ಭ್ರಷ್ಟ ವ್ಯವಸ್ಥೆಯ ವಿರುದ್ಧ ಕುಬಿಹಾಳ ಗ್ರಾ ಪಂ ಎದುರಿಗೆ ಇಂದು ಮರಣ ಮೃದಂಗದ ಸಂಶಯ: ಇಚ್ಛಾ ಮರಣಕ್ಕೆ ಮುಂದಾದ ಯುವಕ!
ಕುಂದಗೋಳ: ನಾಡಿನಲ್ಲಿ ಭ್ರಷ್ಟಾಚಾರದ ಹಾವಳಿ ಎಷ್ಟರಮಟ್ಟಿಗೆ ಮಿತಿಮೀರಿದೆ ಎಂದರೆ, ಸಾಮಾನ್ಯ ಪ್ರಜೆಯೊಬ್ಬ ಭ್ರಷ್ಟರ ಕೂಪದಲ್ಲಿ ಬದುಕಲಾರದೆ ಸಾವನ್ನೇ ಅಪ್ಪಿಕೊಳ್ಳಲು ನಿರ್ಧರಿಸುವಂತಹ ಭೀಕರ ಪರಿಸ್ಥಿತಿ ಇಂದು ಎದುರಾಗಿದೆ. ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಯುವಕ ನಾಗರಾಜ್ ಗುರುಸಿದ್ದಪ್ಪ ಹುಬ್ಬಳ್ಳಿ ಎಂಬುವವರು ವ್ಯವಸ್ಥೆಯ ಭ್ರಷ್ಟಾಚಾರಕ್ಕೆ ಬೇಸತ್ತು ಇಂದು (ಜ. 9) ಕುಬಿಹಾಳ ಗ್ರಾಮ ಪಂಚಾಯಿತಿ ಮುಂದೆ ‘ಇಚ್ಛಾ ಮರಣ’ಕ್ಕೆ ಮುಂದಾಗುವ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. ಸಾಮಾನ್ಯವಾಗಿ ಭ್ರಷ್ಟಾಚಾರ ಕಂಡಾಗ ಜನರು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನಿಸುವುದು, ಲೋಕಾಯುಕ್ತಕ್ಕೆ ದೂರು…

