ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿಗೆ ಹಿರೇಗುಂಜಳದ ಮಾಲತೇಶ ಶ್ಯಾಗೋಟಿ ನಾಮನಿರ್ದೇಶನ!
ಧಾರವಾಡ: ಕೃಷಿ ವಿಶ್ವವಿದ್ಯಾಲಯದ (UAS) ಆಡಳಿತ ಮಂಡಳಿಗೆ (Board of Management) ಹೊಸ ಸದಸ್ಯರನ್ನು ರಾಜ್ಯಪಾಲರ ಸಚಿವಾಲಯದಿಂದ ನಾಮನಿರ್ದೇಶನ ಮಾಡಲಾಗಿದೆ. ಕುಂದಗೋಳ ತಾಲ್ಲೂಕಿನ ಹಿರೇಗುಂಜಳ ಗ್ರಾಮದ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಅವರನ್ನು ಕೃಷಿ ಕ್ಷೇತ್ರದ ತಜ್ಞರ ವಿಭಾಗದಲ್ಲಿ ಆಡಳಿತ ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ರಾಜ್ಯಪಾಲರ ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯಪಾಲರು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಥಾವರ್ಚಂದ್ ಗೆಹಲೋತ್ ಅವರು ದಿನಾಂಕ ಸೆಪ್ಟೆಂಬರ್ 26, 2025 ರಂದು ಈ ಕುರಿತು ಆದೇಶ…

