50 ವರ್ಷಗಳ ಪಕ್ಷದ ಸೇವೆ, ಜೈನ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಕಾಂಗ್ರೆಸ್ ಮುಂಖಡ ವಿಜಯಗೌಡ ಪಾಟೀಲ ಅವರಿಂದ ಸಚಿವ ಎಂ.ಬಿ.ಪಾಟೀಲರಿಗೆ ಮನವಿ
ನವಲಗುಂದ: ಕಾಂಗ್ರೆಸ್ ಪಕ್ಷದಲ್ಲಿ ಕಳೆದ 50 ವರ್ಷಗಳಿಂದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸುತ್ತಾ, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಮುಖಂಡ ವಿಜಯಗೌಡ ಪಾಟೀಲ ಅವರಿಗೆ ಸರ್ಕಾರವು ನೇಮಕ ಮಾಡುವ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ, ನವಲಗುಂದಕ್ಕೆ ಭೇಟಿ ನೀಡಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ಇಂದು ಆಗ್ರಹಿಸಲಾಯಿತು. ನಿರಂತರ ಸೇವೆಯನ್ನು ಗುರುತಿಸಲು ಮನವಿ:ವಿಜಯಗೌಡ ಪಾಟೀಲ ಅವರು 1972 ರಲ್ಲಿಯೇ ತಾಲ್ಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ…

