ಹಟ್ಟಿ ಹಬ್ಬದ ದುರಂತ: ಹಾವೇರಿಜಿಲ್ಲೆಯಲ್ಲಿ ಹೋರಿ ತಿವಿದು ನಾಲ್ವರು ಬಲಿ, ಶೋಕ ಮಡುವು
ಹಾವೇರಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಹಟ್ಟಿ ಹಬ್ಬದ ಆಚರಣೆ ವೇಳೆ ಬುಧವಾರ ಸಂಭವಿಸಿದ ನಾಲ್ಕು ಪ್ರತ್ಯೇಕ ದುರಂತಗಳಲ್ಲಿ ಕೊಬ್ಬರಿ ಹೋರಿಗಳ ತಿವಿತಕ್ಕೆ ಸಿಲುಕಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಒಂದೇ ದಿನ ನಾಲ್ಕು ಪ್ರಾಣಹಾನಿ ಸಂಭವಿಸಿರುವುದು ಜಿಲ್ಲೆಯಲ್ಲಿ ಶೋಕದ ವಾತಾವರಣಕ್ಕೆ ಕಾರಣವಾಗಿದೆ. ಹಾವೇರಿ ನಗರ, ಹಾನಗಲ್ಲ ಮತ್ತು ಹಾವೇರಿ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಈ ದುರ್ಘಟನೆಗಳು ನಡೆದಿವೆ. ಹಾವೇರಿ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಆಯೋಜಿಸಲಾಗಿದ್ದ ಹೋರಿ ಹಬ್ಬದ ಸ್ಪರ್ಧೆಯ ಸಂದರ್ಭದಲ್ಲಿ…

