ಸಂಶಿ: ಪಾದಚಾರಿಗೆ ಬೈಕ್ ಡಿಕ್ಕಿ, ಗಂಭೀರ ಗಾಯ – ಸಮಯಕ್ಕೆ ಬಾರದ ಆಂಬ್ಯುಲೆನ್ಸ್!
ಕುಂದಗೋಳ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪಾದಚಾರಿಯೊಬ್ಬರಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಲಭ್ಯವಾಗದೆ ಸ್ಥಳೀಯ ಆಸ್ಪತ್ರೆಯಲ್ಲಿ ನರಳಾಟ ನಡೆಸಿದ ದಾರುಣ ಪರಿಸ್ಥಿತಿ ಎದುರಾಯಿತು. ಅಪಘಾತದ ವಿವರ ಸಂಶಿ ಗ್ರಾಮದ ಬಳಿ, ರಸ್ತೆಯ ಮೇಲೆ ಹೊರಟಿದ್ದ ಮಂಜುನಾಥ ದ್ಯಾಮನಗೌಡ ಧರಣಿ ಎಂಬುವವರಿಗೆ ಮಲಿಕರೆಹಾನ್ ನದಾಫ್ ಎಂಬ ಯುವಕ ಚಲಾಯಿಸುತ್ತಿದ್ದ…

