆಗೆ ಶಾಸಕ ಕೋನರಡ್ಡಿ ಹರ್ಷ

ನವಲಗುಂದ: ಧಾರವಾಡ ಜಿಲ್ಲೆಯಲ್ಲಿ 2025ರ ಮುಂಗಾರು ಅವಧಿಯಲ್ಲಿ ಸುರಿದ ಅತೀವೃಷ್ಟಿಯಿಂದ ಸಂಭವಿಸಿದ ಬೃಹತ್ ಪ್ರಮಾಣದ ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರವು ಹೆಚ್ಚುವರಿಯಾಗಿ ರೂ. 60.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹೊಸ ಅನುದಾನದೊಂದಿಗೆ, ರೈತರ ಖಾತೆಗಳಿಗೆ ಒಟ್ಟು ರೂ. 80.00 ಕೋಟಿ ಪರಿಹಾರ ಜಮಾ ಆಗಲಿದೆ ಎಂದು ಸ್ಥಳೀಯ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ಶುಕ್ರವಾರ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಒಟ್ಟು 97,629.64 ಹೆಕ್ಟೇರ್ ಪ್ರದೇಶದಲ್ಲಿ…

Read More

ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ‘ಅಕ್ರಮ’: ಸರ್ಕಾರದ ವಿರುದ್ಧ ರಮೇಶ ಕೋಲಕಾರ ಆರೋಪ

ನವಲಗುಂದ: ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ರಾಜ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅಕ್ರಮ ಎಸಗಿದೆ ಎಂದು ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ ರಮೇಶ ಕೋಲಕಾರ (ಬೆಳಹಾರ, ನವಲಗುಂದ) ಗಂಭೀರವಾಗಿ ಆರೋಪಿಸಿದ್ದಾರೆ. ನೇಮಕಾತಿ ಸಂಪೂರ್ಣ ರಹಸ್ಯ: ಸುಪ್ರೀಂ ನಿರ್ದೇಶನ ಉಲ್ಲಂಘನೆಮಾಹಿತಿ ಆಯುಕ್ತರ ನೇಮಕಾತಿಗಾಗಿ ಒಟ್ಟು 109 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ರಹಸ್ಯವಾಗಿರಿಸಿ, ಸುಪ್ರೀಂ ಕೋರ್ಟ್‌ನ (ಮಿಸ್ಟೇನಿಯಸ್ ಅಪ್ಲಿಕೇಶನ್ ಸಂಖ್ಯೆ: 1779…

Read More

ನವಲಗುಂದ:ಭಕ್ತಿ ಭಾವದ ಪಂಡರಪುರದ ಡಿಂಡಿಯಾತ್ರೆ*

ನವಲಗುಂದ : ಆಧ್ಯಾತ್ಮಿಕ ಭಾವದ ಮಧ್ಯೆ, ಭಕ್ತಿಯಿಂದ ಸಾಗುತ್ತಿರುವ ಪಂಢರಪುರ ದಿಂಡಿ ಯಾತ್ರೆ 13 ಅಕ್ಟೋಬರ್ 2025ರ ಸೋಮವಾರ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಅಳಗವಾಡಿ ಗ್ರಾಮದಿಂದ ಪ್ರಾರಂಭವಾಗಿ ಗುರುವಾರ ಚಿತ್ರಭಾನಕೊಟ್ಟೆ ತಲುಪಿದೆ. ನವಲಗುಂದ ತಾಲೂಕಿನ ಅಳಗವಾಡಿಯಿಂದ ಪ್ರಾರಂಭವಾದ ಈ ದಿಂಡಿ ಹುಣಸಿಕಟ್ಟೆ, ನರಗುಂದ, ರಾಮದುರ್ಗ ಮತ್ತು ಬಟಕುರ್ಕಿ ಮಾರ್ಗವಾಗಿ ಭಕ್ತಿಯ ನಾದದ ಮಧ್ಯೆ ಚಿತ್ರಭಾನಕೊಟ್ಟೆ ತಲುಪಿದೆ. ಭಕ್ತರು ಭಜನೆ, ಕೀರ್ತನೆ ಮತ್ತು ದೇವನಾಮ ಸ್ಮರಣೆಯಲ್ಲಿ ತೊಡಗಿ ದಿಂಡಿಯನ್ನು ಪವಿತ್ರ ಯಾತ್ರೆಯಾಗಿ ಪರಿವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ಏಕಾದಶಿಯ…

Read More

ನವಲಗುಂದ: ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ನೌಕರರಿಗೆ ನೃತ್ಯ ಸ್ಪರ್ಧೆ

ನವಲಗುಂದ: ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಗುಂಪು ಜನಪದ ಮತ್ತು ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ನವೆಂಬರ್ 8 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಕಬ್ಬನ್ ಉದ್ಯಾನವನದಲ್ಲಿರುವ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಡಿ. ರಂಗಣ್ಣವರವರು ತಿಳಿಸಿದ್ದಾರೆ. ಈ ಸ್ಪರ್ಧೆ ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗಾಗಿ ಆಯೋಜಿಸಲಾಗಿದೆ. ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನಿಂದ…

Read More