ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆ ವತಿಯಿಂದ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನವಲಗುಂದದಲ್ಲಿ ಗಾಂಧಿ ಸ್ಮೃತಿ, ಜಾಥಾ

ನವಲಗುಂದ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156ನೇ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಪುರಸಭೆ ನವಲಗುಂದ ಇವರ ಸಹಯೋಗದೊಂದಿಗೆ ಗಾಂಧಿ ಸ್ಮೃತಿ, ವ್ಯಸನಮುಕ್ತರಿಗೆ ಅಭಿನಂದನೆ ಮತ್ತು ಜಾಥಾ ಕಾರ್ಯಕ್ರಮವು ಅ.11 ಶನಿವಾರ ಮುಂಜಾನೆ 11 ಗಂಟೆಗೆ ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ಜರುಗಲಿದೆ. ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ ಮನಕವಾಡ ಗ್ರಾಮದ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ನವಲಗುಂದ…

Read More

ಧಾರವಾಡ: ಕಡಲೆ ಬೀಜ ವಿತರಣೆ 3ರಿಂದ 5 ಪ್ಯಾಕೆಟ್‌ಗೆ ಏರಿಸಬೇಕು ಕಾಂಗ್ರೆಸ್ ಕಿಸಾನ್ ಘಟಕದ ಆಗ್ರಹ

ಧಾರವಾಡ: ಕಡಲೆ ಬೀಜ ವಿತರಣೆ 3ರಿಂದ 5 ಪ್ಯಾಕೆಟ್‌ಗೆ ಏರಿಸಬೇಕು – ಕಿಸಾನ್ ಘಟಕದ ಆಗ್ರಹ ಧಾರವಾಡ: ಮುಂಬರುವ ಹಿಂಗಾರು ಹಂಗಾಮಿಗೆ ಕಡಲೆ ಬೀಜಗಳ ವಿತರಣೆಯನ್ನು ಪ್ರಸ್ತುತ ನೀಡುತ್ತಿರುವ ಮೂರು ಪ್ಯಾಕೆಟ್‌ಗಳಿಂದ ಐದು ಪ್ಯಾಕೆಟ್‌ಗಳಿಗೆ ಏರಿಸಬೇಕು ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ (ಕಿಸಾನ್ ಘಟಕ) ತೀವ್ರವಾಗಿ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ರೈತ ಸಂಪರ್ಕ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಘಟಕ ಎಚ್ಚರಿಕೆ ನೀಡಿದೆ. ​ಈ ಕುರಿತು ಕಿಸಾನ್ ಘಟಕದ ಜಿಲ್ಲಾಧ್ಯಕ್ಷರಾದ ರಮೇಶ ಮ. ಕೊಪ್ಪದ…

Read More

ಮಹಾನ್ ಗ್ರಂಥ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ: ಎಚ್.ಎಸ್. ಲಕ್ಷ್ಮೇಶ್ವರ

ಕುಂದಗೋಳ: ಮಹರ್ಷಿ ವಾಲ್ಮೀಕಿಯವರು ವಿಶ್ವ ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥ ಕಾವ್ಯವನ್ನು ರಚಿಸಿಕೊಟ್ಟ ಅಪರೂಪದ ಸಾಹಿತಿ ಎಂದು ಗ್ರಾಮ ಪಂಚಾಯತಿ ಸದಸ್ಯ ಎಚ್.ಎಸ್. ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು. ​ ತಾಲೂಕಿನ ಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ (ಮಂಗಳವಾರ) ವಿಶ್ವ ಪ್ರಸಿದ್ಧ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ​ಜ್ಞಾನ ಶಿಕ್ಷಣದ ಕೊಡುಗೆ: ​ಶ್ರೀ ಮಹರ್ಷಿ ವಾಲ್ಮೀಕಿಯವರು ನೀಡಿದ ಜ್ಞಾನ…

Read More

ಬದುಕಿನ ಶ್ರೇಷ್ಠತೆ ತಿಳಿಸಿಕೊಟ್ಟ ಆದಿಕವಿ ಮಹರ್ಷಿ ವಾಲ್ಮೀಕಿ: ಶ್ರೀಧರ ಲೋನಕರ

ನವಲಗುಂದ: ಮಹರ್ಷಿ ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಆದ ಮಹತ್ತರ ಪರಿವರ್ತನೆಯಿಂದಾಗಿ ರಾಮಾಯಣದಂತಹ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿ ‘ಆದಿಕವಿ’ ಎಂಬ ಬಿರುದನ್ನು ಪಡೆದು, ಬದುಕಿನ ಶ್ರೇಷ್ಠತೆಯನ್ನು ಇಡೀ ವಿಶ್ವಕ್ಕೆ ಸಾರಿದರು ಎಂದು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಧರ ಲೋನಕರ ಹೇಳಿದರು. ​ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ​ತಪ್ಪು ದಾರಿಯಿಂದ ಸತ್ಯ, ಧರ್ಮದತ್ತ ಸಾಗಿದ ವಾಲ್ಮೀಕಿ: ​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…

Read More

ಮಹದಾಯಿ ಹೋರಾಟಕ್ಕೆ ಯುವ ಪರಿವರ್ತನೆ ಯಾತ್ರೆಯ ಬೆಂಬಲ: ನವಲಗುಂದದಲ್ಲಿ ರೈತರಿಂದ ಸ್ವಾಗತ

ನವಲಗುಂದ: ಬೀದರ್‌ನಿಂದ ಬೆಂಗಳೂರಿನವರೆಗೆ ‘ಯುವ ಪರಿವರ್ತನೆ ಯಾತ್ರೆ’ ಹಮ್ಮಿಕೊಂಡಿರುವ ಕರ್ನಾಟಕ ಜನಸಾಮಾನ್ಯರ ವೇದಿಕೆಯ ಹೋರಾಟಗಾರರಿಗೆ ನವಲಗುಂದ ಪಟ್ಟಣದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮಹದಾಯಿ ಕಳಸಾ ಬಂಡೂರಿ ಪಕ್ಷಾತೀತ ಹೋರಾಟ ಒಕ್ಕೂಟ ಸಮಿತಿಯ ವತಿಯಿಂದ ಹೋರಾಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ​ಪಟ್ಟಣದ ಲಿಂಗರಾಜ್ ವೃತ್ತದ ಬಳಿ ಇರುವ ರೈತ ಭವನದಲ್ಲಿ ಯಾತ್ರಾ ತಂಡವನ್ನು ಸ್ವಾಗತಿಸಿದ ರೈತ ಮುಖಂಡರು, ಯುವ ಪರಿವರ್ತನೆ ಯಾತ್ರೆಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು. ​ಸರ್ಕಾರಗಳ ವಿರುದ್ಧ ರೈತ ಮುಖಂಡರ ವಾಗ್ದಾಳಿ ​ಈ ಸಂದರ್ಭದಲ್ಲಿ ಮಾತನಾಡಿದ ರೈತ…

Read More

ಧರ್ಮದ ಬೆಳಕು ಕೊಟ್ಟ ಆದಿಕವಿ ವಾಲ್ಮೀಕಿ’ ನೆನಪಿಸಬೇಕಿದೆ: ನವಲಗುಂದ ಶಾಸಕ ಕೋನರಡ್ಡಿ

ನವಲಗುಂದ: ಇಂದಿನ ಕವಿಗಳ ಕಾವ್ಯಗಳ ಮಧ್ಯೆ, ನಮಗೆ ಧರ್ಮದ ಬೆಳಕನ್ನು ಕೊಟ್ಟ ದೈವ ಸಮಾನರಾದ ಆದಿಕವಿ ಮಹರ್ಷಿ ವಾಲ್ಮೀಕಿ ಅವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ನವಲಗುಂದ ಶಾಸಕ ಎನ್.ಹೆಚ್.‌ ಕೋನರಡ್ಡಿ ಹೇಳಿದರು. ​ (ಮಂಗಳವಾರ) ನವಲಗುಂದ ತಾಲ್ಲೂಕು ಆಡಳಿತ ಮತ್ತು ವಾಲ್ಮೀಕಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ​ವಾಲ್ಮೀಕಿ ಅವರು ಒಬ್ಬ ಋಷಿ ಮತ್ತು ಸುಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ ಆಗಿರುವ ಅವರನ್ನು ಮೊದಲ ಮಹಾಕಾವ್ಯ ರಚಿಸಿದ…

Read More

ಮಹರ್ಷಿ ವಾಲ್ಮೀಕಿ ಆದರ್ಶ ಪಾಲನೆ: ಸೌಲಭ್ಯ ಯೋಜನೆ ಸರಿಯಾಗಿ ತಲುಪಲಿ ಕುಂದಗೋಳದಲ್ಲಿ ಕೆ ಪಿ ಸಿ ಸಿ ಪ್ರ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಆಗ್ರಹ

ಕುಂದಗೋಳ: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯತ, ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಬಸವಣ್ಣಜ್ಜನವರ ಕಲ್ಯಾಣಪುರ ಮಠದ ಸಭಾ ಭವನದಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಗಣ್ಯರು, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ, ವಾಲ್ಮೀಕಿಯವರು ಮನಃ ಪರಿವರ್ತನೆಗೊಂಡು ರಾಮಾಯಣ ಮಹಾಕಾವ್ಯ…

Read More

​ವಾಲ್ಮೀಕಿ ಸಮುದಾಯ ವೀರ, ಧೀರ, ರಾಜರಾಗಿ ಆಳಿದ ವಂಶಜರು: ಸ್ವಾಭಿಮಾನಿ ಬದುಕು ನಮ್ಮದಾಗಲಿ – ಎಫ್.ಎಚ್. ಜಕ್ಕಪ್ಪನವರ ಕರೆ

ಧಾರವಾಡ: ಈ ದೇಶದ ವಾಲ್ಮೀಕಿ ಸಮುದಾಯವು ವೀರ ಮತ್ತು ಧೀರರಾಗಿದ್ದು, ಅನೇಕ ಕೋಟೆ ಮತ್ತು ನಾಡನ್ನು ಆಳಿದ ರಾಜವಂಶಜರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶಪ್ರಾಯರಾಗಿದ್ದು, ಅವರಂತೆಯೇ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್‌ನ ನೂತನ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರು ಹೇಳಿದರು. ​ಅವರು ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ​‘ರಾಮಾಯಣ ಮಹಾಕಾವ್ಯ…

Read More

ವಿಶ್ವಕರ್ಮರ ಶಿಲ್ಪಕಲೆ: ದೇಶದ ಸಾಂಸ್ಕೃತಿಕ ವೈಭವದ ಮೂಲಸ್ತಂಭ – ಶಾಸಕ ಎನ್‌. ಎಚ್‌. ಕೋನರೆಡ್ಡಿ

ನವಲಗುಂದ: ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳಿಂದ ಹಿಡಿದು ದೇವಾಲಯದ ವಿಗ್ರಹಗಳು, ಸ್ಮಾರಕಗಳು ಹಾಗೂ ಗೃಹೋಪಯೋಗಿ ವಸ್ತುಗಳವರೆಗೆ—ಎಲ್ಲೆಡೆ ವಿಶ್ವಕರ್ಮರ ಕಲೆಯ ಜೀವಂತ ಅಸ್ತಿತ್ವ ಕಾಣಬಹುದು. ಇದು ವಿಶ್ವಕರ್ಮ ಸಮುದಾಯದ ಶ್ರದ್ಧೆ, ನೈಪುಣ್ಯ ಮತ್ತು ಸಾಂಸ್ಕೃತಿಕ ಬದ್ಧತೆಯ ಸಾಕ್ಷಿಯಾಗಿದೆ ಎಂದು ನವಲಗುಂದ ಶಾಸಕ ಎನ್‌. ಎಚ್‌. ಕೋನರೆಡ್ಡಿ ಹೇಳಿದರು. ​ಅವರು ಭಾನುವಾರ ಪಟ್ಟಣದ ಶ್ರೀ ನಾಗಲಿಂಗ ಭವನದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. “ವಿಶ್ವಕರ್ಮರು ಭಾರತದ ಕರಕುಶಲ ಪರಂಪರೆಯ ಮೂಲಸ್ತಂಭರಾಗಿದ್ದಾರೆ. ಅವರ ಕಲಾತ್ಮಕತೆ ಕೇವಲ ವಸ್ತು…

Read More

ಈರುಳ್ಳಿ ಬೆಲೆ ಕುಸಿತ: ಬೆಳೆಗಾರರಿಗೆ ಆರ್ಥಿಕ ಸಂಕಷ್ಟ, ಕೂಡಲೇ ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹ

ನವಲಗುಂದ: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಈರುಳ್ಳಿ ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವರ್ಷ ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಯೂ ಸಿಗದೆ ರೈತರು ಕಂಗಾಲಾಗಿದ್ದಾರೆ. ​ಒಂದು ಎಕರೆ ಈರುಳ್ಳಿ ಬೆಳೆಯಲು ಕನಿಷ್ಠ ₹೫,೦೦೦ ದಿಂದ ₹೧೦,೦೦೦ ವರೆಗೆ ಖರ್ಚು ವೆಚ್ಚಗಳು ತಗಲುತ್ತವೆ. ಆದರೆ, ಬೆಳೆ ಕೈಗೆ ಬಂದ ನಂತರ ಕನಿಷ್ಠ ಬೆಂಬಲ ಬೆಲೆ ಸಿಗದೇ ಅತ್ಯಂತ…

Read More