ಪಾಲಕರು ಮತ್ತು ಮಕ್ಕಳ ನಡುವೆ ಸಮನ್ವಯ ಅಗತ್ಯ: ಡಾ. ಗುರುರಾಜ ಪಾಟೀಲ ಕರೆ
ಧಾರವಾಡ: ಇಂದಿನ ವೇಗದ ಬದುಕಿನಲ್ಲಿ ಕುಟುಂಬ ವ್ಯವಸ್ಥೆಯು ಸುಭದ್ರವಾಗಿರಬೇಕಾದರೆ ಪಾಲಕರು ಮತ್ತು ಮಕ್ಕಳ ನಡುವೆ ಪರಸ್ಪರ ವಿಶ್ವಾಸ ಹಾಗೂ ಸಮನ್ವಯದ ಅಗತ್ಯವಿದೆ ಎಂದು ಹಿರಿಯ ಸುಭೋದ ಸಮಾಲೋಚಕರಾದ ಡಾ. ಗುರುರಾಜ ಪಾಟೀಲರು ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮತ್ತು ಮಕ್ಕಳ ಮಂಟಪದ ವತಿಯಿಂದ ಆಯೋಜಿಸಲಾಗಿದ್ದ ‘ಕುಟುಂಬ ವ್ಯವಸ್ಥೆಯಲ್ಲಿ ಪಾಲಕರ ಮತ್ತು ಮಕ್ಕಳ ಆಕ್ಷೇಪಗಳು ಹಾಗೂ ಅಪೇಕ್ಷೆಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕುಟುಂಬದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ…

