ಗರಗ ಗ್ರಾಮದಲ್ಲಿ ದೇಗುಲ ವಿವಾದ ತಾರಕಕ್ಕೆ: ನಿಷೇಧಾಜ್ಞೆ ಜಾರಿ

ಧಾರವಾಡ: ತಾಲೂಕಿನ ಗರಗ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಭೋವಿ ವಡ್ಡರ ಸಮಾಜ ಮತ್ತು ಗ್ರಾಮ ಪಂಚಾಯತಿ ನಡುವೆ ಬಿಕ್ಕಟ್ಟು ಉಂಟಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಗ್ರಾಮದಲ್ಲಿ ಶಾಂತಿ ಕದಡದಂತೆ ತಡೆಗಟ್ಟಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿವಾದದ ಮೂಲ : ಗರಗ ಗ್ರಾಮದ 19 ಗುಂಟೆ ಗ್ರಾಮ ಪಂಚಾಯತಿ ಜಾಗದಲ್ಲಿ ಭೋವಿ ವಡ್ಡರ ಸಮಾಜದವರು ದುರ್ಗಮ್ಮ ದೇವಸ್ಥಾನ ನಿರ್ಮಿಸಿದ್ದರು. ಸೆಪ್ಟೆಂಬರ್ 23 ರಂದು ದೇವಿಯ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ದೇವಸ್ಥಾನ ನಿರ್ಮಿಸಿರುವ ಜಾಗ ಪಂಚಾಯತಿಗೆ ಸೇರಿದ್ದು…

Read More

‘ಪಂಚ ಗ್ಯಾರಂಟಿ’ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸತೀಶ ಟಿ. ಕೊಬ್ಬಯ್ಯನವರ ನೇಮಕ

ಕುಂದಗೋಳ: ನೇಮಕಾತಿ ಅಧಿಸೂಚನೆ ಕುಂದಗೋಳ ಜಿಲ್ಲಾ ‘ಪಂಚ ಗ್ಯಾರಂಟಿ’ — ಅನುಷ್ಠಾನ ಸಮಿತಿ ಸನ್ಮಾನ್ಯ ಶ್ರೀ ಸತೀಶ್ ಟಿ. ಕೊಬ್ಬಯ್ಯನವರ ನೇಮಕ ಅಧ್ಯಕ್ಷ — ಅನುಷ್ಠಾನ ಸಮಿತಿ ಶ್ರೀ ಸತೀಶ್ ಟಿ. ಕೊಬ್ಬಯ್ಯನವರ ನೇಮಕ ಕುರಿತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಪಂಚ ಗ್ಯಾರಂಟಿ” ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸತೀಶ ಟಿ. ಕೊಬ್ಬಯ್ಯನವರ ಅವರನ್ನು ನೇಮಕ ಮಾಡಲಾಗಿದೆ. ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸತೀಶ ಕೊಬ್ಬಯ್ಯನವರ ಅವರು, ತಮ್ಮನ್ನು…

Read More

ಸೆ:23 ರಂದು ಪರಿಸರ ಜಾಗೃತಿ ಕಾರ್ಯಕ್ರಮ: ಕೆಎಲ್‌ಇ ಕಾಲೇಜಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ

ಧಾರವಾಡ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಧಾರವಾಡ ಮತ್ತು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ “ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣಮಹೋತ್ಸವ” ಅಂಗವಾಗಿ ‘ಪರಿಸರ ಜಾಗೃತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 23,ರ ಮಂಗಳವಾರ ಮಧ್ಯಾಹ್ನ 2:30 ಗಂಟೆಗೆ ಸಂಶಿಯ ಕೆಎಲ್‌ಇ ಕಾಲೇಜು ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ವಿವರಗಳು: ಈ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿಯ ಕುರಿತು ಉಪನ್ಯಾಸ ಮತ್ತು ವಿಚಾರ ವಿನಿಮಯ ನಡೆಯಲಿದ್ದು, ಎಲ್ಲರೂ ಭಾಗವಹಿಸಿ ಸಹಕರಿಸಬೇಕೆಂದು…

Read More

ಕನವಳ್ಳಿ ಆದರ್ಶಗಳ ಕಣಜವಾಗಿದ್ದರು: ಶಶಿ ಸಾಲಿ ಅಭಿಮತ

ಧಾರವಾಡ: ಪ್ರೊ. ಸದಾನಂದ ಕನವಳ್ಳಿ ಒಬ್ಬ ವಿದ್ವತ್ಪೂರ್ಣ ಬರಹಗಾರರಾಗಿದ್ದರು. ಸಂಗೀತ ಮತ್ತು ಕ್ರೀಡೆಗಳಲ್ಲೂ ಅವರಿಗೆ ಅಪಾರ ಆಸಕ್ತಿ ಇತ್ತು ಎಂದು ಅತಿಥಿ ಉಪನ್ಯಾಸಕ ಶಶಿ ಸಾಲಿ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ‘ಆದರ್ಶಗಳ ಕಣಜವಾಗಿದ್ದ ಸದಾನಂದ ಕನವಳ್ಳಿ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಪ್ರೊ. ಕನವಳ್ಳಿ ಶಿಸ್ತು, ಸಮಯಪ್ರಜ್ಞೆ, ಮತ್ತು ಸೌಜನ್ಯದ ಇನ್ನೊಂದು ಹೆಸರಾಗಿದ್ದರು. ವೃತ್ತಿಜೀವನದಲ್ಲಿ ಅತ್ಯಂತ ದಕ್ಷರಾಗಿದ್ದ ಅವರು ಹಲವು ವಿಭಿನ್ನ ಆಸಕ್ತಿಗಳನ್ನು ಹೊಂದಿದ್ದರು….

Read More

ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಎನ್  ಎಸ್ ಎಸ್  ಉತ್ತಮ ಸ್ವಯಂ ಸೇವಕ ಪ್ರಶಸ್ತಿ

ಕುಂದಗೋಳ: ತಾಲೂಕಿನ ಯಲಿವಾಳ ಗ್ರಾಮದ, ಶ್ರೀ ಸಂಕೇತ್ ಎಸ್ ಹೊಸಕೇರಿ ರವರು2023-24ನೇ ಸಾಲಿನ ವಿಶ್ವವಿದ್ಯಾಲಯ ಮಟ್ಟದ ಡಾ. ಡಿ. ಸಿ. ಪಾವಟೆ ಎನ್ ಎಸ್ ಎಸ್ ಉತ್ತಮ ಸ್ವಯಂ ಸೇವಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಪ್ರತಿ ವರ್ಷ ವಿಶ್ವವಿದ್ಯಾಲಯ ಮಟ್ಟದ ಎನ್ಎಸ್ಎಸ್ ಉತ್ತಮ ಘಟಕ, ಉತ್ತಮ ಎನ್ ಎಸ್ ಎಸ್ ಉತ್ತಮ ಅಧಿಕಾರಿ ಮತ್ತು ಉತ್ತಮ ಸ್ವಯಂ ಸೇವಕರು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಸದರಿಯವರು ಎನ್ಎಸ್ಎಸ್ ಘಟಕಗಳಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಹ್ಯಾಟ್ರಿಕ್…

Read More

ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸೆ 24 ರಂದು

ಕುಂದಗೋಳ : ತಾಲ್ಲೂಕಿನ ಕಳಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ 2024-25ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಬುಧವಾರ, ಸೆಪ್ಟೆಂಬರ್ 24, ರಂದು ಬೆಳಿಗ್ಗೆ 11:00 ಗಂಟೆಗೆ ಸಂಘದ ಕಚೇರಿಯಲ್ಲಿ ಕರೆಯಲಾಗಿದೆ. ಸಂಘದ ಅಧ್ಯಕ್ಷರಾದ ಶ್ರೀ ಸುರೇಶ ಮಹಾಂತಪ್ಪ ಕಳಸೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆಯು ನಡೆಯಲಿದೆ. ಸಭೆಯಲ್ಲಿ ಹಿಂದಿನ ವರ್ಷದ ಲೆಕ್ಕಪರಿಶೋಧನಾ ವರದಿ ಮತ್ತು ಮಂಡಳಿ ವರದಿಯನ್ನು ಪರಿಗಣಿಸುವುದು, ನಿವ್ವಳ ಲಾಭಗಳ ವಿಂಗಡಣೆ, ಆಯ-ವ್ಯಯಗಳಿಗೆ ಮಂಜೂರಾತಿ, ಹಾಗೂ 2025-26ನೇ…

Read More

ಗುಡಗೇರಿಯಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ

ಕುಂದಗೋಳ: ತಾಲ್ಲೂಕಿನ ಗುಡಗೇರಿ ಗ್ರಾಮದ ಪ್ರಸಿದ್ಧ ಶ್ರೀ ದ್ಯಾಮವ್ವಾ ದೇವಿಯ ನವರಾತ್ರಿ ಉತ್ಸವವು ನಾಳೆ (ಸೆಪ್ಟೆಂಬರ್ ೨೨) ದಿಂದ ಅಕ್ಟೋಬರ್ ೨ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಇಂದು ಘಟಸ್ಥಾಪನೆಯೊಂದಿಗೆ ಆರಂಭವಾಗಲಿರುವ ನವರಾತ್ರಿ ಹಬ್ಬ, ಅಕ್ಟೋಬರ್ ೨ ರಂದು ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಮೂಲಕ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ.

Read More

ಮಹರ್ಷಿ ಅರವಿಂದರು ಪೂರ್ಣಯೋಗ ಮಾರ್ಗದ ಪ್ರವರ್ತಕ: ಡಾ. ಅರವಿಂದ ಯಾಳಗಿ

ಧಾರವಾಡ: ಮಹರ್ಷಿ ಶ್ರೀ ಅರವಿಂದರು ಜಗತ್ತಿಗೆ ಪೂರ್ಣಯೋಗ ಮಾರ್ಗವನ್ನು ಪರಿಚಯಿಸಿದ ಮಹಾಯೋಗಿಯಾಗಿದ್ದಾರೆ ಎಂದು ಗೋವಾದ ಇಂಡೋ-ಪೋರ್ಚುಗೀಸ್ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಅರವಿಂದ ಯಾಳಗಿ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀ ಗುರಪ್ಪನವರು ಮತ್ತು ಶ್ರೀಮತಿ ಗೌರಮ್ಮ ಬೆಲ್ಲದ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಮಹರ್ಷಿ ಶ್ರೀ ಅರವಿಂದರ ತತ್ವದರ್ಶನ’ ಕುರಿತು ಉಪನ್ಯಾಸ ನೀಡಿದ ಅವರು, ಅರವಿಂದರು ಒಬ್ಬ ಮಹಾನ್ ತತ್ವಜ್ಞಾನಿ, ಶಿಕ್ಷಣ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದರು. ಏಳನೇ ವಯಸ್ಸಿಗೆ ಪಾಶ್ಚಾತ್ಯ ಸಂಸ್ಕೃತಿಯ ಅಧ್ಯಯನಕ್ಕಾಗಿ…

Read More

ಮಿತಸಮಯ ಮಹಿಳಾ ಕಥಾಸಂಚಯ: ಧಾರವಾಡದಲ್ಲಿ ವಿನೂತನ ಕಾರ್ಯಕ್ರಮ

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಸೆ:22 ರಂದು ಸಂಜೆ 5:30ಕ್ಕೆ ಚೆನ್ನಬಸವ್ವ ಸಾದರ ಅವರ ಸ್ಮರಣಾರ್ಥವಾಗಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈ ವಿನೂತನ ಕಾರ್ಯಕ್ರಮಕ್ಕೆ “ಮಿತಸಮಯ ಮಹಿಳಾ ಕಥಾಸಂಚಯ” ಎಂದು ಹೆಸರಿಡಲಾಗಿದ್ದು, ಹತ್ತು ಜನ ಪ್ರತಿಭಾವಂತ ಮಹಿಳಾ ಕಥೆಗಾರ್ತಿಯರು ತಾವು ಬರೆದ ಹತ್ತು ಹೊಸ ಕಥೆಗಳನ್ನು ತಲಾ ಹತ್ತು ನಿಮಿಷಗಳ ಅವಧಿಯಲ್ಲಿ ವಾಚನ ಮಾಡಲಿದ್ದಾರೆ. ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ…

Read More

ಡಿಜೆ ಇಲ್ಲದೆ, ಗ್ರಾಮೀಣ ಸೊಗಡಿನಿಂದ ಗಣೇಶನಿಗೆ ಬೀಳ್ಕೊಟ್ಟ ಹಿರೇಹೊನ್ನಿಹಳ್ಳಿ ಗ್ರಾಮಸ್ಥರು

ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಜೈ ಶ್ರೀರಾಮ ಗರಡಿ ಮನೆ ಗೆಳೆಯರ ಬಳಗದ ವತಿಯಿಂದ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು 25 ದಿನಗಳ ವಿಶಿಷ್ಟ ಕಾರ್ಯಕ್ರಮಗಳ ನಂತರ ಭಕ್ತಿ ಮತ್ತು ಸಂಭ್ರಮದಿಂದ ವಿಸರ್ಜಿಸಲಾಯಿತು. ಯುವಕರು ಆಧುನಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಡಿಜೆ ಬಳಸದೆ, ಕೋಲಾಟದಂತಹ ಜನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಗಣೇಶೋತ್ಸವದ ಈ 25 ದಿನಗಳಲ್ಲಿ, ಗೆಳೆಯರ ಬಳಗವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿತ್ತು. ಪ್ರತೀ ವರ್ಷದಂತೆ ಈ ವರ್ಷವೂ…

Read More