ಕಳಪೆ ಕಾಮಗಾರಿಗೆ ಮಕ್ಕಳ ಜೀವ ಬಲಿ? ಬಲಕುಂದಿ ಸರ್ಕಾರಿ ಶಾಲೆಯ ಗೇಟ್ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ; ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ

ಇಳಕಲ್: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯದ್ವಾರದ ಗೇಟ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ದುರ್ಘಟನೆ ಶಾಲೆಯಲ್ಲಿನ ಕಳಪೆ ಕಾಮಗಾರಿ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಬಯಲಿಗೆಳೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳ ಪೈಕಿ ನಯನಾ ಕುಮಾರಿ ಎಂಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿವೆ. ಗೇಟ್ ಆಕೆಯ ಮೇಲೆ ಬಿದ್ದ ಪರಿಣಾಮ ಮೂಗಿಗೆ ತೀವ್ರ ಪೆಟ್ಟು…

Read More

ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ: ಬಾಗಲಕೋಟೆ ಪ್ರಾಧಿಕಾರ ಕಚೇರಿಯಲ್ಲೇ ಸಿಬ್ಬಂದಿಗೆ ಚಪ್ಪಲಿ ಏಟು ನೀಡಿದ ಸಂತ್ರಸ್ತ ರೈತ

ಬಾಗಲಕೋಟೆ, ಜೂ.13: ಮುಳುಗಡೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ತಾರತಮ್ಯ ಎಸಗಲಾಗಿದೆ ಹಾಗೂ ಹಲವು ವರ್ಷಗಳಿಂದ ಕಚೇರಿಗೆ ಅಲೆದಾಡಿಸಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ, ಸಂತ್ರಸ್ತ ರೈತನೊಬ್ಬ ಆಕ್ರೋಶಗೊಂಡು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬುಡಾ) ಕಚೇರಿಯ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಘಟನೆ ಶನಿವಾರ ನಡೆದಿದೆ. ಸಾರ್ವಜನಿಕರ ಸಮ್ಮುಖದಲ್ಲೇ ನಡೆದ ಈ ಘಟನೆ ಕೆಲಕಾಲ ಕಚೇರಿ ಆವರಣದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು. ಜಮೀನು ಕಳೆದುಕೊಂಡು ಮುಳುಗಡೆ ಸಂತ್ರಸ್ತನಾಗಿರುವ ಬಸಪ್ಪ ಎಂಬ ರೈತ ತನ್ನ ಪರಿಹಾರ ಕಡತದ ಸ್ಥಿತಿಗತಿ…

Read More

ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟ: ಕೊಳಚೆ ನೀರಿನಲ್ಲೇ ತಟ್ಟೆ ತೊಳೆಯುವ ದಯನೀಯ ಸ್ಥಿತಿ!

​ಜಮಖಂಡಿ: “ಮಕ್ಕಳನ್ನು ದೇವರ ಸಮಾನ” ಎಂದು ಕರೆಯುವ ನಾವು, ಅದೇ ಮಕ್ಕಳು ಅನುಭವಿಸುತ್ತಿರುವ ಈ ನರಕಸದೃಶ ಸ್ಥಿತಿಯನ್ನು ನೋಡಿ ಮೌನವಹಿಸಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತಿದೆ. ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಕುಡಿಯುವ ನೀರಿಲ್ಲದೆ, ತಾವು ಊಟ ಮಾಡಿದ ತಟ್ಟೆಗಳನ್ನು ಕೊಳಚೆ ನೀರಿನಲ್ಲಿ ತೊಳೆಯುತ್ತಿರುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ​ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎಷ್ಟಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮುಗಿಸಿದ ನಂತರ ತಟ್ಟೆ ತೊಳೆಯಲು ಕನಿಷ್ಠ…

Read More

ಬಾಗಲಕೋಟೆ: ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ, ನಾಲ್ವರು ಯುವಕರ ದುರ್ಮರಣ!

​ಬಾಗಲಕೋಟೆ-ವಿಜಯಪುರ ಹೆದ್ದಾರಿ (ಜಮಖಂಡಿ): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ​ಘಟನೆ ವಿವರ ​ಈ ದುರ್ಘಟನೆ ಬಾಗಲಕೋಟೆ-ವಿಜಯಪುರ ರಾಜ್ಯ ಹೆದ್ದಾರಿಯ (ಬಿಜಾಪುರ-ಬೆಳಗಾವಿ ಹೆದ್ದಾರಿ) ಸಿದ್ದಾಪುರ ಗ್ರಾಮದ ಸಮೀಪವಿರುವ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ 12.30ರ ಸುಮಾರಿಗೆ ನಡೆದಿದೆ. ಸಿದ್ದಾಪುರ ಗ್ರಾಮದ ನಾಲ್ವರು ಸ್ನೇಹಿತರು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ​ಈ ಸಂದರ್ಭದಲ್ಲಿ, ಸಕ್ಕರೆ…

Read More

ಕಬ್ಬಿನ ಗಾಡಿಗಳಿಗೆ ಬೆಂಕಿ, ಹಿಂಸಾಚಾರ: ಬಾಗಲಕೋಟೆ ಮೂರು ತಾಲ್ಲೂಕುಗಳಿಗೆ ನಿಷೇಧಾಜ್ಞೆ ವಿಸ್ತರಣೆ

🔥 ಕಬ್ಬಿನ ಗಾಡಿಗಳಿಗೆ ಬೆಂಕಿ, ಹಿಂಸಾಚಾರ: ಬಾಗಲಕೋಟೆ ಮೂರು ತಾಲ್ಲೂಕುಗಳಿಗೆ ನಿಷೇಧಾಜ್ಞೆ ವಿಸ್ತರಣೆ ಬಾಗಲಕೋಟೆ: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಪರಿಣಾಮ, ಕಬ್ಬು ಸಾಗಿಸುವ ನೂರಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ ಮತ್ತು ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ವಿಧಿಸಲಾಗಿದ್ದ ನಿಷೇಧಾಜ್ಞೆ (ಸೆಕ್ಷನ್ 144) ಯನ್ನು ಮತ್ತೆ ವಿಸ್ತರಿಸಿದೆ. ಕಳೆದ…

Read More

ಮರಿಕಟ್ಟಿ ಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನೆ: ದೇವಸ್ಥಾನ ಅಭಿವೃದ್ಧಿಗೆ ₹15 ಲಕ್ಷ ಘೋಷಣೆ

ಮುಧೋಳ:ತಾಲ್ಲೂಕಿನ ಮರಿಕಟ್ಟಿ ಗ್ರಾಮದಲ್ಲಿ ಮಂಗಳವಾರದಂದು (ಅಕ್ಟೋಬರ್ 28,) ನಡೆದ ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ ಅಬಕಾರಿ ಸಚಿವರು ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್. ಬಿ. ತಿಮ್ಮಾಪೂರ ಅವರು ಭಾಗವಹಿಸಿ, ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು. ದೇಶಭಕ್ತಿ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ಈ ಕಾರ್ಯಕ್ರಮ ನೆರವೇರಿತು. ​ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಕಿತ್ತೂರ ರಾಣಿ ಚೆನ್ನಮ್ಮ ಅವರು ಬ್ರಿಟಿಷ್ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ, ಮಹಿಳಾ ಸಬಲೀಕರಣದ ಮೂಲ ಸಿದ್ಧಾಂತವನ್ನು…

Read More

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಚಿತ್ರಭಾನುಕೋಟೆ ಗವಿಮಠ: ಸರ್ವಧರ್ಮ ಸಮನ್ವಯದ ಪವಿತ್ರ ತಾಣದಲ್ಲಿ ದಿಂಡಿ ಉತ್ಸವಕ್ಕೆ ಅದ್ಧೂರಿ ಸ್ವಾಗತ

ಮುಧೋಳ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿಯಿಂದ ಪಂಢರಪುರದತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ದಿಂಡಿಗೆ ಮುಧೋಳದ ಚಿತ್ರಭಾನುಕೋಟೆ ಗವಿಮಠದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಭಕ್ತಿ, ಭಾವೈಕ್ಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಈ ಮಠವು ಎಲ್ಲ ಧರ್ಮಗಳ ಸಮನ್ವಯದ ಜೀವಂತ ಪ್ರತೀಕವಾಗಿ ಹೊರಹೊಮ್ಮಿದೆ. ಭಾವೈಕ್ಯತೆಯ ಕೇಂದ್ರ: ಸಜೀವ ವೃಂದಾವನ & ಗದ್ದುಗೆಈ ಮಠದ ವಿಶೇಷವೆಂದರೆ, ಆವರಣದಲ್ಲಿ ಒಂದೆಡೆ ಶ್ರೀ ಗುರು ಬಾಲಭುಜಂಗ ಸ್ವಾಮಿಗಳವರ ಪವಿತ್ರ ಗದ್ದುಗೆಯಿದ್ದರೆ, ಮತ್ತೊಂದೆಡೆ ಅಜಮೀರ ಸಾಹೇಬರ ಸಜೀವ ವೃಂದಾವನವಿದೆ. ಈ ಸಹಅಸ್ತಿತ್ವವೇ ಹಿಂದೂ–ಮುಸ್ಲಿಂ…

Read More

‘ಬಾಗಲಕೋಟೆ:ನನಗೆ ಸನ್ಮಾನ ಬೇಡ, ಹಾಸ್ಟೆಲ್ ಸೀಟ್ ಕೊಡಿ’: ವೇದಿಕೆಯಲ್ಲಿ ಸಚಿವ ತಿಮ್ಮಾಪುರ ಎದುರೇ ವಿದ್ಯಾರ್ಥಿನಿ ಆಕ್ರೋಶ

ಬಾಗಲಕೋಟೆ: ಪರೀಕ್ಷೆಯಲ್ಲಿ ಶೇ.88 ಅಂಕ ಗಳಿಸಿದ್ದರೂ ಹಾಸ್ಟೆಲ್‌ನಲ್ಲಿ ಸೀಟ್ ಸಿಗದೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು, ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವ ಆರ್‌.ಬಿ. ತಿಮ್ಮಾಪುರ ಅವರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಸಚಿವರಿಗಾಗಿಯೇ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಈ ನೇರ ವಾಗ್ದಾಳಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಘಟನೆಯ ವಿವರಸ್ಥಳೀಯ ಸಂಸ್ಥೆಯೊಂದು ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ, ವಿದ್ಯಾರ್ಥಿನಿ ಐಶ್ವರ್ಯಾ ತನ್ನ ಅಳಲನ್ನು ತೋಡಿಕೊಂಡಳು. ವೇದಿಕೆಯಲ್ಲಿ ಮಾತನಾಡಿದ ಆಕೆ, ಹಾಸ್ಟೆಲ್ ಸೀಟ್‌ಗಾಗಿ ಅಧಿಕಾರಿಗಳು ಮತ್ತು…

Read More

ಬಾಗಲಕೋಟೆ: ಅಂಧ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿ, 15 ಜನರಿಗೆ ಗಾಯ; ಜಿಲ್ಲಾಡಳಿತದ ಮೌನವೇಕೆ?

ಬಾಗಲಕೋಟೆ: ನಗರದಲ್ಲಿ ನಿರಾತಂಕವಾಗಿ ತಿರುಗಾಡುತ್ತಿದ್ದ ಹುಚ್ಚು ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿದ್ದು, ಅಂಧ ಮಕ್ಕಳೂ ಸೇರಿದಂತೆ ಒಟ್ಟು 15 ಜನರನ್ನು ಕಚ್ಚಿ ಗಾಯಗೊಳಿಸಿದೆ. ಎಪಿಎಂಸಿ ಸಮೀಪದ ಸಜೀವಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಈ ದುರ್ಘಟನೆಗೆ ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕ್ರೂರ ದಾಳಿಯ ವಿವರಬಾಗಲಕೋಟೆಯ ಎಪಿಎಂಸಿ ಯಾರ್ಡ್‌ನಲ್ಲಿರುವ ಸಜೀವಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು…

Read More

ಬಾಗಲಕೋಟಿ:ಮಹಾಲಿಂಗಪುರದ ಮಹಾಜಾತ್ರೆ – ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಅದ್ದೂರಿ ರಥೋತ್ಸವ

ಮಹಾಲಿಂಗಪುರದ ಮಹಾಜಾತ್ರೆ – ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಅದ್ದೂರಿ ರಥೋತ್ಸವ ಮಹಾಲಿಂಗಪುರ:ಪಟ್ಟಣದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರರ ವಾರ್ಷಿಕ ಮಹಾಜಾತ್ರೆಯ ರಥೋತ್ಸವ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು. ಸಾಂಪ್ರದಾಯಿಕ ಶೈಲಿಯಲ್ಲಿ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದ ರಥಕ್ಕೆ ಶ್ರೀಮಠದ ಪೀಠಾಧಿಪತಿ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಯವರ ಪೂಜೆಯೊಂದಿಗೆ ಸಂಜೆ 7.45ಕ್ಕೆ ಚಾಲನೆ ದೊರೆಯಿತು. ಹರಿವಾನ ಕಟ್ಟೆ ಲೂಟಿ – ಭಕ್ತರ ಹರ್ಷೋದ್ಘಾರ ರಥೋತ್ಸವಕ್ಕೂ ಮುನ್ನ ಸಂಪ್ರದಾಯಬದ್ಧ ಹರಿವಾನ ಕಟ್ಟೆ ಲೂಟಿ ಭಕ್ತರಲ್ಲಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು….

Read More