ಇನಾಮವೀರಾಪುರ ಮರ್ಯಾದೆ ಹತ್ಯೆ: ನವಲಗುಂದದಲ್ಲಿ ದಲಿತ ಒಕ್ಕೂಟಗಳಿಂದ ಬೃಹತ್ ಪ್ರತಿಭಟನೆ
ನವಲಗುಂದ: ಹುಬ್ಬಳ್ಳಿ ತಾಲೂಕಿನ ಇನಾಮವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಬರ್ಬರ ಮರ್ಯಾದೆ ಹತ್ಯೆ ಪ್ರಕರಣವನ್ನು ಖಂಡಿಸಿ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ನವಲಗುಂದ ತಾಲೂಕು ದಲಿತ ಒಕ್ಕೂಟಗಳ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಗಣಪತಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜಾತಿ ವ್ಯವಸ್ಥೆ ಮತ್ತು ಮರ್ಯಾದೆ ಹತ್ಯೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಸುಧೀರ್ ಸಾವುಕಾರ ಅವರ ಮೂಲಕ…

