ಸಚಿವ ಸಂತೋಷ ಲಾಡ್ ಅವರಿಂದ ಮಾನವೀಯ ಸ್ಪಂದನೆ: ಮೃತ ವಿದ್ಯಾರ್ಥಿ ಕುಟುಂಬಕ್ಕೆ ₹೧ ಲಕ್ಷ ನೆರವು

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬಾವಿಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಕಾಲೇಜು ವಿದ್ಯಾರ್ಥಿ ನಾಗರಾಜ ಬಸಪ್ಪ ಬಾರಕೇರ ಅವರ ದುಃಖಿತ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸಂತೋಷ ಲಾಡ್ ಅವರು ತಮ್ಮ ‘ಸಂತೋಷ ಲಾಡ್ ಫೌಂಡೇಶನ್’ ವತಿಯಿಂದ ಒಂದು ಲಕ್ಷ ರೂಪಾಯಿ (₹1,00,000) ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಾಲ್ಕು ದಿನಗಳ ಹಿಂದೆ ಸಂಭವಿಸಿದ್ದ ಈ ದುಃಖಕರ ಘಟನೆಯು ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಯನ್ನು ನೋಡಿದ…

Read More

ಕೃಷಿಕ ಸಮಾಜ ಕಟ್ಟಡಕ್ಕೆ ಶಾಸಕರ ಅನುದಾನದಿಂದ 10 ಲಕ್ಷ ರೂ. ಹೆಚ್ಚುವರಿ ನೆರವು: ಎನ್. ಎಚ್. ಕೋನರಡ್ಡಿ

ನವಲಗುಂದ: ಕೃಷಿಕ ಸಮಾಜದ ಕಟ್ಟಡ ನಿವೇಶನ ಖರೀದಿಗೆ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕು ಘಟಕಗಳಿಗೆ ಕೃಷಿಕ ಸಮಾಜದಿಂದ ಒಟ್ಟು 20 ಲಕ್ಷ ರೂ.ಗಳನ್ನು ನೀಡಲಾಗಿದೆ. ನಿವೇಶನ ಖರೀದಿಗೆ ಹಣದ ಕೊರತೆ ಆಗುತ್ತಿದ್ದರೂ, ಶಾಸಕರ ಅನುದಾನದಿಂದ ಹೆಚ್ಚುವರಿಯಾಗಿ 10 ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಪ್ರಕಟಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಘಟಕಗಳಿಗೆ ನಿವೇಶನ ತೆಗೆದುಕೊಳ್ಳಲು 20 ಲಕ್ಷ ರೂಪಾಯಿಗಳ…

Read More

ಎಐಸಿಸಿ ಕೋ ಆರ್ಡಿನೇಟರ್ ಶಿವಾನಂದ ಪಾಚಂಗಿ ಅವರಿಗೆ ಶಾಸಕ ಕೋನರಡ್ಡಿ ಸನ್ಮಾನ

​ನವಲಗುಂದ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ನ್ಯಾಷನಲ್ ಸೋಷಿಯಲ್ ಡೆಮಾಕ್ರಟಿಕ್ ಅಲಾಯನ್ಸ್‌ (National Social Democratic Alliance – NSDA) ನ ಕೋ ಆರ್ಡಿನೇಟರ್‌ ಆಗಿ ನೇಮಕಗೊಂಡಿರುವ ಶ್ರೀ ಶಿವಾನಂದ ಪಾಚಂಗಿ ಅವರನ್ನು ನವಲಗುಂದ ಶಾಸಕರಾದ ಮಾನ್ಯ ಶ್ರೀ ಎನ್.ಎಚ್. ಕೋನರಡ್ಡಿಯವರು ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ​ಶಿವಾನಂದ ಪಾಚಂಗಿ ಅವರು ಕಳೆದ ನಾಲ್ಕು ದಶಕಗಳಿಂದ ಪಕ್ಷದ ಹಿರಿಯ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ….

Read More

ಶ್ರೀ ಸಿದ್ಧಾರೂಢ ಸೇವಾ ಟ್ರಸ್ಟ್ ಉಪಸಮಿತಿಗಳ ರಚನೆ ನೂತನ ಮಠ ಕಟ್ಟಡ ನಿರ್ಮಾಣಕ್ಕೆ ಭಕ್ತರ ಸೇವಾ ಹಸ್ತ ಅಗತ್ಯ: ವಿದ್ಯಾನಂದಸ್ವಾಮಿಗಳ ನೇತೃತ್ವದಲ್ಲಿ ಸಭೆ

ಧಾರವಾಡ :ತಾಲೂಕು ಕಣವಿ ಹೊನ್ನಾಪೂರ ಗ್ರಾಮದ ಶ್ರೀ ಸಿದ್ಧಾರೂಢ ಸೇವಾ ಟ್ರಸ್ಟ್‌ನ ಉಪಸಮಿತಿಗಳನ್ನು ರಚಿಸುವ ಸಭೆಯನ್ನು ಕಲಘಟಗಿ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಭಾನುವಾರ (ಅ.12)ರಂದು ಆಯೋಜಿಸಲಾಯಿತು. ಈ ಸಭೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವಿದ್ಯಾನಂದಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಗಿದ್ದು, ಟ್ರಸ್ಟ್‌ನ ಕಾರ್ಯವೈಖರಿಯನ್ನು ಬಲಪಡಿಸುವ ಉದ್ದೇಶದಿಂದ ಐದು ಉಪಸಮಿತಿಗಳನ್ನು ರಚಿಸಲಾಯಿತು. ಐದು ಉಪಸಮಿತಿಗಳ ರಚನೆಸಭೆಯಲ್ಲಿ ಶ್ರೀ ಸಿದ್ಧಾರೂಢ ಸೇವಾಶ್ರಮ ನಿರ್ಮಾಣ ಸಮಿತಿ, ಯೋಜನಾ ಸಮಿತಿ, ಸಲಹಾ ಸಮಿತಿ, ಪ್ರಚಾರ ಸಮಿತಿ ಮತ್ತು ಶ್ರೀ ಸಿದ್ಧಾರೂಢಸ್ವಾಮಿ…

Read More

ಜಾಗತೀಕರಣದಿಂದ ಜೀವನ ಮೌಲ್ಯಗಳು ಬದಲಾಗುತ್ತಿವೆ: ಡಾ. ರಮೇಶ್ ಮಹಾದೇವಪ್ಪನವರ

ಹುಬ್ಬಳ್ಳಿ: ಜಾಗತೀಕರಣದಿಂದಾಗಿ ಪ್ರಸ್ತುತ ದಿನಗಳಲ್ಲಿ ಜೀವನದ ಮೌಲ್ಯಗಳು ಬದಲಾಗುತ್ತಿವೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹುಬ್ಬಳ್ಳಿ ತಾಲೂಕು ಘಟಕದ ವತಿಯಿಂದ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಾಯಿತು. ಸಂಸ್ಕೃತಿ ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯಧಾವಂತದ ಬದುಕಿನಲ್ಲಿ ನಮ್ಮ ಸಂಪ್ರದಾಯ ಸಂಸ್ಕೃತಿಗಳು ಹೊಸ ರೂಪ ಪಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುಮ್ಮನೆ ಬದುಕಿ ಹೋಗುವುದು…

Read More

ಪ್ರೊ. ಬಿ. ವಿ. ಗುಂಜೆಟ್ಟಿ ಕನ್ನಡ ಸೇವೆ ಸ್ಮರಣೀಯ: ಡಾ. ಜಿ. ಎಂ. ಹೆಗಡೆ

ಪ್ರೊ. ಬಿ. ವಿ. ಗುಂಜೆಟ್ಟಿ ಕನ್ನಡ ಸೇವೆ ಸ್ಮರಣೀಯ: ಡಾ. ಜಿ. ಎಂ. ಹೆಗಡೆ ಧಾರವಾಡ: ಪ್ರೊ. ಬಿ. ವಿ. ಗುಂಜೆಟ್ಟಿ ಅವರು ಕನ್ನಡದ ಸೇವೆಯನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಮಾಡಿದ ಅಪರೂಪದ ವ್ಯಕ್ತಿಗಳು ಎಂದು ಡಾ. ಜಿ. ಎಂ. ಹೆಗಡೆ ಅವರು ಬಣ್ಣಿಸಿದರು. ಸಮಾಜ ಜೀವನದ ಒಂದು ಭಾಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೇಯೋಭಿಲಾಷೆಗಾಗಿ ಗುಂಜೆಟ್ಟಿ ಅವರು ಸುದೀರ್ಘ ಸೇವೆಗೈದಿದ್ದಾರೆ ಎಂದು ಅವರು ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಬಿ. ವಿ….

Read More

ಮಾನಸಿಕ ಕಾಯಿಲೆಗಳಿಗೆ ನಿಖರ ಚಿಕಿತ್ಸೆ ಇದೆ; ಸ್ತ್ರೀಯರಲ್ಲಿ ಅರಿವು ಮೂಡಿಸುವುದು ಅತಿ ಅವಶ್ಯ: ಡಾ. ರೂಪಾ ಕಿಣಗಿ

ನವಲಗುಂದ: ಮಾನಸಿಕ ಕಾಯಿಲೆಗಳ ಕುರಿತು ಸ್ತ್ರೀಯರಲ್ಲಿ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಷ್ಟೋ ಜನರು ಮಾನಸಿಕ ಸಮಸ್ಯೆಗಳನ್ನು ‘ದೆವ್ವ ಹಿಡಿದಿದೆ’ ಅಥವಾ ‘ದೇವರು ಬಂದಿದೆ’ ಎಂದು ತಿಳಿದು ವೈದ್ಯರಲ್ಲಿ ಪರೀಕ್ಷಿಸದೆ, ಕಾಯಿಲೆ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಾರೆ. ಆದರೆ, ಪ್ರತಿಯೊಂದು ಮಾನಸಿಕ ಕಾಯಿಲೆಗೂ ನಿಖರವಾದ ಚಿಕಿತ್ಸೆ ಲಭ್ಯವಿದೆ ಎಂದು ಡಾ. ರೂಪಾ ಕಿಣಗಿ ಅವರು ತಿಳಿಸಿದರು. ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ…

Read More

ನವಲಗುಂದ, ಯಮನೂರದಲ್ಲಿ ಸ್ನೇಹ ಸಮ್ಮಿಲನ; ಗುರುವಿಗೆ ದೇವರು-ತಾಯಿಯ ಸ್ಥಾನ: ಶಾಸಕ ಕೋನರಡ್ಡಿ

ನವಲಗುಂದ: ಪ್ರಪಂಚದಲ್ಲಿ ದೇವರು ಮತ್ತು ತಾಯಿಯ ನಂತರದ ಅತ್ಯಂತ ಅಮೂಲ್ಯ ಸ್ಥಾನ ಗುರುವಿಗೆ ಮಾತ್ರ ಇರಲು ಸಾಧ್ಯ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರ ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2006-07ನೇ ಸಾಲಿನ 7ನೇ ತರಗತಿಯ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಳೇ ವಿದ್ಯಾರ್ಥಿಗಳು ತಮ್ಮ ವಿದ್ಯಾದಾನ ಮಾಡಿದ ಗುರುಗಳಿಗೆ ಪುಷ್ಪನಮನ ಸಲ್ಲಿಸಿ, ಪುಷ್ಪದಿಂದಲೇ ವೇದಿಕೆಯವರೆಗೆ…

Read More

ಖ್ಯಾತ ಉದ್ಯಮಿ ಸಿದ್ಧರಾಮ ಹಾಲಳ್ಳಿ ನಿಧನ

ಧಾರವಾಡ: ನಗರದ ಮದಿಹಾಳದಲ್ಲಿರುವ ಸಿದ್ಧರಾಮೇಶ್ವರ ಕಾಲನಿಯ ನಿವಾಸಿಯಾಗಿರುವ ಹಾಗೂ ಖ್ಯಾತ ಇಲೆಕ್ಟ್ರಿಕ್ ಉದ್ಯಮಿಯಾಗಿರುವ ಶ್ರೀ ಸಿದ್ಧರಾಮ ಎಸ್. ಹಾಲಳ್ಳಿ (63) ಅವರು ರವಿವಾದಂದು ನಿಧನರಾಗಿದ್ದಾರೆ. ತಮ್ಮ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದ ಸಿದ್ಧರಾಮ ಹಾಲಳ್ಳಿ ಅವರ ಅಕಾಲಿಕ ನಿಧನದಿಂದ ಕುಟುಂಬ, ಬಂಧುಗಳು ಮತ್ತು ಉದ್ಯಮ ವಲಯದಲ್ಲಿ ದುಃಖದ ವಾತಾವರಣ ಉಂಟಾಗಿದೆ. ಮೃತರು ಪತ್ನಿ ಮತ್ತು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (ರವಿವಾರ) ಸಂಜೆ 05 ಗಂಟೆಗೆ ಧಾರವಾಡದ ಮುರುಘಾಮಠದ…

Read More

‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನಕ್ಕೆ ನವಲಗುಂದದಲ್ಲಿ ಶಾಸಕ ಎನ್ ಎಚ್ ಕೋನರಡ್ಡಿ ಚಾಲನೆ: “ಪ್ರಜಾಪ್ರಭುತ್ವ ಉಳಿಸಿ” ಎಂದು ಕರೆ

‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನಕ್ಕೆ ನವಲಗುಂದದಲ್ಲಿ ಕೋನರಡ್ಡಿ ಚಾಲನೆ: “ಪ್ರಜಾಪ್ರಭುತ್ವ ಉಳಿಸಿ” ಎಂದು ಕರೆ ನವಲಗುಂದ: ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ನಡೆದ ಮತ ಕಳ್ಳತನದ ಆರೋಪವನ್ನು ದೇಶಾದ್ಯಂತ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ‘ವೋಟ್ ಚೋರ್, ಗದ್ದಿ ಛೋಡ್’ (ವೋಟ್ ಕದ್ದವರೇ, ಅಧಿಕಾರ ಬಿಡಿ) ಎಂಬ ವಿನೂತನ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಎನ್. ಹೆಚ್. ಕೋನರಡ್ಡಿ…

Read More