ಬೆಂಗಳೂರು ಮಳೆ ಅಬ್ಬರ: ಕಾಂಪೌಂಡ್ ಕುಸಿದು ಏಳು ಬಲಿ; ಮೃತರ ಕುಟುಂಬಕ್ಕೆ ಸಿಎಂರಿಂದ ತಲಾ 5 ಲಕ್ಷ ಪರಿಹಾರ ಘೋಷಣೆ
ಬೆಂಗಳೂರು: ರಾಜಧಾನಿಯಲ್ಲಿ ಸುರಿದ ಅಕಾಲಿಕ ಧಾರಾಕಾರ ಮಳೆ ಭಾರಿ ದುರಂತಕ್ಕೆ ಕಾರಣವಾಗಿದ್ದು, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಕಾಂಪೌಂಡ್ ಕುಸಿದು ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮಳೆಯ ಆರ್ಭಟಕ್ಕೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮರಗಳು ಧರೆಗುರುಳಿ ಸಾರ್ವಜನಿಕ ಆಸ್ತಪಾಸ್ತಿಗೆ ಭಾರಿ ಹಾನಿ ಸಂಭವಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಏಕಾಏಕಿ ಕುಸಿದ ಪರಿಣಾಮವಾಗಿ ಮಾಯಾ (51), ಸಾಜಿದ್ (20), ಅಜು (35), ಐದು ವರ್ಷದ ಮಗು ಪ್ರೀತಿ ಹಾಗೂ ಸಿಜಿ (47) ಸೇರಿದಂತೆ…

