ಹಿರೇಮಠದ ಆಸ್ತಿ ವಂಶಪಾರಂಪರ್ಯ; ಸಾರ್ವಜನಿಕರ ದೂರಿಗೆ ಕಿವಿಗೊಡಬೇಡಿ: ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ಸ್ಪಷ್ಟನೆ
ಕುಂದಗೋಳ: ಪಟ್ಟಣದ ಐತಿಹಾಸಿಕ ಪಂಚಗ್ರಹ ಹಿರೇಮಠವು 1517ರಲ್ಲಿ ಸ್ಥಾಪಿತವಾದ ಪುತ್ರವರ್ಗ ಮಠವಾಗಿದ್ದು, ಇದರ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಮೇಲೆ ಮಠದ ಪರಂಪರೆಯ ಜಂಗಮ ವಂಶಸ್ಥರಿಗೆ ಮಾತ್ರ ಸಂಪೂರ್ಣ ಹಕ್ಕಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕರು ಸಲ್ಲಿಸಿರುವ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಬಾರದು ಎಂದು ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ಆಗ್ರಹಿಸಿದರು. ಶುಕ್ರವಾರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಮಾತನಾಡಿದ ಅವರು, ಮಠದ ಆಸ್ತಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಏಪ್ರಿಲ್ 22 ರಂದು…

