ಹಿಮಾಚಲದಲ್ಲಿ ಭೀಕರ ಭೂಕುಸಿತ: ಬಸ್ ಸೇರಿ ಹಲವು ವಾಹನಗಳು ಮಣ್ಣಿನಡಿ, 16 ಜನರ ಸಾವು
ಶಿಮ್ಲಾ: ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಭೂಕುಸಿತದಿಂದಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ (HRTC) ಬಸ್ ಸೇರಿದಂತೆ ಹಲವು ವಾಹನಗಳು ದೊಡ್ಡ ಕಲ್ಲುಬಂಡೆಗಳು ಮತ್ತು ಮಣ್ಣಿನ ಅವಶೇಷಗಳಡಿಯಲ್ಲಿ ಸಿಲುಕಿ ಭೀಕರ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಕಿನೌರ್ನ ನಿಗುಲ್ಸರಿ (Nigulsari) ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಸುಮಾರು 12:45 ರ ಸುಮಾರಿಗೆ ಈ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಸಾರಿಗೆ ಬಸ್, ಟ್ರಕ್ ಮತ್ತು ಕೆಲವು ಕಾರುಗಳು…

