‘ಸಂಸ್ಕಾರ-ಸಂಸ್ಕೃತಿ ಬದುಕಿಗೆ ಆಧಾರ, ಕಾನೂನು ಅರಿವು ಅಗತ್ಯ’: ಸರ್ಕಾರಿ ಕಾಲೇಜಿನಲ್ಲಿ ‘ಮಹಿಳಾ ವೇದಿಕೆ-ನಕ್ಷತ್ರ’ ಉದ್ಘಾಟನೆ

ಧಾರವಾಡ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 2025-26 ನೇ ಸಾಲಿನ ‘ಮಹಿಳಾ ವೇದಿಕೆ-ನಕ್ಷತ್ರ’ ವತಿಯಿಂದ ಉದ್ಘಾಟನಾ ಸಮಾರಂಭ ಹಾಗೂ “ಕಾನೂನು ಅರಿವು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕರಾದ ಡಾ. ಜ್ಯೋತಿರ್ಲಿಂಗ ಚಂದ್ರಮ ಹೊನಕಟ್ಟಿ ಅವರು, ಜಾನಪದದ ಸೊಗಡಿನ ಮೂಲಕ ಮಹಿಳೆಯರನ್ನು ಭಾವನಾತ್ಮಕವಾಗಿ ತಲುಪಿದರು. “ತವರೂರ ದಾರಿಯಲ್ಲಿ ಕಲ್ಲಿಲ್ಲ ಮುಳ್ಳಿಲ್ಲ, ಸಾಸಿವೆಯಷ್ಟು ಮರಳಿಲ್ಲ” ಎಂಬ ಜಾನಪದ ಹಾಡಿನೊಂದಿಗೆ…

Read More

ಧಾರವಾಡ ಬೆಳೆ ಹಾನಿಗೆ ₹60 ಕೋಟಿ ಹೆಚ್ಚುವರಿ ಅನುದಾನ: ಒಟ್ಟು 80 ಕೋಟಿ ಪರಿಹಾರ ಜಮೆಗೆ ಶಾಸಕ ಕೋನರಡ್ಡಿ ಹರ್ಷ

ನವಲಗುಂದ: ಧಾರವಾಡ ಜಿಲ್ಲೆಯಲ್ಲಿ 2025ರ ಮುಂಗಾರು ಅವಧಿಯಲ್ಲಿ ಸುರಿದ ಅತೀವೃಷ್ಟಿಯಿಂದ ಸಂಭವಿಸಿದ ಬೃಹತ್ ಪ್ರಮಾಣದ ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರವು ಹೆಚ್ಚುವರಿಯಾಗಿ ರೂ. 60.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹೊಸ ಅನುದಾನದೊಂದಿಗೆ, ರೈತರ ಖಾತೆಗಳಿಗೆ ಒಟ್ಟು ರೂ. 80.00 ಕೋಟಿ ಪರಿಹಾರ ಜಮಾ ಆಗಲಿದೆ ಎಂದು ಸ್ಥಳೀಯ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ಶುಕ್ರವಾರ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಒಟ್ಟು 97,629.64 ಹೆಕ್ಟೇರ್ ಪ್ರದೇಶದಲ್ಲಿ…

Read More

ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ‘ಅಕ್ರಮ’: ಸರ್ಕಾರದ ವಿರುದ್ಧ ರಮೇಶ ಕೋಲಕಾರ ಆರೋಪ

ನವಲಗುಂದ: ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ರಾಜ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅಕ್ರಮ ಎಸಗಿದೆ ಎಂದು ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ ರಮೇಶ ಕೋಲಕಾರ (ಬೆಳಹಾರ, ನವಲಗುಂದ) ಗಂಭೀರವಾಗಿ ಆರೋಪಿಸಿದ್ದಾರೆ. ನೇಮಕಾತಿ ಸಂಪೂರ್ಣ ರಹಸ್ಯ: ಸುಪ್ರೀಂ ನಿರ್ದೇಶನ ಉಲ್ಲಂಘನೆಮಾಹಿತಿ ಆಯುಕ್ತರ ನೇಮಕಾತಿಗಾಗಿ ಒಟ್ಟು 109 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ರಹಸ್ಯವಾಗಿರಿಸಿ, ಸುಪ್ರೀಂ ಕೋರ್ಟ್‌ನ (ಮಿಸ್ಟೇನಿಯಸ್ ಅಪ್ಲಿಕೇಶನ್ ಸಂಖ್ಯೆ: 1779…

Read More

ನವಲಗುಂದ:ಭಕ್ತಿ ಭಾವದ ಪಂಡರಪುರದ ಡಿಂಡಿಯಾತ್ರೆ*

ನವಲಗುಂದ : ಆಧ್ಯಾತ್ಮಿಕ ಭಾವದ ಮಧ್ಯೆ, ಭಕ್ತಿಯಿಂದ ಸಾಗುತ್ತಿರುವ ಪಂಢರಪುರ ದಿಂಡಿ ಯಾತ್ರೆ 13 ಅಕ್ಟೋಬರ್ 2025ರ ಸೋಮವಾರ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಅಳಗವಾಡಿ ಗ್ರಾಮದಿಂದ ಪ್ರಾರಂಭವಾಗಿ ಗುರುವಾರ ಚಿತ್ರಭಾನಕೊಟ್ಟೆ ತಲುಪಿದೆ. ನವಲಗುಂದ ತಾಲೂಕಿನ ಅಳಗವಾಡಿಯಿಂದ ಪ್ರಾರಂಭವಾದ ಈ ದಿಂಡಿ ಹುಣಸಿಕಟ್ಟೆ, ನರಗುಂದ, ರಾಮದುರ್ಗ ಮತ್ತು ಬಟಕುರ್ಕಿ ಮಾರ್ಗವಾಗಿ ಭಕ್ತಿಯ ನಾದದ ಮಧ್ಯೆ ಚಿತ್ರಭಾನಕೊಟ್ಟೆ ತಲುಪಿದೆ. ಭಕ್ತರು ಭಜನೆ, ಕೀರ್ತನೆ ಮತ್ತು ದೇವನಾಮ ಸ್ಮರಣೆಯಲ್ಲಿ ತೊಡಗಿ ದಿಂಡಿಯನ್ನು ಪವಿತ್ರ ಯಾತ್ರೆಯಾಗಿ ಪರಿವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ಏಕಾದಶಿಯ…

Read More

ನವಲಗುಂದ: ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ನೌಕರರಿಗೆ ನೃತ್ಯ ಸ್ಪರ್ಧೆ

ನವಲಗುಂದ: ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಗುಂಪು ಜನಪದ ಮತ್ತು ಕನ್ನಡ ಗೀತೆಗಳ ನೃತ್ಯ ಸ್ಪರ್ಧೆ ನವೆಂಬರ್ 8 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಕಬ್ಬನ್ ಉದ್ಯಾನವನದಲ್ಲಿರುವ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಡಿ. ರಂಗಣ್ಣವರವರು ತಿಳಿಸಿದ್ದಾರೆ. ಈ ಸ್ಪರ್ಧೆ ರಾಜ್ಯದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗಾಗಿ ಆಯೋಜಿಸಲಾಗಿದೆ. ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನಿಂದ…

Read More

ಕಬಡ್ಡಿ ಕ್ರೀಡಾಕೂಟ: ಧಾರವಾಡ ಜಿಲ್ಲಾ ಮಟ್ಟದ ಸ್ಪರ್ಧೆ – ಶಲವಡಿಯಲ್ಲಿ ವಿದ್ಯಾರ್ಥಿಗಳ ಜಿದ್ದಾಜಿದ್ದಿ

ಕಬಡ್ಡಿ ಕ್ರೀಡಾಕೂಟ: ಧಾರವಾಡ ಜಿಲ್ಲಾ ಮಟ್ಟದ ಸ್ಪರ್ಧೆ – ಶಲವಡಿಯಲ್ಲಿ ವಿದ್ಯಾರ್ಥಿಗಳ ಜಿದ್ದಾಜಿದ್ದಿ ನವಲಗುಂದ: ಧಾರವಾಡ ಜಿಲ್ಲೆಯ ಎಲ್ಲ ತಾಲ್ಲೂಕುಗಳ 14 ಹಾಗೂ 17 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟವು ನವಲಗುಂದ ಸಮೀಪದ ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ತಮ್ಮ ಕೌಶಲ್ಯ ಪ್ರದರ್ಶಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಉದ್ಘಾಟನೆಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾಜಬೇಗಂ ಎಚ್. ಯಾವಗಲ್ ಅವರು ವಿದ್ಯಾರ್ಥಿಗಳಿಂದ…

Read More

ನಿರುದ್ಯೋಗ ಗಂಭೀರ ಸಮಸ್ಯೆ, ಯುವಕರ ಆತ್ಮಹತ್ಯೆ ಗಮನಿಸಿ; ಆರ್.ಎಸ್.ಎಸ್. ನಿಷೇಧ ಸಂವಿಧಾನಕ್ಕೆ ವಿರುದ್ಧ: ನ್ಯಾ. ಸಂತೋಷ್ ಹೆಗಡೆ

ಧಾರವಾಡ: ನಿರುದ್ಯೋಗವು ಕೇವಲ ಕರ್ನಾಟಕಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಇದು ಬಹಳ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಯುವಕರಿಗೆ ಸಿಗಬೇಕಾದ ಕೆಲಸಗಳು ಸಿಗುತ್ತಿಲ್ಲ. ಈ ವಿಷಯವನ್ನು ಅಧಿಕಾರದಲ್ಲಿ ಇರುವವರು ಗಮನಕ್ಕೆ ತೆಗೆದುಕೊಂಡು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯುವಕರ ಪರಿಸ್ಥಿತಿಗೆ ಸ್ಪಂದಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರು ಒತ್ತಾಯಿಸಿದರು. ಶುಕ್ರವಾರದಂದು ಧಾರವಾಡಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ಕುರಿತು ಹೋರಾಟ ಮಾಡುವ ಅವಶ್ಯಕತೆ ಇದೆ ಎಂಬ…

Read More

*ಕುಂದಗೋಳ: ತಾಲ್ಲೂಕಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತಿಮ ಹಂತಕ್ಕೆ: 5-6 ದಿನದಲ್ಲಿ ‌ಬೆಳೆ ಹಾನಿ ಶೀಘ್ರವಾಗಿ ರೈತರ ಖಾತೆಗೆ ಜಮೆ,

ಕುಂದಗೋಳ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯಿಂದ ಯಾರೂ ಹೊರಗುಳಿಯಬಾರದು ಎಂದು ತಹಶೀಲ್ದಾರ್ ರಾಜು ಮಾವರಕರ ಅವರು ಮನವಿ ಮಾಡಿದ್ದಾರೆ. ಸಮೀಕ್ಷೆಯಿಂದ ಬಿಟ್ಟುಹೋದವರು ತಮ್ಮ ಹೆಸರು ನೋಂದಾಯಿಸಲು ಅಕ್ಟೋಬರ್ 18, ಶನಿವಾರ ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ, ಬೆಳೆ ಹಾನಿ ಪರಿಹಾರ ವಿತರಣೆ ಹಾಗೂ ಗ್ರಾಮ ಸಹಾಯಕರ ನೇಮಕಾತಿ ಕುರಿತು ಮಾಹಿತಿ ನೀಡಿದರು. ಶೇ. 101 ಸಾಧನೆ…

Read More

ನವಲಗುಂದ: ರೈತ ಮಹಿಳೆಯರಿಗೆ ಉಚಿತ ದೇಶಿ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ

ನವಲಗುಂದ:2025-26ನೇ ಸಾಲಿನ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ, ಬೆಂಗಳೂರು ಇವರ ವತಿಯಿಂದ ನವಲಗುಂದ ತಾಲ್ಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ವಾರದ ದೇಶಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ರೈತ ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಗಳನ್ನು ಪಡೆಯಲು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಪಶು ಆಸ್ಪತ್ರೆ, ನವಲಗುಂದ ಇಲ್ಲಿಗೆ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 30, ಸಂಜೆ 4:00…

Read More

ನವಲಗುಂದ ಗ್ರಾಮ ಸಹಾಯಕರ ಸಂಘದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

ನವಲಗುಂದ: ತಾಲೂಕಿನ ಗ್ರಾಮ ಸಹಾಯಕರುಗಳ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಗುರುವಾರದಂದು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಧಾರವಾಡ ಜಿಲ್ಲಾಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳ ಪುನರ್ರಚನೆ ಪ್ರಕ್ರಿಯೆ ನಡೆಯಿತು. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಶರಣಪ್ಪ ವಾಲಿಕರ ಅವರು, ನವಲಗುಂದ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಕೆ.ಎಂ. ಸೈಯದಅಲ್ಲಿ, ಅಧ್ಯಕ್ಷರಾಗಿ ಕೆ.ಎಚ್. ಮರಿನಾಯ್ಕರ, ಕಾರ್ಯದರ್ಶಿಯಾಗಿ ಎಂ.ಡಿ. ಲದ್ದಿಗಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಉಪಾಧ್ಯಕ್ಷರಾಗಿ ಎಂ.ವಿ. ಬೆಳ್ಳಿಕಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ…

Read More