ಗುಡಗೇರಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟಕ್ಕೆ ಬ್ರೇಕ್: 3 ದಿನಗಳಲ್ಲಿ 5 ಪ್ರಕರಣ, 29 ಜನರ ಬಂಧನ, ₹24,295 ನಗದು ಜಪ್ತಿ

ಪಬ್ಲಿಕ್ ‌ಸಮಾಚಾರ ಗುಡಗೇರಿ (ಕುಂದಗೋಳ): ಕುಂದಗೋಳ ತಾಲ್ಲೂಕಿನ ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟದ ವಿರುದ್ಧ ಪೊಲೀಸ್ ಇಲಾಖೆ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಅಕ್ಟೋಬರ್ 21 ರಿಂದ 23, 2025ರವರೆಗೆ ಕೇವಲ ಮೂರು ದಿನಗಳ ಅವಧಿಯಲ್ಲಿ ಐದು ಪ್ರತ್ಯೇಕ ದಾಳಿಗಳನ್ನು ನಡೆಸಿ, ಜೂಜಾಟದ ಜಾಲವನ್ನು ಭೇದಿಸಿದೆ. ಈ ಕಾರ್ಯಾಚರಣೆಗಳ ಮೂಲಕ ಒಟ್ಟು 29 ಜನರ ಮೇಲೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ವರದಿಯಾದಂತೆ, ಒಬ್ಬ ಆರೋಪಿಯು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾನೆ….

Read More

ಡಿಸೆಂಬರ್ 7ರಂದು ನವಲಗುಂದದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ: ಪುತ್ರನ ಮದುವೆ ಅದೇ ವೇದಿಕೆಯಲ್ಲಿ ನೆರವೇರಿಸಲಿರುವ ಶಾಸಕ ಕೋನರಡ್ಡಿ

ಪಬ್ಲಿಕ್ ಸಮಾಚಾರ ನವಲಗುಂದ: ದೀಪಾವಳಿ ಹಬ್ಬದ ಪ್ರಯುಕ್ತ ನವಲಗುಂದದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿಯವರು ತಮ್ಮ ಕುಟುಂಬದೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿಯವರು, ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಹರುಷವನ್ನು ತರಲಿ. ನಾಡಿನೆಲ್ಲೆಡೆ ಉತ್ತಮ ಬೆಳೆಗಳಾಗಿ, ರೈತರ ಬಾಳು ಸಮೃದ್ಧಿ ನೀಡಲಿ ಎಂದು ಶುಭಹಾರೈಸಿದರು. ಪುತ್ರನ ವಿವಾಹವೂ ಸಾಮೂಹಿಕ ಕಲ್ಯಾಣದಲ್ಲಿ:ಇದೇ ಸಂದರ್ಭದಲ್ಲಿ ಪ್ರಮುಖ ವಿಷಯವನ್ನು ಪ್ರಕಟಿಸಿದ ಅವರು, ಬರುವ ಡಿಸೆಂಬರ್ ೭…

Read More

ರಾಣಿ ಚನ್ನಮ್ಮ ಅಂಚೆ ಚೀಟಿ ಬಿಡುಗಡೆ: ಕೇಂದ್ರದ ನಿರ್ಧಾರಕ್ಕೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಂತಸ

ನವಲಗುಂದ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಸರ್ಕಾರವು ಶುಕ್ರವಾರ (ನಾಳೆ) ‘ಅಂಚೆ ಚೀಟಿ’ ಬಿಡುಗಡೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಹೆಮ್ಮೆಯ ಮಗಳು. ಪ್ರತಿಯೊಬ್ಬ ಕನ್ನಡಿಗರೂ ಧನ್ಯತೆಯ ಭಾವದಿಂದ ಸ್ಮರಿಸುವ ಚನ್ನಮ್ಮನ ಅಂಚೆ…

Read More

ನವಲಗುಂದ: ಗಂಗೇ ಬಸವಣ್ಣ ರಥೋತ್ಸವ ಭಕ್ತಸಮೂಹದಲ್ಲಿ ದೀಪಾವಳಿ ಪಾಡ್ಯದಿನ ಉತ್ಸವ

ನವಲಗುಂದ: ಪಟ್ಟಣದ ದೇಸಾಯಿ ಪೇಟೆಯ ಶ್ರೀ ಗಂಗೇ ಬಸವೇಶ್ವರ ದೇವಸ್ಥಾನದ ಗಂಗೇ ಬಸವಣ್ಣ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ದೀಪಾವಳಿ ಪಾಡ್ಯದಿನವಾದ ಬುಧವಾರ ದಿವಸ ವಿಜೃಂಭಣೆಯಿಂದ ಜರುಗಿತು. ಸಕಲ ವಾದ್ಯಮೇಳದೊಂದಿಗೆ ಗಂಗೇ ಬಸವಣ್ಣ ರಥೋತ್ಸವ ದೇವಸ್ಥಾನದಿಂದ ಪ್ರಾರಂಭವಾದಂತೆ ಭಕ್ತರು ಹರ್-ಹರ್ ಮಹಾದೇವ ಜಯ ಘೋಷಗಳನ್ನು ಹಾಕಿದರು. ಡೊಳ್ಳು-ಕರಡಿ ಮಜಲು ಸದಸ್ಯರಿಂದ ಭಜನೆ ನಡೆಯಿತು, ಮಹಿಳೆಯರು ಆರತಿ ಹಿಡಿದು ನಡೆದರು, ಅಲಂಕೃತ ಭವ್ಯ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವ ಗಣಪತಿ ದೇವಸ್ಥಾನ ತಲುಪಿ ಅಲ್ಲಿ…

Read More

ವೀರರಾಣಿ ಚೆನ್ನಮ್ಮ ಸ್ಮರಣೆ ಅಜರಾಮರವಾಗಬೇಕಿದೆ: ಶಾಸಕ ಎಂ.ಆರ್. ಪಾಟೀಲ್

ಕುಂದಗೋಳ: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರಂತಹ ಮಹನೀಯರ ನೆನಪನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವು ನಿರಂತರವಾಗಿ ನಡೆಯಬೇಕು. ಅಂದಾಗ ಮಾತ್ರ ಇಂತಹ ಜಯಂತ್ಯೋತ್ಸವಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಶಾಸಕ ಎಂ.ಆರ್. ಪಾಟೀಲ್ ಹೇಳಿದರು. ಇಲ್ಲಿನ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ 248ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚೆನ್ನಮ್ಮಳ ಬದುಕು ಇತಿಹಾಸದ ಕಿಚ್ಚುಚೆನ್ನಮ್ಮಳ ಬದುಕು ಅಜರಾಮರವಾಗಬೇಕಿದೆ ಎಂದು ಶ್ಲಾಘಿಸಿದ ಶಾಸಕರು, ಇತಿಹಾಸದ ಚರಿತ್ರೆ ಎಂದಿಗೂ…

Read More

ವೀರರಾಣಿ ಚೆನ್ನಮ್ಮ ಚರಿತ್ರೆ ಓದಿ ಯುವಕರು ದೇಶಾಭಿಮಾನ ಹೆಚ್ಚಿಸಿಕೊಳ್ಳಿ: ತಹಶೀಲ್ದಾರ ಸುಧೀರ ಸಾಹುಕಾರ

ನವಲಗುಂದ: ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರಂತಹ ಮಹನೀಯರ ಚರಿತ್ರೆಗಳನ್ನು ಇಂದಿನ ಯುವಕರು ಆಳವಾಗಿ ಅಧ್ಯಯನ ಮಾಡಿ, ಅದರ ಮೂಲಕ ದೇಶದ ಮೇಲಿನ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಹಶೀಲ್ದಾರ ಸುಧೀರ ಸಾಹುಕಾರ ಹೇಳಿದರು. ಅವರು ಗುರುವಾರ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮನವರ 248ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬ್ರಿಟಿಷರ ವಿರುದ್ಧದ ಕೆಚ್ಚೆದೆಯ ಹೋರಾಟ ಸ್ಮರಣೆ ವೀರರಾಣಿ ಚೆನ್ನಮ್ಮ…

Read More

ಅಡನೂರಿನಲ್ಲಿ ಶ್ರೀ ಹುಸೇನ್ ಶಾವಲಿ ಶರಣರ 57ನೇ ಉರುಸು ಜಾತ್ರಾ ಸಿದ್ಧತೆ: ಸೌಹಾರ್ದದ ಚಿಹ್ನೆಗೆ ವಿಜೃಂಭಣೆಯ ಚಾಲನೆ

ಅಣ್ಣಿಗೇರಿ: ತಾಲೂಕಿನ ಅಡನೂರ ಗ್ರಾಮದಲ್ಲಿ ಪ್ರಸಿದ್ಧ ಶ್ರೀ ಹಜರತ್ ಹುಸೇನ್ ಶಾವಲಿ ಶರಣರ 57ನೇ ವರ್ಷದ ಉರುಸು ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯು ವಿಜೃಂಭಣೆಯಿಂದ ನೆರವೇರಿತು. ಈ ಸಭೆಯ ಮೂಲಕ ಧಾರ್ಮಿಕ ಸೌಹಾರ್ದದ ಪ್ರತೀಕವಾದ ಜಾತ್ರೆಯ ಯಶಸ್ವಿ ನಿರ್ವಹಣೆಗೆ ಚಾಲನೆ ನೀಡಲಾಯಿತು. ಬುಧವಾರದಂದು ಶರಣರಾದ ಶ್ರೀ ಹಜರತ್ ಮಂಜೂರು ಹುಸೇನ್ ಶಾವಲಿ ಶರಣರು ಅವರು ಕಂಬ ಹೂಡುವ ಧಾರ್ಮಿಕ ವಿಧಿ ವಿಧಾನದ ಮೂಲಕ 57ನೇ ವರ್ಷದ ಉರುಸು ಜಾತ್ರಾ…

Read More

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ತಿರಸ್ಕರಿಸಿ ಕೇವಲ ₹3050ಕ್ಕೆ ಕಬ್ಬು ಕಟಾವು; ಹಳಿಯಾಳ ಸಕ್ಕರೆ ಕಾರ್ಖಾನೆ ಎಂಡಿ ಬಂಧನಕ್ಕೆ ರೈತ ಸಂಘಟನೆಗಳ ಆಗ್ರಹ

ಕಲಘಟಗಿ: ಕಬ್ಬು ಬೆಳೆಗಾರರ ದರ ನಿಗದಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಸಂತೋಷ ಲಾಡ್ ಅವರೇ ಖುದ್ದಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿ ಆದೇಶ ನೀಡಿದ್ದರೂ, ಹಳಿಯಾಳ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ (ಎಂಡಿ) ಆ ಆದೇಶವನ್ನು ಗಾಳಿಗೆ ತೂರಿದೆ. ಇದರಿಂದಾಗಿ ರೈತರಿಗೆ ನ್ಯಾಯ ಸಿಕ್ಕರೂ ಅದನ್ನು ಜಾರಿ ಮಾಡುವವರು ಇಲ್ಲದಂತಾಗಿ, ‘ದೇವರು ವರ ಕಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರ ಸೂಚನೆಗೂ ಬೆಲೆ ಕೊಡದೆ, ನಿರಂತರವಾಗಿ ಕಬ್ಬು ಕಟಾವು…

Read More

ಇಸ್ಪೀಟ್/ಜೂಜಾಟಕ್ಕೆ ಕಡಿವಾಣ: ಧಾರವಾಡ ಜಿಲ್ಲೆಯಲ್ಲಿ 27 ಪ್ರಕರಣ ದಾಖಲು, 45 ಆರೋಪಿಗಳ ಬಂಧನ

ಧಾರವಾಡ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಜಿಲ್ಲಾ ಪೊಲೀಸರು, ಇತ್ತೀಚೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 27 ಇಸ್ಪೀಟ್/ಜೂಜಾಟ ಪ್ರಕರಣಗಳನ್ನು ಪತ್ತೆ ಹಚ್ಚಿ, 45 ಮಂದಿ ಆರೋಪಿತರನ್ನು ಬಂಧಿಸಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಸದಾ ಸನ್ನದ್ಧವಾಗಿದ್ದು, ಅಪರಾಧ ನಿಯಂತ್ರಣಕ್ಕಾಗಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಅಧೀಕ್ಷಕರು ಶ್ರೀ ಗುಂಜನ್ ಆರ್ಯ (ಐ.ಪಿ.ಎಸ್.) ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು ಸೂಕ್ತ ಮಾಹಿತಿಯನ್ನು ಸಂಗ್ರಹಿಸಿದ ಧಾರವಾಡ ಜಿಲ್ಲಾ…

Read More

ಸರಕಾರಿ ಕರ್ತವ್ಯ ನಿರತ ಮಹಿಳಾ ಪಿಎಸ್‌ಐ ಮೇಲೆ ಭೀಕರ ಹಲ್ಲೆ; ಕೊಲೆ ಯತ್ನ, ಕಚ್ಚಿ ಗಾಯ: ಎಫ್‌ಐಆರ್ ದಾಖಲು, ಆರೋಪಿ ಬಂಧನ

ನವಲಗುಂದ: ಪೊಲೀಸ್ ಇಲಾಖೆಯ ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅ 19, ರಂದು ನವಲಗುಂದದಲ್ಲಿ ನಡೆದಿದೆ. ಆರೋಪಿಯು ಪಿಎಸ್‌ಐ ಅವರ ಹಣೆಗೆ ಬೈಕ್ ಕೀಲಿಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿ, ಬಲಗಾಲಿಗೆ ಕಚ್ಚಿ ಗಂಭೀರ ಗಾಯ ಮಾಡಿದ್ದಾನೆ ಎಂದು ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ನಲ್ಲಿ ಉಲ್ಲೇಖಿಸಲಾಗಿದೆ. ಎಫ್‌ಐಆರ್‌ನಿಂದ ತಿಳಿದು ಬಂದ ಘಟನೆ ವಿವರ:ಅ: 19, ರಂದು ಮಧ್ಯಾಹ್ನ 02:45 ಗಂಟೆ ಸುಮಾರಿಗೆ…

Read More