ಪಶ್ಚಿಮ ಪದವೀಧರರ ಮತಕ್ಷೇತ್ರ: ನೋಂದಣಿಗೆ ವಿಡಿಯೋ ಸಂವಾದದ ಮೂಲಕ ಸೂಚನೆ

ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಲು ಅರ್ಹ ಪದವೀಧರರಿಗೆ ವಿಡಿಯೋ ಸಂವಾದ ಸಭೆಯ ಮೂಲಕ ನಿರ್ದೇಶನ ನೀಡಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು, ಇವರ ಅಧ್ಯಕ್ಷತೆಯಲ್ಲಿ ದಿನಾಂಕ ಅಕ್ಟೋಬರ್ 3, 2025 ರಂದು ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ನೋಂದಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ಜರುಗಿತು. ​ಈ ಸಭೆಯಲ್ಲಿ, ಈಗಾಗಲೇ ನೇಮಕಗೊಂಡಿರುವ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಮೂನೆ-18 ರ ಅರ್ಜಿ ಫಾರ್ಮ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲಾಯಿತು. ಅರ್ಹ…

Read More

ಕಥೆಗಳು ಸಮುದಾಯ ಒಗ್ಗೂಡಿಸುವ ಶಕ್ತಿ ಹೊಂದಿವೆ: ಡಾ. ರಾಜೇಂದ್ರ ಚೆನ್ನಿ

ಕಥನ ಪರಂಪರೆಯಲ್ಲಿ ವ್ಯಕ್ತಿ ಮತ್ತು ಸಮಾಜ ಕುರಿತು ಧಾರವಾಡದಲ್ಲಿ ಉಪನ್ಯಾಸ ​ಧಾರವಾಡ: ಕಥೆಗಳು ಸಮುದಾಯವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದ್ದು, ಸಾಮಾಜಿಕ ಮೌಲ್ಯಗಳ ಆಳವಾದ ಒಳನೋಟಗಳನ್ನು ನೀಡುತ್ತವೆ ಎಂದು ಶಿವಮೊಗ್ಗದ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು. ​ಕರ್ನಾಟಕ ವಿದ್ಯಾವರ್ಧಕ ಸಂಘವು, ಎಂ.ಟಿ., ಎ.ಟಿ., ಬಿ.ಟಿ., ಮತ್ತು ಎಚ್.ಟಿ. ಸಾಸನೂರ ಸಹೋದರರ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ-27ರಲ್ಲಿ ‘ಕನ್ನಡ ಕಥನ ಪರಂಪರೆಯಲ್ಲಿ ವ್ಯಕ್ತಿ ಹಾಗೂ ಸಮಾಜ’ ಎಂಬ ವಿಷಯ ಕುರಿತು ಅವರು ಮಾತನಾಡಿದರು. ​ಕಥೆಗಳಲ್ಲಿ ಧರ್ಮ,…

Read More

​ಸಾಹಿತಿ ಡಾ. ಎಸ್. ಎಲ್. ಭೈರಪ್ಪ ನಿಧನ: ನಾಳೆ ಧಾರವಾಡದಲ್ಲಿ ನುಡಿ ನಮನ ಕಾರ್ಯಕ್ರಮ

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಶನಿವಾರ ಶ್ರದ್ಧಾಂಜಲಿ ಸಭೆ ಆಯೋಜನೆ ​ಧಾರವಾಡ: ಇತ್ತೀಚೆಗೆ ನಿಧನರಾದ ಪದ್ಮಭೂಷಣ ಮತ್ತು ಪದ್ಮಶ್ರೀ ಪುರಸ್ಕೃತ ಖ್ಯಾತ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರದ್ಧಾಂಜಲಿ ಸಲ್ಲಿಸಲು ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಿದೆ. ​ಅಕ್ಟೋಬರ್ 4, ಶನಿವಾರ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ​ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಈ ಕುರಿತು ಪ್ರಕಟಣೆ…

Read More

ಒಳ್ಳೆಯ ಸಾಧನೆಯಿಂದ ಬದುಕು ಸಾರ್ಥಕ: ದಿಂಗಾಲೇಶ್ವರ ಶ್ರೀ

​ಕುಂದಗೋಳ: ಮನುಷ್ಯ ಜನ್ಮ ತಾಳಿದ ಮೇಲೆ ಉತ್ತಮ ಕೆಲಸ ಹಾಗೂ ಸಾಧನೆಗಳನ್ನು ಮಾಡಿದಾಗ ಮಾತ್ರ ಆತನ ಬದುಕು ಸಾರ್ಥಕವಾಗುತ್ತದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ​ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನವರಾತ್ರಿ ಮಹಾಮಂಗಳೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. “ಇಂದಿನ ದಿನಗಳಲ್ಲಿ ಮಕ್ಕಳು ಹೆತ್ತ ತಂದೆ-ತಾಯಿಗಳನ್ನೇ ಮರೆಯುತ್ತಿದ್ದಾರೆ. ಅವರನ್ನು ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ, ಹೆತ್ತವರನ್ನು ದೇವರಂತೆ ಪೂಜಿಸಿದಾಗ ಮಾತ್ರ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ…

Read More

​ಗಾಂಧೀಜಿ ಮಾರ್ಗದಿಂದಲೇ ದೇಶದ ಪ್ರಗತಿ: ಎಚ್.ಎಸ್. ಲಕ್ಷ್ಮೇಶ್ವರ

ಸತ್ಯ, ಅಹಿಂಸೆ ತತ್ವಗಳು ಇಂದಿನ ಯುವಕರಿಗೆ ಆದರ್ಶ; ಸಂಶಿಯಲ್ಲಿ ಜಯಂತಿ ಆಚರಣೆ ​ಕುಂದಗೋಳ: ಸತ್ಯ, ಅಹಿಂಸೆ ಮತ್ತು ಶಾಂತಿಯ ವಿಶ್ವಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಹಾಗೂ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕೆಪಿಸಿಸಿ ಒಬಿಸಿ ರಾಜ್ಯ ಕಾರ್ಯದರ್ಶಿ ಎಚ್.ಎಸ್. ಲಕ್ಷ್ಮೇಶ್ವರ ಹೇಳಿದರು. ​ತಾಲೂಕಿನ ಸಂಶಿ ಗ್ರಾಮದ ಗಾಂಧೀಜಿ ಸರ್ಕಲ್‌ನಲ್ಲಿ ಗುರುವಾರದಂದು ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ನಿಮಿತ್ತ…

Read More

ಗಾಂಧೀಜಿ, ಶಾಸ್ತ್ರೀಜಿ ಚಿಂತನೆಗಳು ಇಂದಿಗೂ ಪ್ರಸ್ತುತ: ಬಸವಪ್ರಭು ಹೊಸಕೇರಿ

ಕವಿಸಂನಲ್ಲಿ ರಾಷ್ಟ್ರಪಿತ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ ​ಧಾರವಾಡ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಾನ್ ಮಾನವತಾವಾದಿಗಳು. ಅವರ ಸ್ಮರಣೆ ಪುಣ್ಯದ ಕಾರ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ (ಕವಿಸಂ) ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಹೇಳಿದರು. ​ಕವಿಸಂನಲ್ಲಿ ಗುರುವಾರ (ಅ.೨) ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ​ಗಾಂಧೀಜಿಯವರ ಚಿಂತನೆಗಳನ್ನು ಯುವಜನತೆಯಲ್ಲಿ ಬಿಂಬಿಸಲು ಕವಿಸಂ ವತಿಯಿಂದ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭವಿಷ್ಯದಲ್ಲಿ…

Read More

ಕೃಷಿ ತಜ್ಞ ಪ್ರೊ. ಎಸ್.ಎ. ಹೊಸಮನಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಅ. 8ಕ್ಕೆ

ಧಾರವಾಡ:ಕರ್ನಾಟಕದ ಶ್ರೇಷ್ಠ ಕೃಷಿ ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ (UAS) ಭದ್ರ ಬುನಾದಿ ಹಾಕಿದ ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ (ಪ್ರೊ. ಎಸ್.ಎ. ಹೊಸಮನಿ) ಅವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 8 ರಂದು ಧಾರವಾಡದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೊ. ಹೊಸಮನಿ ಅವರ ಸಾಧನೆಪ್ರೊ. ಹೊಸಮನಿ ಅವರು ಹಲವಾರು ಸುಧಾರಿತ…

Read More

ಕುಂದಗೋಳ ಪ ಪಂ ನಲ್ಲಿ ಆಶ್ರಯ ನಿವೇಶನ ಜನಪ್ರತಿನಿಧಿಗಳ ಪತ್ನಿಯರಿಗೆ ಹಂಚಿಕೆ, ತನಿಖೆಗೆ ಆಗ್ರಹ

ಕುಂದಗೋಳ: ಪಟ್ಟಣ ಪಂಚಾಯಿತಿ ಆಶ್ರಯ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಕಾನೂನುಬಾಹಿರವಾಗಿ ನಡೆದಿರುವ ಬಗ್ಗೆ ಪಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಹಾಲಿ ಉಪಾಧ್ಯಕ್ಷರು ಮತ್ತು ಸದಸ್ಯರ ಪತ್ನಿಯರಿಗೆ ನಿವೇಶನ ನೀಡಲಾಗಿದೆ ಎಂಬ ಆರೋಪ ಸದಸ್ಯರಿಂದ ಕೇಳಿಬಂದಿದ್ದು, ಈ ಕುರಿತು ತಕ್ಷಣ ತನಿಖೆ ನಡೆಸಬೇಕೆಂದು ಆಗ್ರಹಿಸಲಾಯಿತು. ನಿಯಮ ಮೀರಿ ನಿವೇಶನ ಹಂಚಿಕೆ ಆರೋಪ ವಿಷಯ ಪ್ರಸ್ತಾಪಿಸಿದ ಸದಸ್ಯ ಗಣೇಶ ಕೋಕಾಟೆ ಅವರು, “ಬಡವರಿಗೆ ಮೀಸಲಾದ ಆಶ್ರಯ ಯೋಜನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮನೆ ಇಲ್ಲದ ಕಡುಬಡವರು ಹಾಗೂ…

Read More

ನಾಯಕನೂರ ಬಳಿ ಟ್ರ್ಯಾಕ್ಟರ್ ಪಲ್ಟಿ: ಚಾಲಕನ ನಿರ್ಲಕ್ಷ್ಯಕ್ಕೆ ಮೂವರು ಮಹಿಳೆಯರಿಗೆ ಗಂಭೀರ ಗಾಯ

ನವಲಗುಂದ: ತಾಲೂಕಿನ ನಾಯಕನೂರ ಗ್ರಾಮದ ಬಳಿ ಸಾಯಂಕಾಲದ ವೇಳೆ ಟ್ರ್ಯಾಕ್ಟರ್ ಅತಿವೇಗ ಮತ್ತು ನಿಷ್ಕಾಳಜಿ ಚಾಲನೆಯಿಂದಾಗಿ ರಸ್ತೆ ಪಕ್ಕದಲ್ಲಿ ಪಲ್ಟಿ ಹೊಡೆದಿದ್ದು, ಟ್ರೇಲರ್‌ನಲ್ಲಿದ್ದ ಮೂವರು ಮಹಿಳೆಯರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೊನ್ನೆ ಸಾಯಂಕಾಲ 7:30 ಗಂಟೆ ಸುಮಾರಿಗೆ ನಾಯಕನೂರ-ತಡಹಾಳ ರಸ್ತೆಯ ಮೇಲೆ, ಅಕ್ಕಿಯವರ ಹಳ್ಳದ ಸಮೀಪ ಈ ದುರಂತ ಸಂಭವಿಸಿದೆ. ರಾಮದುರ್ಗ ತಾಲೂಕಿನ ಉಗಾಳಾಪೂರ ನಿವಾಸಿ, ಆರೋಪಿತ ಚಾಲಕ ಚೇತನ ನೀಲನ (ವಯಾ 24 ವರ್ಷ) ಇತನು ತಾನು ಚಲಾಯಿಸುತ್ತಿದ್ದ…

Read More

ನವಲಗುಂದ ಬಳಿ ಭೀಕರ ಅಪಘಾತ: ಬಸ್‌-ಲಾರಿ ಡಿಕ್ಕಿ, ಓರ್ವ ಪ್ರಯಾಣಿಕ ಸಾವು

ನವಲಗುಂದ: ಸಮೀಪದ ಹುಬ್ಬಳ್ಳಿ-ಸೊಲಾಪುರ ರಸ್ತೆಯಲ್ಲಿರುವ ಶೆಟ್ಟರ ಕೆರೆಯ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಭೀಕರ ದುರಂತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಪೂರ್ಣ ನಿಷ್ಕಾಳಜಿಯಿಂದ ಚಾಲನೆಸೆ 29 ರಂದು ರಾತ್ರಿ 10:30 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಂಗಳೂರು ನಿವಾಸಿ ರಂಜನ ಕುಮಾರ ಎಂಬ ಚಾಲಕನು ಗಣೇಶ ಟ್ರಾವೆಲ್ಸ್‌ಗೆ ಸೇರಿದ ಬಸ್ (KA-51/B-2462) ಅನ್ನು ನವಲಗುಂದ…

Read More