ಗುರುವಂದನೆ ಸಲ್ಲಿಸಿ ಶಿಷ್ಯತ್ವದ ಋಣ ತೀರಿಸಿದ ಕಾಕೋಳದ 2000-01 ನೆ ಸಾಲಿನ ಹಳೆ ವಿದ್ಯಾರ್ಥಿಗಳು: ಗ್ರಾಮದಲ್ಲಿ ಅದ್ದೂರಿ ಸ್ನೇಹ ಸಮ್ಮಿಲನ
ರಾಣೇಬೆನ್ನೂರ : ತಾಲೂಕಿನ ಕಾಕೋಳ ಗ್ರಾಮದಲ್ಲಿ ರವಿವಾರದಂದು ಗುರುವಿನ ಮೇಲಿನ ಅಪ್ರತಿಮ ಭಕ್ತಿ ಹಾಗೂ ಗೆಳೆಯರೊಂದಿಗಿನ ಬಾಂಧವ್ಯದ ಅಪರೂಪದ ಸಂಗಮವೊಂದು ಸಾಕ್ಷಿಯಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2000-01ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶ್ರೀ ಬೀರೇಶ್ವರ ಪ್ರೌಢ ಶಾಲೆಯ 2003-04ನೇ ಸಾಲಿನ ಎಸ್ಎಸ್ಎಲ್ಸಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಗುರುವಂದನಾ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ಶ್ರೀ ಬೀರೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ,…

