ಪಂ. ಬಸವರಾಜ ರಾಜಗುರು ಸ್ಮರಣೆಯಲ್ಲಿ ನ. 22 ಮತ್ತು 23ಕ್ಕೆ ವಚನ ಸಂಗೀತೋತ್ಸವ ಆಯೋಜನೆ
ಧಾರವಾಡ, ನ. 18: ಪದ್ಮಭೂಷಣ ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ, ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ವಚನ ಸಂಗೀತೋತ್ಸವ–2025 ಕಾರ್ಯಕ್ರಮವನ್ನು ನವೆಂಬರ್ 22 ಮತ್ತು 23, 2025 ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷರಾದ ಪಂ. ಕೈವಲ್ಯಕುಮಾರ ಗುರವ ಅವರು ಪ್ರಕಟಿಸಿದರು. ಅವರು ಮಂಗಳವಾರದಂದು(ನ. 18) ಸಂಜೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ…

