ಕನ್ನಡ ಅತ್ಯಂತ ಸುಂದರ ಭಾಷೆ, ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ: ಡಾ. ರೇಣುಕಾ ಅಮಲಝರಿ ಕರೆ
ಧಾರವಾಡ, ನ. 21: “ಭಾರತೀಯ ಭಾಷೆಗಳಲ್ಲಿ ಬರೆಯಲು, ಓದಲು, ಮಾತನಾಡಲು ಅತ್ಯಂತ ಸುಂದರವಾದ ಭಾಷೆ ಕನ್ನಡ ಮಾತ್ರ. ಕನ್ನಡ ನುಡಿ ಕನ್ನಡಿಗರಾಡುವ ಕಸ್ತೂರಿ ಕನ್ನಡ ಭಾಷೆ. ಇದು ಕಸ್ತೂರಿಯಷ್ಟೇ ಪರಿಮಳಯುಕ್ತವಾದದ್ದು” ಎಂದು ಡಾ. ರೇಣುಕಾ ಅಮಲಝರಿ ಅವರು ಹೇಳಿದರು. ಶುಕ್ರವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘವು (ಕವಿವ ಸಂಘ) ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಧಕರ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕವಿವ ಸಂಘವು 136 ವರ್ಷಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿ…

