ಸಾಲ ಬಾದೆ ತಾಳಲಾರದೆ ರೈತ ಆತ್ಮಹತ್ಯೆ
ಕುಂದಗೋಳ: ಸಾಲ ಬಾಧೆ ಹಾಗೂ ಬೆಳೆ ನಷ್ಟದಿಂದ ಮನನೊಂದ ರೈತರೊಬ್ಬರು ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಕೇಡಿಸುವ ಘಟನೆ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ. ಹಿರೇಹರಕುಣಿ ಗ್ರಾಮದ ನಿವಾಸಿಯಾದ ಶಿವಾನಂದ ವಿರುಪಾಕ್ಷಪ್ಪ ಹೂಗಾರ (64) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತರಾಗಿದ್ದಾರೆ. ಮೃತ ಶಿವಾನಂದ ಅವರು ತಮ್ಮ ಜಮೀನು ಸಾಗುವಳಿಗಾಗಿ ಹಿರೇಹರಕುಣಿಯ ಕೆ.ವಿ.ಜಿ. ಬ್ಯಾಂಕ್ನಲ್ಲಿ 02 ಲಕ್ಷ ರೂಪಾಯಿಗಳ ಬೆಳೆ ಸಾಲವನ್ನು ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜಮೀನಿನಲ್ಲಿ ಸರಿಯಾಗಿ ಬೆಳೆ ಬಾರದೆ, ಇತ್ತ ಬಂದ ಬೆಳೆಗೆ…

