ಮನಸ್ಸಿನ ಆರೋಗ್ಯಕ್ಕೆ ಸಂಗೀತ ಅಗತ್ಯ: ಡಾ. ಎಂ. ಎಸ್. ಪಾಟೀಲ
ಧಾರವಾಡ: ಮನಸ್ಸಿನ ಖಿನ್ನತೆ ಮತ್ತು ಆತಂಕವನ್ನು ನಿವಾರಿಸಿ, ಮನಸ್ಸನ್ನು ಆರೋಗ್ಯದಾಯಕವಾಗಿಡಲು ಸಂಗೀತವು ಅತ್ಯಗತ್ಯವಾಗಿದೆ. ಸಂಗೀತ ಹಾಗೂ ನೃತ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕೃಷಿ ವಿಜ್ಞಾನಿ ಡಾ. ಎಂ. ಎಸ್. ಪಾಟೀಲ ಅವರು ಅಭಿಪ್ರಾಯಪಟ್ಟರು. ಅವರು ಗುರುವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತಕ್ಕೆ ಇತ್ತೀಚಿನದಲ್ಲದ ೫ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಸಾಮವೇದದಲ್ಲಿಯೂ ಸಂಗೀತದ ಉಲ್ಲೇಖವಿದ್ದು, ಮನುಷ್ಯನ ಮನರಂಜನೆಗೆ ಇದು ಬೇಕೇಬೇಕು. ನಾಗರಿಕತೆ ಪ್ರಾರಂಭವಾದಾಗಲೇ ಸಂಗೀತವು…

