ಸಚಿವ ಸಂತೋಷ ಲಾಡ್ ಅವರಿಂದ ಮಾನವೀಯ ಸ್ಪಂದನೆ: ಮೃತ ವಿದ್ಯಾರ್ಥಿ ಕುಟುಂಬಕ್ಕೆ ₹೧ ಲಕ್ಷ ನೆರವು
ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬಾವಿಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಕಾಲೇಜು ವಿದ್ಯಾರ್ಥಿ ನಾಗರಾಜ ಬಸಪ್ಪ ಬಾರಕೇರ ಅವರ ದುಃಖಿತ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸಂತೋಷ ಲಾಡ್ ಅವರು ತಮ್ಮ ‘ಸಂತೋಷ ಲಾಡ್ ಫೌಂಡೇಶನ್’ ವತಿಯಿಂದ ಒಂದು ಲಕ್ಷ ರೂಪಾಯಿ (₹1,00,000) ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಾಲ್ಕು ದಿನಗಳ ಹಿಂದೆ ಸಂಭವಿಸಿದ್ದ ಈ ದುಃಖಕರ ಘಟನೆಯು ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಯನ್ನು ನೋಡಿದ…

