ಚಿಕ್ಕನೆರ್ತಿ ಗ್ರಾಮದ ಹೆಚ್ಚು ಆಸ್ತಿ ಹೊಂದಿದ ಯುವಕನ ಶವ ನೇಣು ಬೀಗಿದ ಸ್ಥತಿಯಲ್ಲಿ ಮನೆಯ ಅಟ್ಟದ ಕೋಣೆಯಲ್ಲಿ ಪತ್ತೆ, ನೇಣಿನ ಸ್ಥಿತಿಯಲ್ಲಿ… ಆತ್ಮಹತ್ಯೆಯೋ, ಕೋಲೋಯೋ ಎಂಬ ಸಂಶಯ?

ಕುಂದಗೋಳ: ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ತೀವ್ರ ಸಂಚಲನ ಮೂಡಿಸಿರುವ ಒಂದು ನಿಗೂಢ ಘಟನೆಯಲ್ಲಿ, ಸುಮಾರು 40 ಕ್ಕೂ ಹೆಚ್ಚು ಎಕರೆ ಆಸ್ತಿಯ ಒಡೆಯನಾಗಿದ್ದ ಯುವಕನೋರ್ವ ತನ್ನದೇ ಮನೆಯ ಮೇಲ್ಭಾಗದ ‘ಅಟ್ಟ’ದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದರೂ, ದೇಹದ ಕೆಲವು ಭಾಗಗಳಲ್ಲಿ ರಕ್ತದ ಕಲೆಗಳು ಕಂಡು ಬಂದಿರುವುದು ಈ ಪ್ರಕರಣವನ್ನು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ತೀವ್ರ ಸಂಶಯಕ್ಕೆ ದೂಡಿದೆ. ಸಂಶಾತ್ಮಕ ಸಾವಿನ ವಿವರ:ಮೃತರನ್ನು ಫಕ್ಕಿರೇಶ ಹನಮಂತಪ್ಪ ತಡಸದ ಎಂದು ಗುರುತಿಸಲಾಗಿದೆ….

Read More

ಕಾಯಿಲೆಗಳ ದುಷ್ಪರಿಣಾಮ ತಡೆಯಲು ಸಕಾಲದಲ್ಲಿ ಪರೀಕ್ಷೆ ಅಗತ್ಯ: ಡಾ. ರೂಪಾ ಕಿಣಗಿ ಸಲಹೆ

ನವಲಗುಂದ: ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಹಾಗೂ ಪಾರ್ಶ್ವವಾಯು (Stroke) ರೋಗಗಳ ಪರೀಕ್ಷೆಯನ್ನು ಸಕಾಲದಲ್ಲಿ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಸಾರ್ವಜನಿಕರು ಮುಂದಾಗಬೇಕು ಎಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೂಪಾ ಕಿಣಗಿ ಸಲಹೆ ನೀಡಿದರು. ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಬದಲಾವಣೆಯಿಂದಾಗಿ…

Read More

ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ನವಲಗುಂದ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ, ಆತನನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.) ತಾಲ್ಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಸಮಿತಿಯ ಸದಸ್ಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಕಚೇರಿಯ ಶಿರೇಸ್ತದಾರ ಗಣೇಶ ಚಳ್ಳಕೆರೆ ಹಾಗೂ ಪಿ.ಎಸ್.ಐ. ಜನಾರ್ಧನ ಭಟ್ರಳ್ಳಿ ಅವರ…

Read More

ಸಾಲಬಾಧೆಗೆ ನೊಂದ ಯುವಕ ಕೆರೆಗೆ ಬಿದ್ದು ಆತ್ಮಹತ್ಯೆ

ನವಲಗುಂದ: ಸಾಲದ ಹೊರೆ ತಾಳಲಾರದೆ ಯುವಕನೊಬ್ಬ ಗ್ರಾಮದ ಕುಡಿಯುವ ನೀರಿನ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಾಲ್ಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹಾಲಕುಸುಗಲ್ ಗ್ರಾಮದ ಮೌಲಾಸಾಬ್ ಮಕ್ತುಮಸಾಬ ಹೆಬಸೂರ (38) ಸಾವಿಗೆ ಶರಣಾದ ದುರ್ದೈವಿ. ಘಟನೆ ಹಿನ್ನೆಲೆ: ಮೃತ ಮೌಲಾಸಾಬ್ ಅವರು ಸುಮಾರು ನಾಲ್ಕು ತಿಂಗಳ ಹಿಂದೆ ಬಾಡಿಗೆಗೆ ಓಡಿಸಲು ಹುಬ್ಬಳ್ಳಿಯ ಐ.ಡಿ.ಎಫ್.ಸಿ. ಫಸ್ಟ್ ಬ್ಯಾಂಕ್‌ನಿಂದ ₹4,79,000 ಸಾಲ ಪಡೆದು, ಟಾಟಾ ಏಸ್ ಗೂಡ್ಸ್ ವಾಹನ (ಸಂಖ್ಯೆ: ಕೆ.ಎ.63.ಎ.5451) ಖರೀದಿಸಿದ್ದರು. ಆದರೆ, ವಾಹನಕ್ಕೆ ಸರಿಯಾದ…

Read More

ಹುಲ್ಲಂಬಿ ಗ್ರಾಮದಲ್ಲಿ ₹೨೦ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಘಟಗಿ: ತಾಲ್ಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರ ವಿಶೇಷ ಅನುದಾನದಡಿ ಮಂಜೂರಾದ ೨೦ ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಯಿತು. ಬಸಪ್ಪ ನಾಯ್ಕರ ಅವರ ಮನೆಯಿಂದ ಈರಪ್ಪ ವಡ್ಕಪ್ಪನವರ ಮನೆಯವರೆಗಿನ ರಸ್ತೆ ನಿರ್ಮಾಣಕ್ಕೆ ಈ ಅನುದಾನವನ್ನು ಒದಗಿಸಲಾಗಿದೆ. ಸಚಿವರ ಆಪ್ತ ಸಹಾಯಕ ಶ್ರೀ ಸೋಮಶೇಖರ ಬೆನ್ನೂರ ಅವರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ…

Read More

ಸಚಿವ ಸಂತೋಷ ಲಾಡ್ ಅವರಿಂದ ಮಾನವೀಯ ಸ್ಪಂದನೆ: ಮೃತ ವಿದ್ಯಾರ್ಥಿ ಕುಟುಂಬಕ್ಕೆ ₹೧ ಲಕ್ಷ ನೆರವು

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬಾವಿಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಕಾಲೇಜು ವಿದ್ಯಾರ್ಥಿ ನಾಗರಾಜ ಬಸಪ್ಪ ಬಾರಕೇರ ಅವರ ದುಃಖಿತ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸಂತೋಷ ಲಾಡ್ ಅವರು ತಮ್ಮ ‘ಸಂತೋಷ ಲಾಡ್ ಫೌಂಡೇಶನ್’ ವತಿಯಿಂದ ಒಂದು ಲಕ್ಷ ರೂಪಾಯಿ (₹1,00,000) ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಾಲ್ಕು ದಿನಗಳ ಹಿಂದೆ ಸಂಭವಿಸಿದ್ದ ಈ ದುಃಖಕರ ಘಟನೆಯು ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಯನ್ನು ನೋಡಿದ…

Read More

ಕೃಷಿಕ ಸಮಾಜ ಕಟ್ಟಡಕ್ಕೆ ಶಾಸಕರ ಅನುದಾನದಿಂದ 10 ಲಕ್ಷ ರೂ. ಹೆಚ್ಚುವರಿ ನೆರವು: ಎನ್. ಎಚ್. ಕೋನರಡ್ಡಿ

ನವಲಗುಂದ: ಕೃಷಿಕ ಸಮಾಜದ ಕಟ್ಟಡ ನಿವೇಶನ ಖರೀದಿಗೆ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕು ಘಟಕಗಳಿಗೆ ಕೃಷಿಕ ಸಮಾಜದಿಂದ ಒಟ್ಟು 20 ಲಕ್ಷ ರೂ.ಗಳನ್ನು ನೀಡಲಾಗಿದೆ. ನಿವೇಶನ ಖರೀದಿಗೆ ಹಣದ ಕೊರತೆ ಆಗುತ್ತಿದ್ದರೂ, ಶಾಸಕರ ಅನುದಾನದಿಂದ ಹೆಚ್ಚುವರಿಯಾಗಿ 10 ಲಕ್ಷ ರೂ.ಗಳನ್ನು ಒದಗಿಸಲಾಗುವುದು ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಪ್ರಕಟಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಘಟಕಗಳಿಗೆ ನಿವೇಶನ ತೆಗೆದುಕೊಳ್ಳಲು 20 ಲಕ್ಷ ರೂಪಾಯಿಗಳ…

Read More

ಎಐಸಿಸಿ ಕೋ ಆರ್ಡಿನೇಟರ್ ಶಿವಾನಂದ ಪಾಚಂಗಿ ಅವರಿಗೆ ಶಾಸಕ ಕೋನರಡ್ಡಿ ಸನ್ಮಾನ

​ನವಲಗುಂದ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ನ್ಯಾಷನಲ್ ಸೋಷಿಯಲ್ ಡೆಮಾಕ್ರಟಿಕ್ ಅಲಾಯನ್ಸ್‌ (National Social Democratic Alliance – NSDA) ನ ಕೋ ಆರ್ಡಿನೇಟರ್‌ ಆಗಿ ನೇಮಕಗೊಂಡಿರುವ ಶ್ರೀ ಶಿವಾನಂದ ಪಾಚಂಗಿ ಅವರನ್ನು ನವಲಗುಂದ ಶಾಸಕರಾದ ಮಾನ್ಯ ಶ್ರೀ ಎನ್.ಎಚ್. ಕೋನರಡ್ಡಿಯವರು ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ​ಶಿವಾನಂದ ಪಾಚಂಗಿ ಅವರು ಕಳೆದ ನಾಲ್ಕು ದಶಕಗಳಿಂದ ಪಕ್ಷದ ಹಿರಿಯ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ….

Read More

ಶ್ರೀ ಸಿದ್ಧಾರೂಢ ಸೇವಾ ಟ್ರಸ್ಟ್ ಉಪಸಮಿತಿಗಳ ರಚನೆ ನೂತನ ಮಠ ಕಟ್ಟಡ ನಿರ್ಮಾಣಕ್ಕೆ ಭಕ್ತರ ಸೇವಾ ಹಸ್ತ ಅಗತ್ಯ: ವಿದ್ಯಾನಂದಸ್ವಾಮಿಗಳ ನೇತೃತ್ವದಲ್ಲಿ ಸಭೆ

ಧಾರವಾಡ :ತಾಲೂಕು ಕಣವಿ ಹೊನ್ನಾಪೂರ ಗ್ರಾಮದ ಶ್ರೀ ಸಿದ್ಧಾರೂಢ ಸೇವಾ ಟ್ರಸ್ಟ್‌ನ ಉಪಸಮಿತಿಗಳನ್ನು ರಚಿಸುವ ಸಭೆಯನ್ನು ಕಲಘಟಗಿ ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಭಾನುವಾರ (ಅ.12)ರಂದು ಆಯೋಜಿಸಲಾಯಿತು. ಈ ಸಭೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವಿದ್ಯಾನಂದಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಗಿದ್ದು, ಟ್ರಸ್ಟ್‌ನ ಕಾರ್ಯವೈಖರಿಯನ್ನು ಬಲಪಡಿಸುವ ಉದ್ದೇಶದಿಂದ ಐದು ಉಪಸಮಿತಿಗಳನ್ನು ರಚಿಸಲಾಯಿತು. ಐದು ಉಪಸಮಿತಿಗಳ ರಚನೆಸಭೆಯಲ್ಲಿ ಶ್ರೀ ಸಿದ್ಧಾರೂಢ ಸೇವಾಶ್ರಮ ನಿರ್ಮಾಣ ಸಮಿತಿ, ಯೋಜನಾ ಸಮಿತಿ, ಸಲಹಾ ಸಮಿತಿ, ಪ್ರಚಾರ ಸಮಿತಿ ಮತ್ತು ಶ್ರೀ ಸಿದ್ಧಾರೂಢಸ್ವಾಮಿ…

Read More

ಜಾಗತೀಕರಣದಿಂದ ಜೀವನ ಮೌಲ್ಯಗಳು ಬದಲಾಗುತ್ತಿವೆ: ಡಾ. ರಮೇಶ್ ಮಹಾದೇವಪ್ಪನವರ

ಹುಬ್ಬಳ್ಳಿ: ಜಾಗತೀಕರಣದಿಂದಾಗಿ ಪ್ರಸ್ತುತ ದಿನಗಳಲ್ಲಿ ಜೀವನದ ಮೌಲ್ಯಗಳು ಬದಲಾಗುತ್ತಿವೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹುಬ್ಬಳ್ಳಿ ತಾಲೂಕು ಘಟಕದ ವತಿಯಿಂದ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಾಯಿತು. ಸಂಸ್ಕೃತಿ ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯಧಾವಂತದ ಬದುಕಿನಲ್ಲಿ ನಮ್ಮ ಸಂಪ್ರದಾಯ ಸಂಸ್ಕೃತಿಗಳು ಹೊಸ ರೂಪ ಪಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುಮ್ಮನೆ ಬದುಕಿ ಹೋಗುವುದು…

Read More