ದೇವರಾಜ ಅರಸು ಅವರು ಆಡಳಿತಗಾರರಿಗೆ ಸದಾ ಮಾದರಿ: ಸಂಶಿ ಗ್ರಾ ಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ

Spread the love

ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಗಿರೀಶಗೌಡ ಪಾಟೀಲ್ ಅವರು ಮಾತನಾಡಿ, “ಭೂ ಸುಧಾರಣೆ, ಮೀಸಲಾತಿ, ಮತ್ತು ಮಲಹೊರುವ ಪದ್ಧತಿಯ ನಿಷೇಧದಂತಹ ಮಹತ್ವದ ಯೋಜನೆಗಳಿಗಾಗಿ ರಾಜ್ಯದ ಜನತೆ ಯಾವ ಚಳುವಳಿ ಅಥವಾ ಹೋರಾಟಗಳನ್ನು ನಡೆಸಿರಲಿಲ್ಲ. ಇವುಗಳನ್ನೆಲ್ಲ ದೇವರಾಜ ಅರಸು ಅವರು ಜನ ಕೇಳದೆಯೇ, ಅವರ ಹಿತವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿದ್ದರು” ಎಂದು ಸ್ಮರಿಸಿದರು. ಅರಸು ಅವರು ರಾಜ್ಯದ ಜನತೆಗೆ ಸಾಮಾಜಿಕವಾಗಿ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಪ್ರಿಯ ರಾಜಕಾರಣಿಯಾಗಿದ್ದರು. ಅವರು ಜಾರಿಗೆ ತಂದ ಯೋಜನೆಗಳು ಸದಾ ಜನಮಾನಸದಲ್ಲಿ ಉಳಿದಿವೆ. ಅವರ ಜನ್ಮದಿನದಂದು ಅವರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದು ಅವರು ಹೇಳಿದರು.

ಮಾತನಾಡಿದ ಕೆಪಿಸಿಸಿ ಓಬಿಸಿ ರಾಜ್ಯ ಕಾರ್ಯದರ್ಶಿ ಮತ್ತು ಗ್ರಾ.ಪಂ. ಸದಸ್ಯರಾದ ಎಚ್.ಎಸ್. ಲಕ್ಷ್ಮೀಶ್ವರ ಅವರು, "ಕರ್ನಾಟಕ ಕಂಡ ಅಪ್ರತಿಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ದೇವರಾಜ ಅರಸು ಅವರು ತಮ್ಮ ಜನಪರ ಕಾಳಜಿ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ದೂರದೃಷ್ಟಿಯಿಂದಾಗಿ ಇಂದಿಗೂ ಆಡಳಿತಗಾರರಿಗೆ ಮಾದರಿಯಾಗಿದ್ದಾರೆ" ಎಂದು ಬಣ್ಣಿಸಿದರು. ಅರಸು ಅವರಿಗೆ ಅಧಿಕಾರವು ಕೇವಲ ಗುರಿಯಾಗಿರಲಿಲ್ಲ, ಬದಲಾಗಿ ತಮ್ಮ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಧನವಾಗಿತ್ತು, ಇದೇ ಕಾರಣದಿಂದ ಅವರು ಪರಿವರ್ತನೆಯ ಹರಿಕಾರರಾಗಿ ಬೆಳೆದರು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ ಸೂಲದ, ಸದಸ್ಯರಾದ ರಾಜು ಪುಟ್ಟಣ್ಣವರ,ಲಕ್ಷ್ಮೀ ಪೂಜಾರ, ಬಸವರಾಜ ನಾಯ್ಕರ್, ನಿಂಗವ್ವ ಕುಮ್ಮನ್ನವರ್, ದೇವಪ್ಪ ಮೋರಪಂತರ್, ಮಲ್ಲೇಶ ಬೆಳವಡಿ, ರೇಖಾ ಕರಕಣ್ಣವರ, ನೀಲವ್ವ ಹೂಗಾರ, ಹಸೀನಾಬೇಗಂ ದೇಸಾಯಿ, ಹಸೀನಾ ಗುಂಜಳ, ಸುಬಾಸ ಕಲಾಲ, ಜೋಗೇಪ್ಪ ಜಾಲಿಹಾಳ, ರಾಧಾ ಚಿನ್ನಣ್ಣವರ್, ಮುತ್ತು ಸೋರಟ್ಟಿ, ಜಗದೀಶ ದ್ಯಾವನೂರ, ಫಕ್ಕೀರೇಶ ಪಶುಪತಿಹಾಳ, ತಶ್ಚಿಮಾ ಕಣವಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಪೋಟೋ: ತಾಲ್ಲೂಕಿನ ಸಂಶಿ ಗ್ರಾಮದ ಗ್ರಾ ಪಂ ಸಭಾಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಗಣ್ಯರು ದಿನಾಚರಣೆ ಆಚರಿಸಿದರು.

Leave a Reply

Your email address will not be published. Required fields are marked *