ಧರ್ಮದ ಬೆಳಕು ಕೊಟ್ಟ ಆದಿಕವಿ ವಾಲ್ಮೀಕಿ’ ನೆನಪಿಸಬೇಕಿದೆ: ನವಲಗುಂದ ಶಾಸಕ ಕೋನರಡ್ಡಿ
ನವಲಗುಂದ: ಇಂದಿನ ಕವಿಗಳ ಕಾವ್ಯಗಳ ಮಧ್ಯೆ, ನಮಗೆ ಧರ್ಮದ ಬೆಳಕನ್ನು ಕೊಟ್ಟ ದೈವ ಸಮಾನರಾದ ಆದಿಕವಿ ಮಹರ್ಷಿ ವಾಲ್ಮೀಕಿ ಅವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. (ಮಂಗಳವಾರ) ನವಲಗುಂದ ತಾಲ್ಲೂಕು ಆಡಳಿತ ಮತ್ತು ವಾಲ್ಮೀಕಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಲ್ಮೀಕಿ ಅವರು ಒಬ್ಬ ಋಷಿ ಮತ್ತು ಸುಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ ಆಗಿರುವ ಅವರನ್ನು ಮೊದಲ ಮಹಾಕಾವ್ಯ ರಚಿಸಿದ…

