ಮಳೆಯೂ ಕೈಕೊಟ್ಟಿತು, ಸರ್ಕಾರವೂ ಕೈಬಿಟ್ಟಿತು?: ಬಾಗಲಕೋಟೆಯ ಲಿಂಗಾಪುರ ಗ್ರಾಮ ಖಾಲಿ ಅಧಿಕಾರಿಗಳೇ – ಜನಪ್ರತಿನಿಧಿಗಳೇ, ಇತ್ತ ಕಣ್ಣು ಹಾಯಿಸಿ!
ಪಬ್ಲಿಕ ಸಮಾಚಾರ ವಿಶೇಷ ವರದಿ ಗುಳೇದಗುಡ್ಡ / ಬಾಗಲಕೋಟೆ: ಒಂದೆಡೆ ಕಣ್ಣೀರಾಗಿಸುವ ಭೀಕರ ಬರ, ಇನ್ನೊಂದೆಡೆ ಆಡಳಿತಾರೂಢ ಸರ್ಕಾರ ಮತ್ತು ಜನಪ್ರತಿನಿಧಿಗಳ ಭೀಕರ ನಿಷ್ಕ್ರಿಯತೆ! ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮ ಇಂದು ಭೀಕರ ಬರದ ದವಡೆಗೆ ಸಿಲುಕಿ ಬಿಕೋ ಎನ್ನುತ್ತಿದೆ. ಊರಿಗೆ ಊರೇ ಖಾಲಿಯಾಗುತ್ತಿದ್ದರೂ, ಶಾಸಕರು, ಸಂಸದರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿದ್ರೆಯಲ್ಲಿದ್ದಾರೆ ಯೇ ಎಂಬ ಸಾರ್ವಜನಿಕ ಆಕ್ರೋಶ ಮುಗಿಲುಮುಟ್ಟಿದೆ. ಬೀಗ ಬಿದ್ದ ಮನೆಗಳು, ವೃದ್ಧರ ನಿಟ್ಟುಸಿರು: ಸುಮಾರು 300ಕ್ಕೂ ಹೆಚ್ಚು ಮನೆಗಳು, 2,000ದಷ್ಟು…

