​ಡಿ. 28ಕ್ಕೆ ‘ಸಂಗಮ ಸಿರಿ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ

ಹುಬ್ಬಳ್ಳಿ: ನಗರದ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಜ್ಯಮಟ್ಟದ ‘ಸಂಗಮ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 28ರಂದು ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ​ಕಾರ್ಯಕ್ರಮದ ವಿವರ: ವಿದ್ಯಾನಗರದ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಂದು ಬೆಳಿಗ್ಗೆ 10:30ಕ್ಕೆ ಸಮಾರಂಭ ಆಯೋಜಿತವಾಗಿದೆ. ರಾಯನಾಳದ ಶ್ರೀ ಅಭಿನವ ರೇವಣಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಪ್ರಶಸ್ತಿ ವಿತರಣೆ ನಡೆಯಲಿದೆ. ​ಪ್ರಶಸ್ತಿ ಪುರಸ್ಕೃತರು: ವಚನ ಸಾಹಿತ್ಯಕ್ಕೆ ಪೂರಕವಾದ ಸಾಹಿತ್ಯ ರಚನೆಯನ್ನು ಪರಿಗಣಿಸಿ ಈ…

Read More

ಹುಬ್ಬಳ್ಳಿಯಲ್ಲಿ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಬಹಿರಂಗ ಹರಾಜು: ತಕರಾರು ಸಲ್ಲಿಸಲು ಡಿ. 26 ಕೊನೆಯ ದಿನ

ಧಾರವಾಡ: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳ ರಸ್ತೆ ಬದಿಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿರುವ ಒಟ್ಟು 57 ಮರಗಳು ಮತ್ತು 32 ಮರದ ಟೊಂಗೆಗಳನ್ನು ತೆರುವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಮರಗಳ ವಿಲೇವಾರಿಗಾಗಿ ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್ 30, 2025 ಮತ್ತು ಜನವರಿ 12, 2026 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ…

Read More

ಪ್ರೀತಿಸಿ ಮದುವೆಯಾದ ಗರ್ಭಿಣಿ ಮಗಳನ್ನೇ ಕೊಂದ ತಂದೆ: ಹುಬ್ಬಳ್ಳಿ ತಾಲೂಕಿನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತ ಮರ್ಯಾದಾ ಹತ್ಯೆ!

ಹುಬ್ಬಳ್ಳಿ: ಪ್ರೀತಿ ಹಾಗೂ ಅಂತರ್ಜಾತಿ ವಿವಾಹದ ಹೆಸರಿನಲ್ಲಿ ಮರ್ಯಾದಾ ಹತ್ಯೆಗಳು ನಡೆಯುತ್ತಿರುವುದು ನಾಗರಿಕ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ತಂದೆಯೇ ತನ್ನ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆಗೈದ ಘಟನೆ ರವಿವಾರ ನಡೆದಿದೆ. ತಾನು ಸಾಕಿದ ಮಗಳೇ ತನಗೆ ಶತ್ರುವಾದಂತೆ ವರ್ತಿಸಿದ ತಂದೆ ಮತ್ತು ಆತನ ಸಂಬಂಧಿಕರು, ಕೇವಲ ಜಾತೀಯ ಅಹಂನಿಂದಾಗಿ ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯ ಪಾಟೀಲ (19) ಎಂಬ ಜೀವವನ್ನೇ ಬಲಿಪಡೆದಿದ್ದಾರೆ. ಈ ಅಮಾನುಷ ಕೃತ್ಯವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ….

Read More

“ಹೊರಟ್ಟಿಯವರದ್ದು ಸ್ವಾಭಿಮಾನ ಭರಿತ ವ್ಯಕ್ತಿತ್ವ; ಸ್ನೇಹದ ಮುಂದೆ ರಾಜಕಾರಣ ಗೌಣ”: ಸಂಸದ, ಹಾಗೂ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಶ್ಲಾಘನೆ

ಹುಬ್ಬಳ್ಳಿ, ಡಿ. 13: ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರ 45 ವರ್ಷಗಳ ರಾಜಕೀಯ ಸೇವೆಯನ್ನು ಗುರುತಿಸಿ ಇಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಗೌರವ ಸನ್ಮಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿ, ಹೊರಟ್ಟಿಯವರ ಅಪರೂಪದ ವ್ಯಕ್ತಿತ್ವ ಮತ್ತು ರಾಜಕೀಯ ನೈಪುಣ್ಯತೆಯನ್ನು ಮನಸಾರೆ ಶ್ಲಾಘಿಸಿದರು. ​ಸಮಾರಂಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಹೊರಟ್ಟಿಯವರನ್ನು ‘ಹ್ಯಾಂಡ್‌ಸಮ್ ಟೀಚರ್ ಅಂಡ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್’ ಎಂದು ಬಣ್ಣಿಸಿದರು. “ನಮ್ಮ ಹೊರಟ್ಟಿ…

Read More

“ಸಂಗಮ ಸಿರಿ” ರಾಜ್ಯಮಟ್ಟದ ಪ್ರಶಸ್ತಿ ಘೋಷಣೆ: ಡಾ. ಬಸವರಾಜ ಸಾದರ, ಡಾ. ಶಶಿಕಾಂತ್ ಪಟ್ಟಣ ಆಯ್ಕೆ

​ಹುಬ್ಬಳ್ಳಿ (ಡಿ. 11): ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣಾರ್ಥ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನವು ನೀಡುವ ಈ ವರ್ಷದ ರಾಜ್ಯಮಟ್ಟದ “ಸಂಗಮ ಸಿರಿ” ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಬಸವರಾಜ ಸಾದರ ಹಾಗೂ ಪುಣೆಯ ವಿಜ್ಞಾನಿ ಡಾ. ಶಶಿಕಾಂತ್ ಪಟ್ಟಣ ಅವರು ಆಯ್ಕೆಯಾಗಿದ್ದಾರೆ. ​ಕಳೆದ ನಾಲ್ಕು ವರ್ಷಗಳಿಂದ ವಿವಿಧ ಸಾಹಿತ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿರುವ ಪ್ರತಿಷ್ಠಾನವು, ಈ ಬಾರಿ ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ…

Read More

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುಗಮ ಸಂಚಾರ: ಪ್ರಯಾಣಿಕರ ಸೌಲಭ್ಯಗಳಿಗೆ ಆದ್ಯತೆ

ಹುಬ್ಬಳ್ಳಿ, : ವಿಮಾನ ನಿಲ್ದಾಣವು ಪ್ರಸ್ತುತ ವಿಮಾನ ಕಾರ್ಯಾಚರಣೆಗಳ ಸ್ಥಿತಿ ಮತ್ತು ಪ್ರಯಾಣಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಇಂದು ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣದಿಂದ ಎಲ್ಲಾ ನಿಗದಿತ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ. ​ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಾದ ರೂಪೇಶ್ ಕುಮಾರ್ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಕಟಿತ ವೇಳಾಪಟ್ಟಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು. ಸುಗಮ ವಿಮಾನ…

Read More

ಸುಭಾಸ್‌ಸಿಂಗ್ ಜಮಾದಾರ್ – ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ‘ಸೇವೆ, ಕಾನೂನು ಮತ್ತು ಸಿದ್ಧಾಂತ’ದ ಶಕ್ತಿ

ಹುಬ್ಬಳ್ಳಿ: ಕರ್ನಾಟಕ ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಮತಕ್ಷೇತ್ರದ ಪ್ರಬಲ ಸೇವಾಕಾಂಕ್ಷಿಯಾಗಿ ಚುನಾವಣಾ ಕಣದಲ್ಲಿರುವ ಬಿ.ಎಸ್ಸಿ., ಎಲ್.ಎಲ್.ಎಂ. ಪದವೀಧರ ಸುಭಾಸ್‌ಸಿಂಗ್ ಜಮಾದಾರ್ ಅವರು, ತಮ್ಮ ಮೂರು ದಶಕಗಳ ನಿಸ್ವಾರ್ಥ ಸಾರ್ವಜನಿಕ ಜೀವನ ಮತ್ತು ಕಾನೂನು ಪರಿಣತಿಯೊಂದಿಗೆ ಮತದಾರರನ್ನು ತಲುಪುತ್ತಿದ್ದಾರೆ. ಹುಬ್ಬಳ್ಳಿಯ ದೃಷ್ಟಿ ಎಂಟರ್‌ಪ್ರೈಸಸ್‌ನ ಮಾಲೀಕರಾಗಿ ಯಶಸ್ವಿ ವೃತ್ತಿಜೀವನವನ್ನು ನಿರ್ವಹಿಸುತ್ತಿರುವ ಜಮಾದಾರ್ ಅವರು, ಸಾಮಾಜಿಕ ಕಳಕಳಿಯೊಂದಿಗೆ ರಾಜಕೀಯವನ್ನು ನೋಡುವ ಅಪರೂಪದ ಮುಖವಾಗಿದ್ದಾರೆ. ಇವರು ABVPಯ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಮುಖ ಹುದ್ದೆಗಳು, 30 ವರ್ಷಗಳ ರಾಷ್ಟ್ರೀಯ ಸ್ವಯಂಸೇವಕ…

Read More

ಪರಿಶಿಷ್ಟ ಜಾತಿಗೆ ಸೂರ್ಯವಂಶ ಕ್ಷತ್ರಿಯ ಕಲಾಲ್ ಕಾಟಿಕ್ ಸಮಾಜವನ್ನು ಸೇರಿಸುವ ಬೇಡಿಕೆ: ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಶಾಸಕರಿಗೆ ಮನವಿ

ಹುಬ್ಬಳ್ಳಿ: ಡಿ 06: ಸೂರ್ಯವಂಶ ಕ್ಷತ್ರಿಯ ಕಲಾಲ್ ಕಾಟಿಕ್ ಸಮಾಜ (ರಿ) ವತಿಯಿಂದ ಸಮಾಜವನ್ನು ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಂದೆ ಪ್ರಬಲ ಬೇಡಿಕೆಯನ್ನು ಇಡಲಾಗಿದೆ. ಈ ಮಹತ್ವದ ವಿಷಯವನ್ನು ಮುಂಬರುವ ಬೆಳಗಾವಿ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ (ದಿನಾಂಕ: 08/12/2025 ರಂದು) ಪ್ರಸ್ತಾಪಿಸಲು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸೌಧ ಕ್ಷೇತ್ರದ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ ಅವರಿಗೆ ಕರ್ನಾಟಕ ರಾಜ್ಯ ಸಮಾಜದ ಪರವಾಗಿ ಅಧಿಕೃತ ಮನವಿಯನ್ನು ಸಲ್ಲಿಸಲಾಯಿತು. ​ಐತಿಹಾಸಿಕವಾಗಿ ಹಿಂದುಳಿದಿರುವ ಸಮಾಜ ​ಈ ಸಂದರ್ಭದಲ್ಲಿ…

Read More

ಸಿಎಂ ಕುರ್ಚಿ ಕಾಳಗ’ದಿಂದ ಆಡಳಿತಕ್ಕೆ ಹಾನಿ: “ಕಾಂಗ್ರೆಸ್ ಆಡಳಿತ ಅಸಹಾಯಕ”- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ

​: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಹುದ್ದೆಯ ವಿವಾದವನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ “ಅಸಹಾಯಕವಾಗಿದೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಶ್ರೀ ಹನುಮಂತ ದೇವಸ್ಥಾನದಲ್ಲಿ ನೇರಪ್ರಸಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದರು. ​ಆಡಳಿತ ಮತ್ತು ಭ್ರಷ್ಟಾಚಾರದ ಕುರಿತು ಟೀಕೆ: ​ಮುಖ್ಯಮಂತ್ರಿ ಕುರ್ಚಿಗಾಗಿ ನಡೆದ ಹೋರಾಟವು ರಾಜ್ಯದ ಆಡಳಿತಕ್ಕೆ ಹಾನಿ ಮಾಡುತ್ತಿದ್ದು,…

Read More

“ಆಕಳ ಹಾಲು ಅಮೃತಕ್ಕೆ ಸಮಾನ; ಹೊಟ್ಟೆಯಲ್ಲಿ ಹಚ್ಚೇರು ಬಂಗಾರ ಸತ್ಯ”: ಕಾಡಸಿದ್ದೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ದೇಸಿ ಆಕಳ ಹಾಲು ಅಮೃತಕ್ಕೆ ಸಮಾನವಾಗಿದ್ದು, ಅದರ ಹಾಲು ಮತ್ತು ತುಪ್ಪವನ್ನು ಸೇವಿಸಿದರೆ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎಂದು ಕೊಲ್ಲಾಪುರದ ಕಣ್ಣೇರಿ ಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ. ಜವಾರಿ ಆಕಳ ತುಪ್ಪದಲ್ಲಿ ಹೆಚ್ಚಿನ ಔಷಧಿ ಗುಣಗಳಿದ್ದು ಅನೇಕ ಕಾಯಿಲೆಗಳು ವಾಸಿಯಾಗುತ್ತವೆ. ಮಕ್ಕಳಿಗೆ ಕಿವಿ ನೋವು ಅಥವಾ ತಲೆನೋವು ಕಾಣಿಸಿಕೊಂಡಾಗ ಜವಾರಿ ಆಕಳ ತುಪ್ಪವನ್ನು ಎರಡು ಹನಿಗಳಂತೆ ನಾಲ್ಕು ದಿನ ಹಾಕಿದರೆ ಅವರು ನೋವಿನಿಂದ ಪಾರಾಗುತ್ತಾರೆ ಎಂದು ಸ್ವಾಮೀಜಿಗಳು ತಿಳಿಸಿದರು. ಆಕಳ ಹೊಟ್ಟೆಯಲ್ಲಿ ಹಚ್ಚೇರು ಬಂಗಾರ ಸತ್ಯ…

Read More