ಟ್ರ್ಯಾಕ್ ಸಂಗೀತದ ಮೂಲಕ ಹೊಸ ಸಂಚಲನ; ಗ್ರಾಮೀಣ ಭಾಗಕ್ಕೂ ಕರೋಕೆ ಸಂಗೀತ ತಲುಪಲಿ: ಸತೀಶ ತುರಮರಿ
ಧಾರವಾಡ: ಕರೋಕೆ ಸಂಗೀತವು ಕೇವಲ ಹವ್ಯಾಸವಾಗಿ ಉಳಿಯದೆ, ಇಂದು ಒಂದು ಪ್ರಬಲ ಸಂಗೀತ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾದ ಸತೀಶ ತುರಮರಿ ಅವರು ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸಂಗೀತ ವರ್ಷಿಣಿ ಕಲಾ ಸಂಸ್ಥೆಯು ಆಯೋಜಿಸಿದ್ದ ರಾಜ್ಯಮಟ್ಟದ ಕರೋಕೆ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರೋಕೆ ಸಂಗೀತಗಾರರು ಹುಟ್ಟಿನಿಂದ ಸಂಗೀತಾಭ್ಯಾಸ ಮಾಡದಿದ್ದರೂ, ತಮ್ಮ ವೃತ್ತಿ ಜೀವನದ ಒತ್ತಡದ ನಡುವೆ ಸಂಗೀತವನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ಯಾವುದೇ…

