ಕುಂದಗೋಳ:ಬೆಳೆಸಾಲ ವಸೂಲಿಗೆ ಕಿರುಕುಳ: ಕರ್ನಾಟಕ ಬ್ಯಾಂಕ್ ಎದುರು ರೈತರ ಆಕ್ರೋಶದ ಪ್ರತಿಭಟನೆ!
ಕುಂದಗೋಳ: ರೈತರಿಗೆ ನೀಡಿರುವ ಬೆಳೆಸಾಲದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿ, ಬಡ್ಡಿ ಸಮೇತ ಅಸಲು ತುಂಬಲು ಕೋರ್ಟ್ ಮೂಲಕ ನೋಟಿಸ್ ನೀಡಿ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ ಎಂದು ಆಪಾದಿಸಿ, ರತ್ನಭಾರತ ರೈತ ಸಮಾಜ ಸಂಘಟನೆಯ ನೇತೃತ್ವದಲ್ಲಿ ರೈತರು ಇಲ್ಲಿನ ಕರ್ನಾಟಕ ಬ್ಯಾಂಕಿನ ಎದುರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಾಲದ ಮೊತ್ತ 3 ಪಟ್ಟು ಏರಿಕೆ, ಕೋರ್ಟ್ ನೋಟಿಸ್!ಬೆಳಿಗ್ಗೆ ಗಾಳಿಮರೆಮ್ಮ ದೇವಸ್ಥಾನದಿಂದ ಆಗಮಿಸಿದ ರೈತರು, ಕರ್ನಾಟಕ ಬ್ಯಾಂಕ್ನ ರೈತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ರೈತ…

