ಡಾ. ಎಂ.ಎಂ. ಕಲಬುರ್ಗಿ ಬದುಕು ಎಲ್ಲರಿಗಾಗಿ ಸಮರ್ಪಣೆ: ಪ್ರಾಚಾರ್ಯ ಡಾ. ಕಲ್ಲನಗೌಡರ ಅಭಿಮತ
ಧಾರವಾಡ: ಎಲ್ಲರಂತೆ ಬದುಕದೇ, ಎಲ್ಲರಿಗಾಗಿ ಬದುಕಿದ ಸಾರ್ಥಕ ಬದುಕು ಡಾ. ಎಂ.ಎಂ. ಕಲಬುರ್ಗಿಯವರದಾಗಿತ್ತು. ನಿಸ್ವಾರ್ಥ ಮನೋಭಾವದ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಾಗಿತ್ತೆಂದರೆ, ‘ವಿದ್ಯಾರ್ಥಿಗಳೇ ನನ್ನ ನಿಜವಾದ ವಾರಸುದಾರರು’ ಎಂಬ ಉದಾತ್ತ ಭಾವನೆಯನ್ನು ಅವರು ಹೊಂದಿದ್ದರು” ಎಂದು ಮುಳಗುಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಕಲ್ಲನಗೌಡರ ಅವರು ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಧಾರವಾಡದ ಕಲ್ಯಾಣ ನಗರದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಕಾಲೇಜಿನಲ್ಲಿ, ಧಾರವಾಡದ ಕವಿವ ಸಂಘವು ಆಯೋಜಿಸಿದ್ದ ಡಾ. ಎಂ.ಎಂ. ಕಲಬುರ್ಗಿ…

