ಕೃಷಿ ಭೂಮಿಯ ಮೇಲೆ ಕರಾಳ ನೆರಳು: ಕುಂದಗೋಳದಲ್ಲಿ 79 ಅನಧಿಕೃತ ಆಸ್ತಿ ಪತ್ತೆ!
🌾 ಕೃಷಿ ಭೂಮಿಯ ಮೇಲೆ ಕರಾಳ ನೆರಳು: ಕುಂದಗೋಳದಲ್ಲಿ 79 ಅನಧಿಕೃತ ಆಸ್ತಿ ಪತ್ತೆ ಲಾಭದ ಆಸೆಗೆ ಸರ್ಕಾರಿ ನಿಯಮ ಗಾಳಿಗೆ ತೂರಿದ ಬಂಡವಾಳಶಾಹಿಗಳು: ಅನ್ನದಾತ ಕಂಗಾಲು ಕುಂದಗೋಳ: ವಾಣಿಜ್ಯ ರಾಜಧಾನಿ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ತಾಗಿಕೊಂಡಿರುವ ಕುಂದಗೋಳ ಪಟ್ಟಣವು ನಿರಂತರ ಆರ್ಥಿಕವಾಗಿ ಬೆಳೆಯುತ್ತಿರುವಂತೆಯೇ, ಇದರ ಕೃಷಿ ಭೂಮಿಯ ಮೇಲೆ ಇದೀಗ ಬಂಡವಾಳಶಾಹಿಗಳ ಕರಾಳ ನೆರಳು ಆವರಿಸಿದೆ. ಅನ್ನ ಬೆಳೆಯುವ ನೆಲವನ್ನೇ ಗುರಿಯಾಗಿಸಿಕೊಂಡಿರುವ ಕೆಲ ಭೂಗಳ್ಳರು ಮತ್ತು ಬಂಡವಾಳಶಾಹಿಗಳು, ರೈತರಿಗೆ ಹಣದ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಯಾವುದೇ ಕಾನೂನುಬದ್ಧ…

