ಬೆಂಗಳೂರು ಮಳೆ ಅಬ್ಬರ: ವಿಧಾನಸೌಧದೊಳಗೆ ಜಲಪಾತ, ಬುಕ್ವಾರ್ಮ್ ಪುಸ್ತಕ ಮಳಿಗೆ ಜಲಾವೃತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಅಕಾಲಿಕ ಧಾರಾಕಾರ ಮಳೆ ಇಡೀ ರಾಜಧಾನಿಯನ್ನು ಅಸ್ತವ್ಯಸ್ತಗೊಳಿಸಿದ್ದು, ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಹಿಡಿದು ಜನಪ್ರಿಯ ಪುಸ್ತಕ ಮಳಿಗೆಯವರೆಗೆ ಎಲ್ಲೆಡೆ ಜಲಪ್ರಳಯದಂತಹ ದೃಶ್ಯಗಳು ಕಂಡುಬಂದಿವೆ. ಭಾರಿ ಗಾಳಿ ಮತ್ತು ಆಲಿಕಲ್ಲು ಸಹಿತ ಸುರಿದ ಮಳೆಗೆ ನಗರದ ಜನಜೀವನ ತತ್ತರಿಸಿದ್ದು, ಒಂದೆಡೆ ಸರ್ಕಾರದ ಆಡಳಿತ ಕೇಂದ್ರಕ್ಕೆ ನೀರು ನುಗ್ಗಿದರೆ, ಮತ್ತೊಂದೆಡೆ ಜ್ಞಾನದ ದೇಗುಲವೊಂದು ಮಳೆ ನೀರಿಗೆ ಆಹುತಿಯಾಗಿದೆ. ರಾಜ್ಯದ ಅತ್ಯುನ್ನತ ಆಡಳಿತ ಕೇಂದ್ರವಾದ ವಿಧಾನಸೌಧವೇ ಮಳೆ ನೀರಿಗೆ ಜಲಾವೃತಗೊಂಡಿರುವುದು ಖಂಡನಿಯ. ಮಳೆಯ…

