ಮಕ್ಕಳ ಕನಸುಗಳಿಗೆ ಬಣ್ಣ ತುಂಬಿದ ಎರಡು ಕೃತಿಗಳ ಲೋಕಾರ್ಪಣೆ
ಧಾರವಾಡ: ಮಕ್ಕಳ ಸಾಹಿತ್ಯದ ಮೂಲಕ ಎಳೆಯ ಮನಸ್ಸುಗಳನ್ನು ಪೋಷಿಸುವ ಹಾಗೂ ಅವರ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಶಿಕ್ಷಕರಾದ ಶ್ರೀಧರ್ ಗಸ್ತಿಯವರು ಶ್ಲಾಘನೀಯವಾಗಿ ಮಾಡುತ್ತಿದ್ದಾರೆ ಎಂದು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಚಿಲಿಪಿಲಿ ಪ್ರಕಾಶನ ಆಯೋಜಿಸಿದ್ದ ಶ್ರೀಧರ್ ಗಸ್ತಿ ಅವರ “The Cup Touched by Devamma” (ದೇವಮ್ಮನ ಲೋಟ – ಇಂಗ್ಲಿಷ್ ಅನುವಾದ) ಹಾಗೂ “ಎಲೆಬಾಳೆ ಸುಳಿನನವ್ವ” ಕೃತಿಗಳ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಜೀವನಾನುಭವದ…

