ಕಾರ್ಮಿಕ ಇಲಾಖಾ ಕಿಟ್: ಅರ್ಜಿ ಸಲ್ಲಿಸಲು ನ.15 ಕೊನೆ ದಿನ; ಮಧ್ಯವರ್ತಿಗಳ ಅವಕಾಶವಿಲ್ಲ; ಫಲಾನುಭವಿಗಳು ನೇರವಾಗಿ ಉಪಯೋಗ ಪಡೆಯಲಿ
ಧಾರವಾಡ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಗೌಂಡಿ ಸೇಪ್ಟಿ ಕಿಟ್ ವಿತರಣೆಗಾಗಿ ಕುಂದಗೋಳ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳೆ ನೇರವಾಗಿ ಅರ್ಹರು ಅರ್ಜಿ ಸಲ್ಲಿಸಬೇಕು. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಕುಂದಗೋಳ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಗೌಂಡಿ ಸೇಪ್ಟಿ ಕಿಟ್ ವಿತರಣೆಗಾಗಿ ಎಲೆಕ್ಟ್ರೀಷಿಯನ್ಸ್…

