ಕನ್ನಡದ ಏಕೀಕರಣಕ್ಕೆ ಶ್ರಮಿಸಿದ ಪಂ. ಚಂದ್ರಶೇಖರ ಶಾಸ್ತ್ರೀ: ಡಾ. ಜಿನದತ್ತ ಹಡಗಲಿ
ಧಾರವಾಡ: ಪಂ. ಚಂದ್ರಶೇಖರ ಶಾಸ್ತ್ರೀಗಳು ಸಂಸ್ಕೃತದ ಪ್ರಕಾಂಡ ಪಂಡಿತರಾಗಿದ್ದರೂ, ಕನ್ನಡ ನಾಡು-ನುಡಿಯು ಅವರ ಜೀವನದ ಉಸಿರಾಗಿತ್ತು. ಕನ್ನಡದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಹಾರಿಸಿದ ಅವರನ್ನು ‘ವ್ಯಾಕರಣತೀರ್ಥ’ ಮತ್ತು ‘ವಿದ್ಯಾವಾರಿಧಿ’ ಎಂಬ ಬಿರುದುಗಳಿಂದ ಗೌರವಿಸಲಾಗಿತ್ತು ಎಂದು ಕ.ವಿ.ವಿ. ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು. ಅವರು ಶನಿವಾರದಂದು, ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು, ವ್ಯಾಕರಣ ತೀರ್ಥ ಪಂ. ಚಂದ್ರಶೇಖರ ಶಾಸ್ತ್ರೀಗಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಂದ್ರಶೇಖರ ಶಾಸ್ತ್ರೀಗಳ ಬದುಕು-ಬರಹ’ ವಿಷಯ ಕುರಿತು ಮಾತನಾಡುತ್ತಿದ್ದರು….

