ಹೆಸ್ಕಾಂ ಬೇಜವಾಬ್ದಾರಿಗೆ ಬಲಿಯಾಯಿತೇ ಏಳು ವರ್ಷದ ಕಂದಮ್ಮ? ಸಂಶಿ ಗ್ರಾಮದಲ್ಲಿ ಘೋರ ದುರಂತ: ಸಾರ್ವಜನಿಕರ ತೀವ್ರ ಆಕ್ರೋಶ
ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಬುಧವಾರ ಹೆಸ್ಕಾಂ (HESCOM) ಇಲಾಖೆಯ ನಿರ್ಲಕ್ಷ್ಯಕ್ಕೆ ಏಳು ವರ್ಷದ ಮುಗ್ಧ ಬಾಲಕಿ ತಂಜಿಯಾ ತೌಸಿಪ್ ಪಠಾಣ್ ಬಲಿಯಾದ ದುರ್ಘಟನೆ ಸಂಭವಿಸಿದ್ದು, ಇಡೀ ಗ್ರಾಮದಲ್ಲಿ ಆಕ್ರೋಶ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಇಲಾಖೆಯ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಗ್ರಾಮದ ಸೊಸಾಯಿಟಿ ಸಮೀಪದ ಮನೆಯೊಂದರ ಬಳಿ ವಿದ್ಯುತ್ ಕಂಬ ಮತ್ತು ಮುಖ್ಯ ವಿದ್ಯುತ್ ಲೈನ್ ಅತ್ಯಂತ ಅಪಾಯಕಾರಿಯಾಗಿ ಅಳವಡಿಸಲಾಗಿತ್ತು ಎನ್ನಲಾಗಿದೆ….

