‘ಮೈ ಪಬ್ಲಿಕ್ ಸಮಾಚಾರ’ ವಿಶೇಷ ವರದಿ ಪರಿಣಾಮ: ಕಲ್ಮೇಶ್ವರ ನಗರಕ್ಕೆ KUIDFC ಅಧಿಕಾರಿಗಳ ಭೇಟಿ, ನೀರಿನ ಗೊಂದಲಕ್ಕೆ ತೆರೆ
ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ಕಲ್ಮೇಶ್ವರ ನಗರದಲ್ಲಿ ಮಣ್ಣು ಮಿಶ್ರಿತ ನೀರು ಸರಬರಾಜಾಗುತ್ತಿರುವ ಕುರಿತು ‘ಮೈ ಪಬ್ಲಿಕ್ ಸಮಾಚಾರ’ ಸುದ್ದಿ ಸಂಸ್ಥೆಯು ರವಿವಾರ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು. ಸಾರ್ವಜನಿಕರ ಸಮಸ್ಯೆಯನ್ನು ಬಿಂಬಿಸಿದ ಈ ಸುದ್ದಿಗೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಿದೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ KUIDFC ಇಲಾಖೆಯ ಅಧಿಕ್ಷಕ ಅಭಿಯಂತರರಾದ ಸವಿತಾ ಕಟಿಗೆಣ್ಣವರ ಹಾಗೂ ಅವರ ತಾಂತ್ರಿಕ ತಂಡವು ಸೋಮವಾರ ಕಲ್ಮೇಶ್ವರ ನಗರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸ್ಥಳದಲ್ಲೇ ನಿಂತು ಸ್ವಚ್ಛವಾದ ನೀರು ಸರಬರಾಜಾಗುವಂತೆ ಕ್ರಮ…

