ತಮಿಳುನಾಡಿನ ಕರೂರು ಕಾಲ್ತುಳಿತ ದುರಂತ: ಸಾವಿನ ಸಂಖ್ಯೆ ಅಂದಾಜು 38ಕ್ಕೆ ಏರಿಕೆ – ಸಿಎಂ ಸ್ಟಾಲಿನ್ ಅವರಿಂದ ವೈಯಕ್ತಿಕ ಭೇಟಿ
ಕರೂರು (ತಮಿಳುನಾಡು): ಸೆಪ್ಟೆಂಬರ್ 27, 2025ಶನಿವಾರ ಸಂಜೆ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಟ ಹಾಗೂ ರಾಜಕಾರಣಿ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥರಾದ ವಿಜಯ್ ಅವರ ರಾಜಕೀಯ ರ್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಶಂಕಿಸಲಾಗಿದೆ. ಈ ದುರಂತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿಗಳ ಪ್ರಕಾರ, ನಟ ವಿಜಯ್ ಅವರ ರ್ಯಾಲಿಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಾರ್ವಜನಿಕರು ನೆರೆದಿದ್ದರು. ಭಾರೀ ಜನಸಂದಣಿಯ ಕಾರಣದಿಂದಾಗಿ ಉಂಟಾದ ನೂಕುನುಗ್ಗಲು ಈ…

