ಕುಂದಗೋಳ ಲೋಕ ಅದಾಲತ್: 13 ವರ್ಷದ ಆಸ್ತಿ ವಿವಾದ ಇತ್ಯರ್ಥ; ವಿಚ್ಛೇದನ ಪ್ರಕರಣಗಳಲ್ಲೂ ರಾಜೀ
ಕುಂದಗೋಳ: ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಹಲವು ಮಹತ್ವದ ಪ್ರಕರಣಗಳು ಇತ್ಯರ್ಥಗೊಂಡವು. ಇಲ್ಲಿ ನ್ಯಾಯಾಧೀಶರ ಮಾನವೀಯ ಸ್ಪರ್ಶ ಮತ್ತು ಮಾರ್ಗದರ್ಶನದಿಂದಾಗಿ, ಹದಿಮೂರು ವರ್ಷಗಳ ಹಳೆಯ ಆಸ್ತಿ ವಿವಾದವೊಂದು ಸುಖಾಂತ್ಯ ಕಂಡಿದ್ದು, ವಿಚ್ಛೇದನ ಕೋರಿದ್ದ ಮೂರು ದಂಪತಿಗಳು ಮತ್ತೆ ಒಂದಾದರು. ನ್ಯಾಯಾಂಗ ಇತಿಹಾಸದಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಚ್ಛೇದನಕ್ಕಿದ್ದ ಮೂರು ಜೋಡಿಗಳು ಮತ್ತೆ ಒಂದಾದವುಹಿರಿಯ ಸಿವಿಲ್ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರ ಸಲಹೆಯ…

