ಆಸ್ತಿ ನೋಂದಣಿಯಿಂದಲೇ ಸಂಪೂರ್ಣ ಮಾಲೀಕತ್ವ ಸಿಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಆಸ್ತಿ ನೋಂದಣಿಯಿಂದಲೇ ಸಂಪೂರ್ಣ ಮಾಲೀಕತ್ವ ಸಿಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನವದೆಹಲಿ, ಸೆ. 7 – ಆಸ್ತಿ ನೋಂದಣಿ ಮಾಡಿಸಿಕೊಂಡರೆ ಮಾತ್ರ ಸಂಪೂರ್ಣ ಮಾಲೀಕತ್ವ ಸಿಗುತ್ತದೆ ಎಂದುಕೊಳ್ಳುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಆಸ್ತಿ ಖರೀದಿಸುವ ಜನರ ಚಿಂತನೆಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅಪೆಕ್ಸ್ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಆಸ್ತಿ ನೋಂದಣಿ ಕೇವಲ ಆರ್ಥಿಕ ವ್ಯವಹಾರ ನಡೆದಿದೆ ಎಂಬುದನ್ನು ದೃಢೀಕರಿಸುವ ದಾಖಲೆ ಮಾತ್ರ. ಇದು ಸಂಪೂರ್ಣ ಮಾಲೀಕತ್ವವನ್ನು…

Read More

ರಕ್ತ ಚಂದ್ರಗ್ರಹಣಕ್ಕೆ ದೇಶಾದ್ಯಂತ ಸಜ್ಜು – 82 ನಿಮಿಷಗಳ ಸುದೀರ್ಘ ಗ್ರಹಣ ವೀಕ್ಷಣೆಗೆ ಉತ್ಸಾಹ

ರಕ್ತ ಚಂದ್ರಗ್ರಹಣಕ್ಕೆ ದೇಶಾದ್ಯಂತ ಸಜ್ಜು – 82 ನಿಮಿಷಗಳ ಸುದೀರ್ಘ ಗ್ರಹಣ ವೀಕ್ಷಣೆಗೆ ಉತ್ಸಾಹ ನವದೆಹಲಿ, ಸೆ.07 – ಇಂದು ರಾತ್ರಿ ಆಕಾಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲಿದೆ. ‘ಬ್ಲಡ್ ಮೂನ್’ ಎಂದೇ ಕರೆಯಲ್ಪಡುವ ರಕ್ತ ಚಂದ್ರಗ್ರಹಣವನ್ನು ಭಾರತದೆಲ್ಲೆಡೆ ಜನತೆ ವೀಕ್ಷಿಸಬಹುದಾಗಿದೆ. ರಾಹುಗ್ರಸ್ತ ಈ ಗ್ರಹಣವು ರಾತ್ರಿ 8.58ಕ್ಕೆ ಆರಂಭಗೊಂಡು, ರಾತ್ರಿ 11.01ರಿಂದ ಸಂಪೂರ್ಣ ಗ್ರಹಣ ಸಂಭವಿಸಿ, ಮಧ್ಯರಾತ್ರಿ 12.22ರವರೆಗೆ ಮುಂದುವರಿಯಲಿದೆ. ಒಟ್ಟಾರೆ 82 ನಿಮಿಷಗಳ ಕಾಲ ಈ ಅಪರೂಪದ ದರ್ಶನ ಕಾಣಿಸಲಿದೆ. ವಿಜ್ಞಾನಿಗಳ ಪ್ರಕಾರ, ಈ ದಶಕದ…

Read More

ರಸ್ತೆ ಬಂದ ಹೆಲಿಕಾಪ್ಟರ್ ನಲ್ಲಿ 40 ಸಾವಿರ ಕರ್ಖು ಮಾಡಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಪಿಥೋರ್‌ಗಢ, ಸೆ.7:ಮಳೆ, ಪ್ರವಾಹ, ಭೂಕುಸಿತ – ಹೀಗೆ ಪ್ರಕೃತಿ ವಿಪತ್ತುಗಳಿಂದಾಗಿ ರಸ್ತೆಗಳು ಬಂದ್ ಆಗಿದ್ದರೂ, ಒಂದು ವರ್ಷ ವ್ಯರ್ಥವಾಗದಂತೆ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ಅಸಾಧಾರಣ ಸಾಹಸ ಮಾಡಿದ್ದಾರೆ. ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಬಿ.ಇ.ಇಡಿ ಪರೀಕ್ಷೆ ಬರೆಯಲು ರಾಜಸ್ಥಾನದ ಬಲೋತ್ರಾದ ವಿದ್ಯಾರ್ಥಿಗಳು ಹೆಲಿಕಾಪ್ಟರ್ ಬಾಡಿಗೆ ಪಡೆದು ಪರೀಕ್ಷಾ ಕೇಂದ್ರ ತಲುಪಿ ಪರೀಕ್ಷೆ ಬರೆದಿದ್ದಾರೆ. ಬುಧವಾರ ಮುನ್ಸಾರಿ ಮಹಾವಿದ್ಯಾಲಯದಲ್ಲಿ ಪರೀಕ್ಷೆ ನಡೆಯಬೇಕಿತ್ತು. ವಿದ್ಯಾರ್ಥಿಗಳಾದ ಒಮರಮ್ ಜಾಟ್, ಮಗರಂ ಜಾಟ್, ಪ್ರಕಾಶ್ ಗೋದಾರ ಜಾಟ್ ಹಾಗೂ ನರಪತ್ ಕುಮಾರ್ ಇಬ್ಬರು ದಿನಗಳ ಮುಂಚೆಯೇ…

Read More

ಗುಜರಾತ:ಪಾವಗಢದಲ್ಲಿ ರೋಪ್‌ವೇ ದುರಂತ: ಆರು ಕಾರ್ಮಿಕರು ದುರ್ಮರಣ

ಗುಜರಾತ್: ಪ್ರಸಿದ್ಧ ಯಾತ್ರಾಸ್ಥಳವಾದ ಪಾವಗಢದಲ್ಲಿ ರೋಪ್‌ವೇ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ ಸರಕು ಸಾಗಣೆ ಟ್ರಾಲಿಯ ವೈಯರ್ ತುಂಡಾಗಿ ಬಿದ್ದ ಪರಿಣಾಮ ಆರು ಮಂದಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಈ ದುರಂತ ಇಡೀ ಪ್ರದೇಶದಲ್ಲಿ ಆತಂಕ ಮತ್ತು ಶೋಕದ ವಾತಾವರಣ ಸೃಷ್ಟಿಸಿದೆ. ಪಂಚಮಹಲ್ ಪೊಲೀಸ್ ಉಪ ವರಿಷ್ಠಾಧಿಕಾರಿ ಹರ್ಷ ದುಧಾತ್ ಅವರು ನೀಡಿರುವ ಮಾಹಿತಿ ಪ್ರಕಾರ, ರೋಪ್‌ವೇ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ತಾಂತ್ರಿಕ ದೋಷ ಅಥವಾ ತೂಕದ ಕಾರಣದಿಂದಾಗಿ ಟ್ರಾಲಿಯು ನಿಯಂತ್ರಣ…

Read More

ಆನ್‌ಲೈನ್ ಗೇಮಿಂಗ್ ನಿಷೇಧ: ಎಂಪಿಎಲ್‌ನಲ್ಲಿ 300 ಸಿಬ್ಬಂದಿ ವಜಾಗೊಳಿಸಲು ನಿರ್ಧಾರ

ನವದೆಹಲಿ: ಆನ್‌ಲೈನ್ ಗೇಮಿಂಗ್ ಆ್ಯಪ್ ‘ಮೊಬೈಲ್ ಪ್ರೀಮಿಯರ್ ಲೀಗ್’ (ಎಂಪಿಎಲ್) ತನ್ನ ಶೇ. 60ರಷ್ಟು ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಣ ಕಟ್ಟಿ ಆಡಲಾಗುವ ಆನ್‌ಲೈನ್ ಆಟಗಳನ್ನು ನಿಷೇಧಿಸಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಲಾಗಿದೆ. ಸರ್ಕಾರದ ಈ ನಿರ್ಧಾರವು ದೇಶದ ಆನ್‌ಲೈನ್ ಗೇಮಿಂಗ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದ್ದು, ಅದರ ಪರಿಣಾಮವಾಗಿ ಸಿಬ್ಬಂದಿ ವಜಾಗೊಳಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕಂಪನಿಗಳು ಮುಂದಾಗಿವೆ….

Read More

ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ಕ್ಯಾನ್ಸರ್‌ಗೆ ಬಲಿ

ಮುಂಬೈ: ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 38 ವರ್ಷ ವಯಸ್ಸಿನ ನಟಿ ಮುಂಬೈನ ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಸುಕಿನ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪವಿತ್ರಾ ರಿಸ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಪ್ರಿಯಾ, ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಯಾ ಸುಖನೋ ಯಾ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಪ್ರಿಯಾ, ನಂತರ ಚಾ‌ ದಿವಸ್‌ ಸಸುಚೆ ಸೇರಿದಂತೆ ಹಲವು ಮರಾಠಿ ಧಾರಾವಾಹಿಗಳಲ್ಲಿ…

Read More

ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದ ಡಾ: ಗ್ರಾಡೆಲಿನ್ ರಾಯ್ ತಾವು ಹೃದಯಾಘಾತದಿಂದ ಸಾವು

ಚೆನ್ನೈ: ತಾವು ಚಿಕಿತ್ಸೆ ನೀಡುತ್ತಿದ್ದ ಹೃದಯ ಸಂಬಂಧಿ ಕಾಯಿಲೆಗೇ ಯುವ ವೈದ್ಯರೊಬ್ಬರು ಬಲಿಯಾಗಿರುವ ಹೃದಯವಿದ್ರಾವಕ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡೆಲಿನ್ ರಾಯ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಆಗಿದ್ದ ಡಾ. ಗ್ರಾಡೆಲಿನ್ ರಾಯ್ ಅವರು ವಾರ್ಡ್ ಸುತ್ತುಗಳ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರ ಸಹೋದ್ಯೋಗಿಗಳು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ.ತಕ್ಷಣವೇ ಅವರಿಗೆ ಸಿಪಿಆರ್…

Read More

ರಾಹುಲ್ ಗಾಂಧಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಬೆಂಬಲ: ಬಿಹಾರದಲ್ಲಿ ಯಾತ್ರೆಯಲ್ಲಿ ಭಾಗಿ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ನಡೆಸುತ್ತಿರುವ ‘ಮತದಾನ ಅಧಿಕಾರ ಯಾತ್ರೆ’ಗೆ ಬೆಂಬಲ ಸೂಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಯಾತ್ರೆಯಲ್ಲಿ ಭಾಗವಹಿಸಿದರು. ಕರ್ನಾಟಕದಿಂದ ಸಚಿವರು ಮತ್ತು ಶಾಸಕರ ನಿಯೋಗದೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿಯೋಗದ ಭಾಗಿಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಎಂ.ಸಿ.ಸುಧಾಕರ್, ಜಮೀರ್ ಅಹಮದ್, ಹಿರಿಯ ಕಾಂಗ್ರೆಸ್ಸಿಗರಾದ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್…

Read More

ಪ್ರಧಾನಿ ಅವರ ವಿರುದ್ದ ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ಪಾಟ್ನಾದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ: ಕಲ್ಲು ತೂರಾಟ, ಪರಸ್ಪರ ಆರೋಪ-ಪ್ರತ್ಯಾರೋಪ

ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಮತದಾರರ ಅಧಿಕಾರ ಯಾತ್ರೆ’ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ ನಿಂದನಾತ್ಮಕ ಹೇಳಿಕೆಗಳನ್ನು ಖಂಡಿಸಿ, ಬಿಜೆಪಿ ಕಾರ್ಯಕರ್ತರು ಪಾಟ್ನಾದಲ್ಲಿರುವ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಪರಿಣಾಮ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಕಲ್ಲು ತೂರಾಟ, ಪರಸ್ಪರ ಹೊಡೆದಾಟಗಳು ನಡೆದಿವೆ. ಪರಸ್ಪರ ಆರೋಪ-ಪ್ರತ್ಯಾರೋಪ:ಘರ್ಷಣೆಗೆ ಎರಡೂ ಪಕ್ಷಗಳು ಪರಸ್ಪರ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿವೆ. ಬಿಜೆಪಿ ಕಾರ್ಯಕರ್ತರು, ‘ನಾವು ಕಾಂಗ್ರೆಸ್ ಕಚೇರಿ ಮುಂದೆ…

Read More

ಭಾರತದಲ್ಲಿ ಹೆಚ್ಚಿದ ರಸ್ತೆ ಅಪಘಾತ: 2023ರಲ್ಲಿ ಪ್ರತಿ ಗಂಟೆಗೆ 20 ಸಾವು

ನವದೆಹಲಿ: ಭಾರತದಲ್ಲಿ ರಸ್ತೆ ಅಪಘಾತಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಿಡುಗಡೆ ಮಾಡಿದ ‘ಭಾರತದಲ್ಲಿ ರಸ್ತೆ ಅಪಘಾತಗಳು 2023’ ವರದಿಯ ಪ್ರಕಾರ, ಕಳೆದ ವರ್ಷ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೇ. 4.2ರಷ್ಟು ಏರಿಕೆಯಾಗಿದೆ. 2023ರಲ್ಲಿ ಒಟ್ಟು 4.8 ಲಕ್ಷ ಅಪಘಾತಗಳು ಸಂಭವಿಸಿದ್ದು, ಪ್ರತಿ ಗಂಟೆಗೆ ಸರಾಸರಿ 20 ಮಂದಿ ಸಾವಿಗೀಡಾಗಿದ್ದಾರೆ. ವರದಿಯ ಪ್ರಮುಖಾಂಶಗಳು ಹೀಗಿವೆ: ರಾಜ್ಯವಾರು ವರದಿ: ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದ್ದರೆ, ಸಾವನ್ನಪ್ಪಿದವರ ಸಂಖ್ಯೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿದೆ….

Read More