ವಿಕಲಚೇತನತೆ ದೌರ್ಬಲ್ಯವಲ್ಲ, ವಿಶೇಷ ಚೈತನ್ಯ: ಡಾ. ಕಮಲಾ ಬೈಲೂರ
ಧಾರವಾಡ: ವಿಕಲಚೇತನತೆಯು ದೌರ್ಬಲ್ಯವಲ್ಲ, ಬದಲಿಗೆ ಅವರಲ್ಲಿ ವಿಶೇಷ ಚೈತನ್ಯ ಮತ್ತು ಕೌಶಲ್ಯ ಅಡಗಿದೆ. ಅವರು ಆತ್ಮಸ್ಥೈರ್ಯದಿಂದ ಸಾಧನೆಗೆ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ಅವರು ಕರೆ ನೀಡಿದರು. ಅವರು ಗುರುವಾರದಂದು (ನ.27) ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿಕಲಚೇತನರ ಕ್ರೀಡಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹು-ಧಾ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ…

