ರಸ್ತೆ ದುರಸ್ತಿ ವಿಳಂಬ: ಗ್ರಾಮಸ್ಥರಿಂದ ಪಂಚಾಯಿತಿ ಕಚೇರಿಗೆ ಮುಳ್ಳುಬೇಲಿ ಪ್ರತಿಭಟನೆ
ಮುಧೋಳ: ತಾಲೂಕಿನ ವಜ್ಜರಮಟ್ಟಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳುಬೇಲಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ ಬಸ್ ನಿಲ್ದಾಣದಿಂದ ಬಸವ ನಗರ ಹಾಗೂ ರೈತರ ಜಮೀನುಗಳಿಗೆ ತೆರಳುವ ರಸ್ತೆಯ ದುರವಸ್ಥೆಯ ಕುರಿತು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಪಂಚಾಯಿತಿ ಆಡಳಿತ ಮಂಡಳಿ ಸ್ಪಂದಿಸದಿರುವುದು ಈ ಪ್ರತಿಭಟನೆಗೆ ಕಾರಣವಾಗಿದೆ. ಬಸವನಗರ ನಿವಾಸಿಗಳು ಮತ್ತು ರೈತರು ಸೇರಿದಂತೆ ಗ್ರಾಮಸ್ಥರು ರಸ್ತೆ ಸುಧಾರಣೆಗಾಗಿ ನಿರಂತರವಾಗಿ ಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗೆ ಮನವಿ ಮಾಡುತ್ತಾ ಬಂದಿದ್ದಾರೆ….

