ಐಕ್ಯತೆ ಒಡೆಯಬಾರದು: ತಪ್ಪು ಮಾಡಿದವರನ್ನು ಸಮಾಜದ ಮುಖಂಡರೇ ತಿದ್ದಬೇಕು – ವೀರೇಂದ್ರ ಸ್ವಾಮೀಜಿ
ನವಲಗುಂದ: ಸಾರ್ವಜನಿಕ ಸ್ಥಳದಲ್ಲಿ ನಾವೆಲ್ಲರೂ ಐಕ್ಯತೆ ಮತ್ತು ಕೋಮುಸೌಹಾರ್ದತೆಯಿಂದ ಬಾಳಬೇಕು. ಯಾರು ಏನೇ ಮಾಡಿದರೂ ಈ ಐಕ್ಯತೆಯನ್ನು ಒಡೆಯಬಾರದು. ಸಮಾಜದಲ್ಲಿ ಯಾರಾದರೂ ತಪ್ಪು ಮಾಡಿದರೆ, ಅವರನ್ನು ಆಯಾ ಸಮಾಜದ ಮುಖಂಡರೇ ತಿದ್ದುವ ಕೆಲಸ ಮಾಡಬೇಕಿದೆ ಎಂದು ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ನುಡಿದರು. ಅವರು ಭಾನುವಾರ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸೀರತ್ ಅಭಿಯಾನ 2025 ರ ಅಂಗವಾಗಿ ಆಯೋಜಿಸಿದ್ದ ಸೀರತ್ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರವಾದಿ ಮಹಮದ್ ಪೈಗಂಬರ್ರವರ ಧಾರ್ಮಿಕ ಸೌಹಾರ್ದ…

