ಧಾರವಾಡ: ನಾಗರಿಕ ಬಂದೂಕು ತರಬೇತಿಗೆ ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನ
ಧಾರವಾಡ: ಸಾರ್ವಜನಿಕರಲ್ಲಿ ಆತ್ಮರಕ್ಷಣೆ ಹಾಗೂ ಶಿಸ್ತು ಮೂಡಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ ನಾಗರಿಕರಿಗಾಗಿ ವಿಶೇಷ ‘ಬಂದೂಕು ತರಬೇತಿ’ ಶಿಬಿರವನ್ನು ಆಯೋಜಿಸಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು, ಆಸಕ್ತ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ನಗರದ ಡಿ.ಎ.ಆರ್ (D.A.R) ಘಟಕದ ಪೊಲೀಸ್ ಕವಾಯತು ಮೈದಾನದಲ್ಲಿ ಜನೆವರಿ 12 ರಿಂದ ಜನೆವರಿ 18 ರವರೆಗೆ ಒಟ್ಟು ಏಳು ದಿನಗಳ ಕಾಲ ಈ ತರಬೇತಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 6:30…

