ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದ ಡಾ: ಗ್ರಾಡೆಲಿನ್ ರಾಯ್ ತಾವು ಹೃದಯಾಘಾತದಿಂದ ಸಾವು

ಚೆನ್ನೈ: ತಾವು ಚಿಕಿತ್ಸೆ ನೀಡುತ್ತಿದ್ದ ಹೃದಯ ಸಂಬಂಧಿ ಕಾಯಿಲೆಗೇ ಯುವ ವೈದ್ಯರೊಬ್ಬರು ಬಲಿಯಾಗಿರುವ ಹೃದಯವಿದ್ರಾವಕ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡೆಲಿನ್ ರಾಯ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಚೆನ್ನೈನ ಸವಿತಾ ವೈದ್ಯಕೀಯ ಕಾಲೇಜಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಆಗಿದ್ದ ಡಾ. ಗ್ರಾಡೆಲಿನ್ ರಾಯ್ ಅವರು ವಾರ್ಡ್ ಸುತ್ತುಗಳ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರ ಸಹೋದ್ಯೋಗಿಗಳು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ.ತಕ್ಷಣವೇ ಅವರಿಗೆ ಸಿಪಿಆರ್…

Read More

ಸಾಲ ಭಾಧೆ ತಾಳಲಾರದೆ ಅಮರಗೋಳದ ರೈತ ಆತ್ಮಹತ್ಯೆ

ನವಲಗುಂದ: ತಾಲ್ಲೂಕಿನ ಅಮರಗೋಳ ಗ್ರಾಮದ ಯುವ ರೈತ ಕಾಂತೇಶ ಯಲ್ಲಪ್ಪ ದೊಡ್ಡಮನಿ (28) ಅವರು ಬೆಳೆ ನಷ್ಟ ಮತ್ತು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತ ಘಟನೆಯು ತೀವ್ರ ಸಂಕಟವನ್ನುಂಟು ಮಾಡಿದೆ ಎಂದು ನವಲಗುಂದ ಮತಕ್ಷೇತ್ರದ ಮಾಜಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಘಟನೆಯ ವಿವರ:ರೈತ ಕಾಂತೇಶ ದೊಡ್ಡಮನಿ ಅವರು ಕೆವಿಜಿಬಿ ಬ್ಯಾಂಕ್‌ನಲ್ಲಿ ₹4 ಲಕ್ಷ ಮತ್ತು ವಿವಿಧ ಸಂಘಗಳಿಂದ ₹1.5 ಲಕ್ಷ ಸೇರಿ ಅಂದಾಜು ₹5.5 ಲಕ್ಷ ಸಾಲ…

Read More

ದೊಡ್ಡಬಳ್ಳಾಫುರ:ಪಟಾಕಿ ಅವಘಡ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಲಕ ಸಾವು, ಹಲವರಿಗೆ ಸುಟ್ಟ ಗಾಯ

ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ಪಟಾಕಿ ಅವಘಡದಿಂದ 15 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಪೊಲೀಸ್ ಕಾನ್ಸ್ಟೆಬಲ್ ಸೇರಿ ಹಲವರು ಗಾಯಗೊಂಡಿರುವ ದುರ್ಘಟನೆ ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರಿನಲ್ಲಿ ನಡೆದಿದೆ.ಮೃತ ಬಾಲಕನನ್ನು ತನುಷ್ ರಾವ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತನುಷ್ ರಾವ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿವರ:ಶುಕ್ರವಾರ ಸಂಜೆ 5.30ರ ಸುಮಾರಿಗೆ ‘ಫ್ರೆಂಡ್ಸ್ ವಿನಾಯಕ ಗ್ರೂಪ್’ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಗೆ…

Read More

ಬೆನಕನಹಳ್ಳಿ: ಬೈಕ್ ಸ್ಕಿಡ್ ಆಗಿ ಬಿದ್ದು ಮಹಿಳೆ ಸಾವು, ಚಾಲಕನಿಗೆ ಗಾಯ

ಕುಂದಗೋಳ: ಅಜಾಗರೂಕತೆಯ ಚಾಲನೆಯಿಂದಾಗಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ, ಹಿಂಬದಿ ಸವಾರರಾಗಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆನಕನಹಳ್ಳಿ-ಮುಳ್ಳಹಳ್ಳಿ ರಸ್ತೆಯಲ್ಲಿ ನಡೆದಿದೆ. ಆಗಸ್ಟ್ 24ರ ರಾತ್ರಿ 8:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಘಟನೆ ವಿವರಶಿರಗುಪ್ಪಿ ಗ್ರಾಮದ ಶಿವಕುಮಾರ್ (28) ಎಂಬಾತನು ಕೆಎ-63/ಎಲ್-7661 ಸಂಖ್ಯೆಯ ತನ್ನ ಮೋಟಾರ್‌ಸೈಕಲ್‌ನಲ್ಲಿ ಬೆನಕನಹಳ್ಳಿ ಕಡೆಯಿಂದ ಮುಳ್ಳಹಳ್ಳಿ ಕಡೆಗೆ ವಾಹನ ಚಲಾಯಿಸುತ್ತಿದ್ದನು. ಈ ಸಂದರ್ಭದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದಿದೆ. ಇದರ ಪರಿಣಾಮ, ಬೈಕ್‌ನ…

Read More

ಗಣೇಶ ಮೂರ್ತಿಗೆ ವಿದ್ಯುತ್ ತಗುಲಿ 10ಕ್ಕೂ ಹೆಚ್ಚು ಜನರು ಸಾವು ತೆಲಂಗಾಣದ ವಿಡಿಯೋ ವೈರಲ್

ತೆಲಂಗಾಣದಲ್ಲಿ: ಗಣೇಶ ಮೂರ್ತಿಗೆ ವಿದ್ಯುತ್ ತಗುಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ದುರಂತದ ಕುರಿತು: ಮಹಾವೀರ ಜೈನ ಎಂಬುವವರು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೇವಲ ಅಪಘಾತವಲ್ಲ, ಬದಲಾಗಿ ನಮ್ಮೆಲ್ಲರ ಬೇಜವಾಬ್ದಾರಿಯ ಪರಿಣಾಮ ಎಂದು ಅವರು ಆತಂಕದಿಂದ ಹೇಳಿದ್ದಾರೆ. ಮಹಾವೀರ ಜೈನ ಅವರು, ಹಬ್ಬದ ಸಂಭ್ರಮದ ನಡುವೆಯೂ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಬಾರದು ಎಂದು ಗಣೇಶ ಮಂಡಳಿಗಳು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ಜೀವದ ಮೌಲ್ಯ ಯಾವುದೇ ಹಬ್ಬಕ್ಕಿಂತಲೂ ದೊಡ್ಡದು…

Read More

ತಲಪಾಡಿಯಲ್ಲಿ ಭೀಕರ ಅಪಘಾತ ಆಟೋ-ಬಸ್ ಡಿಕ್ಕಿ: ನಾಲ್ವರು ಮಹಿಳೆಯರು, ಮಗು ಸೇರಿ ಆರು ಜನ ಸ್ಥಳದಲ್ಲೇ ದುರ್ಮರಣಆಟೋ ಚಾಲಕನ ಸ್ಥಿತಿ ಚಿಂತಾಜನಕ

ಮಂಗಳೂರು, ಆ.28 – ಮಂಗಳೂರಿನ ಉಳ್ಳಾಲ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ಆರುಬಜನ ಮೃತಪಟ್ಟಿರುವ ದುಃಖದ ಸುದ್ದಿ ವರದಿಯಾಗಿದೆ. ಮಧ್ಯಾಹ್ನದ ವೇಳೆ ಕೆಸಿ ರೋಡ್ ದಿಕ್ಕಿನಿಂದ ತೆರಳುತ್ತಿದ್ದ ಆಟೋ ರಿಕ್ಷಾ ಮತ್ತು ಬಸ್ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ರಿಕ್ಷಾ ಸಂಪೂರ್ಣ ಚೂರುಚೂರುಗೊಂಡಿದ್ದು, ಒಳಗಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಒಂದು ಮಗು ಸೇರಿ ಒಟ್ಟು 06, ಜನ, ಇವರು…

Read More

ವಡೋದರಾದಲ್ಲಿ ಗಣೇಶ ಚತುರ್ಥಿ ವೇಳೆ ಗಣೇಶ ವಿಗ್ರಹಕ್ಕೆ ಮೊಟ್ಟೆ ಎಸೆದ ಕಿಡಿಗೇಡಿಗಳಿಗೆ ಕೈ ಹಗ್ಗ ಕಟ್ಟಿ ಸಾರ್ವಜನಿಕವಾಗಿ ಊರೆಲ್ಲ ಮೆರವಣಿಗೆ

ವಡೋದರ (ಗುಜರಾತ್), ಆ.28 – ವಡೋದರ ನಗರದ ಸತ್ಯವಿಸ್ತಾರ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಗಣೇಶ ಚತುರ್ಥಿಯ ಮೆರವಣಿಗೆಯ ಸಂದರ್ಭದಲ್ಲಿ ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಮೊಟ್ಟೆ ಎಸೆದ ಹೀನ ಕೃತ್ಯದಿಂದ ನಗರದಲ್ಲಿ ತೀವ್ರ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಅಮಾನುಷ ಕೃತ್ಯವು ಭಕ್ತರಲ್ಲಿ ಆಕ್ರೋಶ ಉಂಟುಮಾಡಿದೆ. ಪೊಲೀಸ್ ಆಯುಕ್ತ ನರಸಿಂಹ ಕೋಮರ್ ಅವರ ಆದೇಶದ ಮೇರೆಗೆ, ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಬಂಧಿಸಿದರು. ಬಂಧಿತ ಆರೋಪಿಗಳಲ್ಲಿ ಸುಫಿಯಾನ್ ಅಲಿಯಾಸ್ ಗಾಮಾ ಸಲೀಂಬಾಯಿ ಮನ್ಸೂರಿ, ಶಹನವಾಜ್ ಅಲಿಯಾಸ್…

Read More

ಮಹಾರಾಷ್ಟ್ರ ಪಲ್ಘಾರ್: ಕಳಪೆ ಕಟ್ಟಡ ಕುಸಿತಕ್ಕೆ 6 ಬಲಿ, 8 ಗಾಯ

ಪಲ್ಘಾರ್ (ಮಹಾರಾಷ್ಟ್ರ): ನಿರ್ಮಾಣದ ಕಳಪೆ ಗುಣಮಟ್ಟ ಮತ್ತು ಅನಧಿಕೃತ ಕಟ್ಟಡಗಳ ನಿರ್ಲಕ್ಷ್ಯವು ಮತ್ತೊಮ್ಮೆ ಭೀಕರ ದುರಂತಕ್ಕೆ ಕಾರಣವಾಗಿದೆ. ಇಲ್ಲಿನ ವಿರಾರ್ ಪಟ್ಟಣದಲ್ಲಿ ಅನಧಿಕೃತ ನಾಲ್ಕು ಮಹಡಿಗಳ ಕಟ್ಟಡವೊಂದು ಕುಸಿದು, ಪಕ್ಕದ ಕಟ್ಟಡದ ಮೇಲೆ ಬಿದ್ದ ಪರಿಣಾಮ ಆರು ಮಂದಿ ದುರಂತ ಅಂತ್ಯ ಕಂಡಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ತಡರಾತ್ರಿ 12.05ರ ಸುಮಾರಿಗೆ ‘ರಮಾಬಾಯಿ ಅಪಾರ್ಟ್‌ಮೆಂಟ್’‌ನ ಹಿಂಭಾಗವು ದಿಢೀರನೆ ಕುಸಿದಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡವು…

Read More

ಚಳ್ಳಕೆರೆ ಪೊಲೀಸರಿಂದ ಕಳ್ಳನ ಬಂಧನ: 24 ಗಂಟೆಯೊಳಗೆ 97 ಲಕ್ಷ ರೂ. ವಶ!

ಚಿತ್ರದುರ್ಗ: ಕೇವಲ ಊಟಕ್ಕೆಂದು ಕಾರು ನಿಲ್ಲಿಸಿ ಹೋದಾಗ, ಕಾರು ಚಾಲಕನೇ ಅದರಲ್ಲಿದ್ದ ಕೋಟಿಗೆ ಸಮೀಪದ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದನು. ಆದರೆ, ಈ ಕಳ್ಳತನದ ಪ್ರಕರಣ ದಾಖಲಾದ 24 ಗಂಟೆಯೊಳಗೇ ಚಳ್ಳಕೆರೆ ಪೊಲೀಸರು ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಬರೋಬ್ಬರಿ 96,96,800 ರೂ. ಹಣ ವಶಪಡಿಸಿಕೊಂಡಿದ್ದು, ತಕ್ಷಣದ ನ್ಯಾಯ ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆ ಪೊಲೀಸರ ದಕ್ಷತೆಗೆ ಹಿಡಿದ ಕನ್ನಡಿಯಾಗಿದ್ದು, ಅಪರಾಧಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದೆ. ಘಟನೆಯ ವಿವರಕಳೆದ ಮಂಗಳವಾರ (ಆಗಸ್ಟ್ 26) ಚಳ್ಳಕೆರೆಯ…

Read More

ರಾಗಿ ಮುದ್ದೆಗೆ ನಿದ್ರೆ ಮಾತ್ರೆ ಬೆರೆಸಿ ಅತ್ತೆಯ ಕೊಲೆ: ಸೊಸೆ, ಪ್ರಿಯಕರ ಬಂಧನ

ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಅಸಹ್ಯಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಸೊಸೆಯೊಬ್ಬಳು ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೊಸೆ ಅಶ್ವಿನಿ ಮತ್ತು ಆಕೆಯ ಪ್ರಿಯಕರ ಆಂಜನೇಯನನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯೇನು?ಆಗಸ್ಟ್‌ 10ರಂದು ಅತ್ತೆ ದೇವಿರಮ್ಮ ಮೃತಪಟ್ಟಾಗ, ಕುಟುಂಬದವರು ಇದೊಂದು ಸಹಜ ಸಾವು ಎಂದು ತಿಳಿದು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ಕೆಲವೇ ದಿನಗಳಲ್ಲಿ…

Read More