ಜಿಎಸ್ಟಿ ಸುಧಾರಣೆಗಳು ಮುಂದಿನ ಪೀಳಿಗೆಯ ಆರ್ಥಿಕ ಪ್ರಗತಿಗೆ ವೇಗ: ಪ್ರಧಾನಿ ಮೋದಿ
ನವದೆಹಲಿ: ನಾಳೆಯಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಗೆ ಉತ್ತೇಜನ ನೀಡುವ “ಮುಂದಿನ ಪೀಳಿಗೆಯ ಸುಧಾರಣೆ” ಎಂದು ಬಣ್ಣಿಸಿದ್ದಾರೆ. ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ನಾಳೆಯಿಂದ ನವರಾತ್ರಿ ಮತ್ತು ‘ಜಿಎಸ್ಟಿ ಬಚತ್ ಉತ್ಸವ’ ಎಂಬ ಎರಡು ಹಬ್ಬಗಳು ಪ್ರಾರಂಭವಾಗಲಿವೆ ಎಂದು ಅವರು ಘೋಷಿಸಿದರು. “ನವರಾತ್ರಿಯ ಮೊದಲ ದಿನದಿಂದ, ದೇಶವು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. ನಾಳೆಯಿಂದ ಸೂರ್ಯೋದಯದೊಂದಿಗೆ, ಮುಂದಿನ ಪೀಳಿಗೆಯ…

