ಕಥೆಗಳು ವೈಚಾರಿಕತೆಯನ್ನು ಹೆಚ್ಚಿಸುತ್ತವೆ: ಡಾ. ಮಲ್ಲಿಕಾ ಘಂಟಿ
ಧಾರವಾಡ: ಕಥೆಗಳು ಕಲ್ಪನೆ ಹಾಗೂ ಆಲೋಚನೆಗಳನ್ನು ಹುಟ್ಟುಹಾಕಿ ಓದುಗರಲ್ಲಿ ವೈಚಾರಿಕತೆಯನ್ನು ಸೃಷ್ಟಿಸುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಚೆನ್ನಬಸಪ್ಪ ಸಾದರ ಅವರ ಸಂಸ್ಮರಣೆಯಲ್ಲಿ ಆಯೋಜಿಸಿದ್ದ “ಮಿತಸಮಯ ಮಹಿಳಾ ಕಥಾಸಂಚಯ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಹತ್ತು ಜನ ಕಥೆಗಾರ್ತಿಯರು ತಮ್ಮ ಹತ್ತು ನಿಮಿಷದ ಅವಧಿಯಲ್ಲಿ ಹತ್ತು ಹೊಸ ಕಥೆಗಳನ್ನು ಸರಳ ಮತ್ತು ವಿಭಿನ್ನ ಶೈಲಿಯಲ್ಲಿ ವಾಚಿಸಿದರು. ಈ ಕಥೆಗಳು ವೈಚಾರಿಕತೆಗಳಿಂದ ಕೂಡಿದ್ದು,…

