‘ಸಂಸ್ಕಾರ-ಸಂಸ್ಕೃತಿ ಬದುಕಿಗೆ ಆಧಾರ, ಕಾನೂನು ಅರಿವು ಅಗತ್ಯ’: ಸರ್ಕಾರಿ ಕಾಲೇಜಿನಲ್ಲಿ ‘ಮಹಿಳಾ ವೇದಿಕೆ-ನಕ್ಷತ್ರ’ ಉದ್ಘಾಟನೆ
ಧಾರವಾಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 2025-26 ನೇ ಸಾಲಿನ ‘ಮಹಿಳಾ ವೇದಿಕೆ-ನಕ್ಷತ್ರ’ ವತಿಯಿಂದ ಉದ್ಘಾಟನಾ ಸಮಾರಂಭ ಹಾಗೂ “ಕಾನೂನು ಅರಿವು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕರಾದ ಡಾ. ಜ್ಯೋತಿರ್ಲಿಂಗ ಚಂದ್ರಮ ಹೊನಕಟ್ಟಿ ಅವರು, ಜಾನಪದದ ಸೊಗಡಿನ ಮೂಲಕ ಮಹಿಳೆಯರನ್ನು ಭಾವನಾತ್ಮಕವಾಗಿ ತಲುಪಿದರು. “ತವರೂರ ದಾರಿಯಲ್ಲಿ ಕಲ್ಲಿಲ್ಲ ಮುಳ್ಳಿಲ್ಲ, ಸಾಸಿವೆಯಷ್ಟು ಮರಳಿಲ್ಲ” ಎಂಬ ಜಾನಪದ ಹಾಡಿನೊಂದಿಗೆ…

