ನೀಟ್ ವಿವಾದದ ಬಳಿಕ ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ಕೇಂದ್ರ ಘೊಷಣೆ

Spread the love

ನವದೆಹಲಿ (ಜು. 25): ದೇಶಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿಗೆ ವಹಿಸಲಾಗಿದೆ.

ಈ ನಿರ್ಧಾರದೊಂದಿಗೆ ನೀಟ್ ವಿವಾದದ ಬಳಿಕ ಶಿಕ್ಷಣ ಸಚಿವಾಲಯದ ಹೊಣೆಗಾರಿಕೆ ಪ್ರಹ್ಲಾದ್ ಜೋಶಿ ಅವರ ಹೆಗಲಿಗೆ ಬಂದಿದ್ದು, ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪಿಸುವುದು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಎದುರಾಗಿರುವ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರತ್ತ ದೇಶದಾದ್ಯಂತ ಕುತೂಹಲ ವ್ಯಕ್ತವಾಗಿದೆ. ಇದೀಗ ಇಡೀ ದೇಶದ ಚಿತ್ತ ಪ್ರಹ್ಲಾದ್ ಜೋಶಿ ಅವರತ್ತ ನೆಟ್ಟಿದೆ.

Leave a Reply

Your email address will not be published. Required fields are marked *