ಅಣ್ಣಿಗೇರಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಹಾಗೂ ಧಾರವಾಡ ಪ್ರಭಾರ ಡಿ.ಸಿ. ಭುವನೇಶ ಪಾಟೀಲ ಭೇಟಿ; ತುರ್ತು ಪರಿಹಾರಕ್ಕೆ ಶಾಸಕ ಸೂಚನೆ

ಅಣ್ಣಿಗೇರಿ : ಬುಧವಾರ ರಾತ್ರಿ ಅಣ್ಣಿಗೇರಿ ಪಟ್ಟಣ ಹಾಗೂ ಸುತ್ತಮುತ್ತ ಸುರಿದ ಭಾರೀ ಮತ್ತು ನಿರಂತರ ಮಳೆಯಿಂದಾಗಿ ಪಟ್ಟಣದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ತಕ್ಷಣವೇ ಪಟ್ಟಣಕ್ಕೆ ಆಗಮಿಸಿ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಲಾವೃತ ಬಡಾವಣೆಗಳಿಗೆ ಭೇಟಿ, ಪರಿಹಾರಕ್ಕೆ ಆದೇಶ ಶಾಸಕ ಕೋನರಡ್ಡಿ ಅವರು…

Read More

ಬೆಳೆ ಹಾನಿಗೆ ಸರ್ಕಾರದ ತಾರತಮ್ಯ ಕ್ರಮ ಖಂಡನೀಯ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನವಲಗುಂದ: ನಿರಂತರವಾಗಿ ಸುರಿದ ಮಳೆಯಿಂದ ರೈತರು ಬೆಳೆದ ಎಲ್ಲಾ ರೀತಿಯ ಬೆಳೆಗಳು ಹಾಳಾಗಿದ್ದರೂ, ಕೇವಲ ಹೆಸರು ಮತ್ತು ಉದ್ದಿಗೆ ಬೆಳೆಗಳಿಗೆ ಮಾತ್ರ ಪರಿಹಾರ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಅವರು ಪ್ರಕಟಣೆ ಹೊರಡಿಸಿ ಹೇಳುವಾಗ, ಇತ್ತೀಚಿನ ಅತಿವೃಷ್ಟಿಯಿಂದ ನವಲಗುಂದ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಹತ್ತಿ, ಮೆಣಸಿನಕಾಯಿ, ಗೋವಿನಜೋಳ, ಈರುಳ್ಳಿ, ಸೋಯಾಬಿನ್, ಶೇಂಗಾ, ಪೇರಲ ಸೇರಿದಂತೆ ಎಲ್ಲಾ ಪ್ರಮುಖ ಬೆಳೆಗಳು ಸಂಪೂರ್ಣ ಹಾನಿಗೊಂಡಿವೆ ಎಂದು ತಿಳಿಸಿದರು….

Read More

ಸಾಂಪ್ರದಾಯಿಕ ತಳಿ ಸಂರಕ್ಷಣೆ ಸಂಸ್ಕೃತಿ ರಕ್ಷಣೆಗೆ ಸಮ: ಡಾ. ಬಿರಾದಾರ

ಧಾರವಾಡ: ಕೃಷಿಯಲ್ಲಿ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮಾಡಿದರೆ ಅದು ನಮ್ಮ ಸಂಸ್ಕೃತಿಯನ್ನು ರಕ್ಷಿಸಿದಂತೆ. ಅಂತಹ ತಳಿಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ, ಪರಿಚಯಿಸುವ ಅಗತ್ಯವಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಹೇಳಿದರು. ಸಾಂಪ್ರದಾಯಿಕ ತಳಿಗಳ ಅಗತ್ಯತೆಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃಷಿಯಲ್ಲಿ ಸಾಂಪ್ರದಾಯಿಕ ತಳಿಗಳ ಇಂದಿನ ಅಗತ್ಯತೆ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಭಾರತವು ಇಂದು ‘ಹಸಿರು ಕ್ರಾಂತಿ’ಯ ಪರಿಣಾಮದಿಂದ…

Read More

ಧಾರವಾಡ: ‘ಶಿವಶರಣರ ಸಾಮಾಜಿಕ ಪ್ರಜ್ಞೆ’ ಕುರಿತು ಉಪನ್ಯಾಸ ಕಾರ್ಯಕ್ರಮ ನಾಳೆ

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ಎಮೆರಿಟಸ್ ಪ್ರೊಫೆಸರ್ ಸಿ. ಆರ್. ಯರವಿನತೆಲಿಮಠ ದತ್ತಿ ಅಂಗವಾಗಿ ಅಕ್ಟೋಬರ್ 10, 2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಶಿವಶರಣರ ಸಾಮಾಜಿಕ ಪ್ರಜ್ಞೆ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಉಪನ್ಯಾಸ ಮತ್ತು ಅಧ್ಯಕ್ಷತೆ ಧಾರವಾಡದ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. (ಶ್ರೀಮತಿ) ವೀಣಾ ಯಲಿಗಾರ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಕರ್ನಾಟಕ ವಿದ್ಯಾವರ್ಧಕ ಸಂಘದ…

Read More

ಹುಬ್ಬಳ್ಳಿ: ಅ. 11ರಂದು ಸುಮಧುರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಅಕ್ಟೋಬರ್ 11ರ ಶನಿವಾರ ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಕನ್ನಡ ಕವಿಗಳು ವಿರಚಿತ ಸುಮಧುರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುನಿಲ್ ಪತ್ರಿ ಹಾಗೂ ಅವರ ಸಂಗಡಿಗರು ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಉದ್ಘಾಟನೆ ಮತ್ತು ಅಧ್ಯಕ್ಷತೆ ವಿಧಾನ ಪರಿಷತ್ ಸದಸ್ಯ ಎಫ್. ಎಚ್. ಜಕ್ಕಪ್ಪನವರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರೊ. ಐ ಜಿ ಸನದಿ, ಉಪಮಹಾಪೌರರಾದ ಸಂತೋಷ ಚೌವ್ಹಾಣ್,…

Read More

ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆ ವತಿಯಿಂದ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನವಲಗುಂದದಲ್ಲಿ ಗಾಂಧಿ ಸ್ಮೃತಿ, ಜಾಥಾ

ನವಲಗುಂದ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 156ನೇ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಪುರಸಭೆ ನವಲಗುಂದ ಇವರ ಸಹಯೋಗದೊಂದಿಗೆ ಗಾಂಧಿ ಸ್ಮೃತಿ, ವ್ಯಸನಮುಕ್ತರಿಗೆ ಅಭಿನಂದನೆ ಮತ್ತು ಜಾಥಾ ಕಾರ್ಯಕ್ರಮವು ಅ.11 ಶನಿವಾರ ಮುಂಜಾನೆ 11 ಗಂಟೆಗೆ ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ಜರುಗಲಿದೆ. ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ ಮನಕವಾಡ ಗ್ರಾಮದ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ನವಲಗುಂದ…

Read More

ಧಾರವಾಡ: ಕಡಲೆ ಬೀಜ ವಿತರಣೆ 3ರಿಂದ 5 ಪ್ಯಾಕೆಟ್‌ಗೆ ಏರಿಸಬೇಕು ಕಾಂಗ್ರೆಸ್ ಕಿಸಾನ್ ಘಟಕದ ಆಗ್ರಹ

ಧಾರವಾಡ: ಕಡಲೆ ಬೀಜ ವಿತರಣೆ 3ರಿಂದ 5 ಪ್ಯಾಕೆಟ್‌ಗೆ ಏರಿಸಬೇಕು – ಕಿಸಾನ್ ಘಟಕದ ಆಗ್ರಹ ಧಾರವಾಡ: ಮುಂಬರುವ ಹಿಂಗಾರು ಹಂಗಾಮಿಗೆ ಕಡಲೆ ಬೀಜಗಳ ವಿತರಣೆಯನ್ನು ಪ್ರಸ್ತುತ ನೀಡುತ್ತಿರುವ ಮೂರು ಪ್ಯಾಕೆಟ್‌ಗಳಿಂದ ಐದು ಪ್ಯಾಕೆಟ್‌ಗಳಿಗೆ ಏರಿಸಬೇಕು ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ (ಕಿಸಾನ್ ಘಟಕ) ತೀವ್ರವಾಗಿ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ರೈತ ಸಂಪರ್ಕ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಘಟಕ ಎಚ್ಚರಿಕೆ ನೀಡಿದೆ. ​ಈ ಕುರಿತು ಕಿಸಾನ್ ಘಟಕದ ಜಿಲ್ಲಾಧ್ಯಕ್ಷರಾದ ರಮೇಶ ಮ. ಕೊಪ್ಪದ…

Read More

ಮಹಾನ್ ಗ್ರಂಥ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ: ಎಚ್.ಎಸ್. ಲಕ್ಷ್ಮೇಶ್ವರ

ಕುಂದಗೋಳ: ಮಹರ್ಷಿ ವಾಲ್ಮೀಕಿಯವರು ವಿಶ್ವ ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥ ಕಾವ್ಯವನ್ನು ರಚಿಸಿಕೊಟ್ಟ ಅಪರೂಪದ ಸಾಹಿತಿ ಎಂದು ಗ್ರಾಮ ಪಂಚಾಯತಿ ಸದಸ್ಯ ಎಚ್.ಎಸ್. ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು. ​ ತಾಲೂಕಿನ ಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ (ಮಂಗಳವಾರ) ವಿಶ್ವ ಪ್ರಸಿದ್ಧ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ​ಜ್ಞಾನ ಶಿಕ್ಷಣದ ಕೊಡುಗೆ: ​ಶ್ರೀ ಮಹರ್ಷಿ ವಾಲ್ಮೀಕಿಯವರು ನೀಡಿದ ಜ್ಞಾನ…

Read More

ಬದುಕಿನ ಶ್ರೇಷ್ಠತೆ ತಿಳಿಸಿಕೊಟ್ಟ ಆದಿಕವಿ ಮಹರ್ಷಿ ವಾಲ್ಮೀಕಿ: ಶ್ರೀಧರ ಲೋನಕರ

ನವಲಗುಂದ: ಮಹರ್ಷಿ ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಆದ ಮಹತ್ತರ ಪರಿವರ್ತನೆಯಿಂದಾಗಿ ರಾಮಾಯಣದಂತಹ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿ ‘ಆದಿಕವಿ’ ಎಂಬ ಬಿರುದನ್ನು ಪಡೆದು, ಬದುಕಿನ ಶ್ರೇಷ್ಠತೆಯನ್ನು ಇಡೀ ವಿಶ್ವಕ್ಕೆ ಸಾರಿದರು ಎಂದು ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಧರ ಲೋನಕರ ಹೇಳಿದರು. ​ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ​ತಪ್ಪು ದಾರಿಯಿಂದ ಸತ್ಯ, ಧರ್ಮದತ್ತ ಸಾಗಿದ ವಾಲ್ಮೀಕಿ: ​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…

Read More

ಮಹದಾಯಿ ಹೋರಾಟಕ್ಕೆ ಯುವ ಪರಿವರ್ತನೆ ಯಾತ್ರೆಯ ಬೆಂಬಲ: ನವಲಗುಂದದಲ್ಲಿ ರೈತರಿಂದ ಸ್ವಾಗತ

ನವಲಗುಂದ: ಬೀದರ್‌ನಿಂದ ಬೆಂಗಳೂರಿನವರೆಗೆ ‘ಯುವ ಪರಿವರ್ತನೆ ಯಾತ್ರೆ’ ಹಮ್ಮಿಕೊಂಡಿರುವ ಕರ್ನಾಟಕ ಜನಸಾಮಾನ್ಯರ ವೇದಿಕೆಯ ಹೋರಾಟಗಾರರಿಗೆ ನವಲಗುಂದ ಪಟ್ಟಣದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮಹದಾಯಿ ಕಳಸಾ ಬಂಡೂರಿ ಪಕ್ಷಾತೀತ ಹೋರಾಟ ಒಕ್ಕೂಟ ಸಮಿತಿಯ ವತಿಯಿಂದ ಹೋರಾಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ​ಪಟ್ಟಣದ ಲಿಂಗರಾಜ್ ವೃತ್ತದ ಬಳಿ ಇರುವ ರೈತ ಭವನದಲ್ಲಿ ಯಾತ್ರಾ ತಂಡವನ್ನು ಸ್ವಾಗತಿಸಿದ ರೈತ ಮುಖಂಡರು, ಯುವ ಪರಿವರ್ತನೆ ಯಾತ್ರೆಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು. ​ಸರ್ಕಾರಗಳ ವಿರುದ್ಧ ರೈತ ಮುಖಂಡರ ವಾಗ್ದಾಳಿ ​ಈ ಸಂದರ್ಭದಲ್ಲಿ ಮಾತನಾಡಿದ ರೈತ…

Read More