ರಾಯರದೊಡ್ಡಿ: ಅನ್ನ ನೀಡಿದ ಅಮ್ಮನ ಅಗಲಿಕೆಗೆ ಕಣ್ಣೀರಿಟ್ಟ ಮಂಗ; ಮಾನವೀಯತೆ ಮೀರಿದ ಮೂಕಪ್ರಾಣಿಯ ಮಮತೆ
ರಾಮನಗರ: ಸ್ವಾರ್ಥ ತುಂಬಿದ ಈ ಆಧುನಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳೇ ನಶಿಸುತ್ತಿರುವ ಕಾಲವಿದು. ಆದರೆ, ತನಗೆ ಅನ್ನ ನೀಡಿದ ಕೈಗಳನ್ನು ಮರೆಯದ ಮೂಕಪ್ರಾಣಿಯೊಂದು ವೃದ್ಧೆಯ ಸಾವಿಗೆ ಮರುಗಿ ಕಣ್ಣೀರಿಟ್ಟ ಹೃದಯಸ್ಪರ್ಶಿ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ರಾಯರದೊಡ್ಡಿಯಲ್ಲಿ ನಡೆದಿದೆ. ಬಿ.ವಿ. ಹಳ್ಳಿ ನಿವಾಸಿ ಪಾರ್ವತಮ್ಮ (85) ಎಂಬುವವರು ಇಹಲೋಕ ತ್ಯಜಿಸಿದಾಗ, ಅವರ ಪಾರ್ಥಿವ ಶರೀರವನ್ನು ತಬ್ಬಿಕೊಂಡು ಮುತ್ತಿಕ್ಕುತ್ತಾ ಮಂಗವೊಂದು ಪಟ್ಟ ಪಾಡು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಮೃತ ಪಾರ್ವತಮ್ಮ ಅವರು ಕಳೆದ ದಶಕಗಳಿಂದ ತಮ್ಮ ಮನೆ…

