ನಾಡಹಬ್ಬ-2025: ಕ.ವಿ.ವ. ಸಂಘದಿಂದ ತಿಂಗಳ ಪೂರ್ಣ ಕಾರ್ಯಕ್ರಮಕ್ಕೆ ಚಾಲನೆ — 3ರಂದು ‘ಡಾ. ಗಣೇಶ ದೇವಿ’ ಅವರಿಂದ ‘ಧರೆಗೆ ದೊಡ್ಡವರು’ ಸಂವಾದ

ಧಾರವಾಡ: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ (ಕ.ವಿ.ವ. ಸಂಘ)ವು, 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ–2025ರ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡಿದೆ. ಈ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸರಣಿಯ ಅಂಗವಾಗಿ, ನವೆಂಬರ್ 3, 2025ರಂದು ಬೆಳಿಗ್ಗೆ 11 ಗಂಟೆಗೆ ‘ಧರೆಗೆ ದೊಡ್ಡವರು’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬರೋಡಾದ ಅಂತಾರಾಷ್ಟ್ರೀಯ ಭಾಷಾ ತಜ್ಞರಾದ ಡಾ. ಗಣೇಶ…

Read More

ವಿದ್ಯಾರ್ಥಿ ಅರುಣ ಗುಡ್ಡದಕೇರಿಗೆ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್‌ನಲ್ಲಿ ಚಿನ್ನದ ಪದಕ

📰 ವಿದ್ಯಾರ್ಥಿ ಅರುಣ ಗುಡ್ಡದಕೇರಿಗೆ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್‌ನಲ್ಲಿ ಚಿನ್ನದ ಪದಕ ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ನಗರದ ವಿದ್ಯಾರ್ಥಿಯೊಬ್ಬರು ರಾಜ್ಯಮಟ್ಟದ ಫಿಜಿಕ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹುಬ್ಬಳ್ಳಿ ನಗರದ ಕುಮಾರ್ ಅರುಣ ಗಂಗಾಧರ ಗುಡ್ಡದಕೇರಿ ಇವರು ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ (ಬಾಡಿ ಬಿಲ್ಡರ್) ಸ್ಪರ್ಧೆಯಲ್ಲಿ ರಾಜ್ಯಕ್ಕೆ ಚಿನ್ನದ ಪದಕ ಹಾಗೂ ಎಮ್.ಆರ್.ವಿ.ಟಿ.ಯು. ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅರುಣ ಅವರು ವಿಜಯನಗರದ ವೀರಶೈವ ವಿದ್ಯಾವರ್ಧಕ ಸಂಘದ…

Read More

ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ನವಲಗುಂದ: ಪಟ್ಟಣದಲ್ಲಿರುವ ಶ್ರೀ ರೇಣುಕಾದೇವಿ ರೈತರ ಗೋವಿನಜೋಳದ ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಸದುಗೌಡ ಅಂದಾನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಸೋಮೇಶ ಜಗದೀಶ ಉಪನಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀದೇವಿ ಕುಲಕರ್ಣಿ ಘೋಷಿಸಿದರು. ​ಅದೇ ರೀತಿ, ಸಂಘದ ನಿರ್ದೇಶಕ ಸ್ಥಾನಗಳಿಗೆ ಶಿದ್ದಲಿಂಗಪ್ಪ ಚನಬಸಪ್ಪ ಮದ್ಯೋರ, ಪಕ್ಕೀರಗೌಡ ರುದ್ರಗೌಡ ಕಲ್ಲನಗೌಡ್ರ, ಮಂಜುನಾಥ ಹನಮಪ್ಪ ಬಂಡಿವಾಡ, ನಾಗನಗೌಡ ಶಿದ್ಧನಗೌಡ ಪಾಟೀಲ,…

Read More

📰 ಕನ್ನಡ ರಾಜ್ಯೋತ್ಸವ ನಮ್ಮ ಒಗ್ಗಟ್ಟು, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತ: ಶಾಸಕ ಎನ್.‌ಹೆಚ್.‌ ಕೋನರಡ್ಡಿ

📰 ಕನ್ನಡ ರಾಜ್ಯೋತ್ಸವ ನಮ್ಮ ಒಗ್ಗಟ್ಟು, ಸಂಸ್ಕೃತಿ ಮತ್ತು ಸ್ವಾಭಿಮಾನದ ಸಂಕೇತ: ಶಾಸಕ ಎನ್.‌ಹೆಚ್.‌ ಕೋನರಡ್ಡಿ ನವಲಗುಂದ: ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಾನಂದದಿಂದ ಆಚರಿಸಲಾಗುತ್ತದೆ. 1956ನೇ ಇಸವಿಯಲ್ಲಿ ವಿವಿಧ ಕನ್ನಡ ಭಾಷಾಭಿಮಾನಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಿಸಿ, ಮೈಸೂರು ರಾಜ್ಯವನ್ನು ನಿರ್ಮಿಸಲಾಯಿತು. ನಂತರ 1973ರಲ್ಲಿ ಅದಕ್ಕೆ “ಕರ್ನಾಟಕ” ಎಂದು ನಾಮಕರಣ ಮಾಡಲಾಯಿತು ಎಂದು ನವಲಗುಂದ ಶಾಸಕ ಎನ್.‌ಹೆಚ್.‌ ಕೋನರಡ್ಡಿ ಹೇಳಿದರು. ಅವರು ಶುಕ್ರವಾರ ನವಲಗುಂದ ತಹಶೀಲ್ದಾರ ಕಚೇರಿ…

Read More

ಕನ್ನಡಿಗರು ಅಭಿಮಾನ ಶೂನ್ಯರಾಗದೇ ಕನ್ನಡ ಸಂಸ್ಕೃತಿ ಬಗ್ಗೆ ನಿರಂತರ ಜಾಗೃತಿ ಹೊಂದಬೇಕು: ಡಾ. ವೀರಣ್ಣ ರಾಜೂರ

📰 ಕನ್ನಡಿಗರು ಅಭಿಮಾನ ಶೂನ್ಯರಾಗದೇ ಕನ್ನಡ ಸಂಸ್ಕೃತಿ ಬಗ್ಗೆ ನಿರಂತರ ಜಾಗೃತಿ ಹೊಂದಬೇಕು: ಡಾ. ವೀರಣ್ಣ ರಾಜೂರ ಧಾರವಾಡ: ಕನ್ನಡಿಗರು ಅಭಿಮಾನ ಶೂನ್ಯರಾಗದೇ, ಕನ್ನಡ ಸಂಸ್ಕೃತಿಯ ಬಗ್ಗೆ ನಿರಂತರ ಜಾಗೃತಿ ಮತ್ತು ಅಭಿಮಾನ ಹೊಂದಬೇಕೆಂದು ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ಕರೆ ನೀಡಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರದಂದು ಆಯೋಜಿಸಿದ್ದ, ಸಂಘದ ಪ್ರಸಕ್ತ ತ್ರೈವಾರ್ಷಿಕ ಸಾಲಿನ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ…

Read More

ಕೆ.ವಿ.ವಿ.ಎಸ್.ನಿಂದ ‘ನಾಡದೇವಿಗೆ ನಮನ’: ಭುವನೇಶ್ವರಿ ಭಾವಚಿತ್ರಕ್ಕೆ ಗೌರವ ಸಮರ್ಪಣೆ

ಧಾರವಾಡ, ನ. 01: ಕರ್ನಾಟಕ ವಿದ್ಯಾವರ್ಧಕ ಸಂಘವು (ಕೆ.ವಿ.ವಿ.ಎಸ್.) 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶನಿವಾರದಂದು ‘ನಾಡದೇವಿಗೆ ನಮನ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಘದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಕು. ದೀಪ್ತಿ ಪಾಟೀಲ ಹಾಗೂ ಅವರ ಸಂಗಡಿಗರು ಸುಶ್ರಾವ್ಯವಾಗಿ ನಾಡಗೀತೆಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ…

Read More

ಕನ್ನಡ ನಾಡು-ನುಡಿ ಪ್ರೀತಿ ನವೆಂಬರ್‌ಗೆ ಸೀಮಿತವಾಗಬಾರದು: ಸಚಿವ ಸಂತೋಷ ಲಾಡ್

📰 ಕನ್ನಡ ನಾಡು-ನುಡಿ ಪ್ರೀತಿ ನವೆಂಬರ್‌ಗೆ ಸೀಮಿತವಾಗಬಾರದು: ಸಚಿವ ಸಂತೋಷ ಲಾಡ್ ಧಾರವಾಡ. 01: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಪ್ರೀತಿಯನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿಸದೆ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ “ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ” ಎಂಬ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಕರೆ ನೀಡಿದರು. ಅವರು…

Read More

ಕನೇರಿ ಶ್ರೀಗಳರಿಗೆ ವಿಜಯಪುರ ಪ್ರವೇಶ ನಿರ್ಬಂಧ: ಕುಂದಗೋಳದಲ್ಲಿ ನ.4ರಂದು ಬೃಹತ್ ಪ್ರತಿಭಟನೆ

ಕುಂದಗೋಳ: ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಶಿದ್ದೇಶ್ವರ ಶ್ರೀಗಳರವರನ್ನು ವಿಜಯಪುರ ಪ್ರವೇಶಕ್ಕೆ ನಿರ್ಬಂಧಿಸಿರುವುದನ್ನು ಖಂಡಿಸಿ ನವೆಂಬರ್ 4ರಂದು (ಮಂಗಳವಾರ) ಬೃಹತ್ ಪ್ರತಿಭಟನೆಯ ಮೂಲಕ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಬಸವಾದಿಶರಣರ ಹಿಂದೂ ಸಮಾವೇಶದ ಹಿರಿಯ ಮುಖಂಡ ನಿಂಗಪ್ಪ ಜಟಾರ ತಿಳಿಸಿದ್ದಾರೆ. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕನ್ನೇರಿ ಶ್ರೀಗಳರು ರೈತರ ಉದ್ದಾರಕ್ಕಾಗಿ ಅನೇಕ ಸಂಶೋಧನೆಗಳ ಮೂಲಕ ಸಂಪ್ರದಾಯಿಕ ಬೆಳೆ ಬೆಳೆಸಲು ರೈತರಲ್ಲಿ ಉತ್ತೇಜನೆ ನೀಡುತ್ತಿದ್ದು, ಸಾವಲಂಬಿ…

Read More

ಕರ್ನಾಟಕ ರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ: ನ. 1 ರಂದು ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಹಾಜರಾಗಲು ಜಿಲ್ಲಾಧಿಕಾರಿಗಳ ಸೂಚನೆ

ಧಾರವಾಡ (ಅ. 31): ಕರ್ನಾಟಕ ರಾಜ್ಯೋತ್ಸವ ದಿನಾಚರಣೆ–2025 ಕಾರ್ಯಕ್ರಮವನ್ನು ನವೆಂಬರ್ 1 ರಂದು ಧಾರವಾಡ ನಗರದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಸೂಚಿಸಿದ್ದಾರೆ. ಹಾಜರಾತಿ ಕಡ್ಡಾಯ: ಶಿಸ್ತು ಕ್ರಮದ ಎಚ್ಚರಿಕೆನವೆಂಬರ್ 1, 2025 ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆರ್….

Read More

ಕಲಘಟಗಿಯಲ್ಲಿ ವಾಹನ ಬ್ಯಾಟರಿ ಕಳ್ಳರ ಗ್ಯಾಂಗ್ ಬಂಧನ: ₹4.35 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

ಧಾರವಾಡ (ಅ. 31): ಜಿಲ್ಲೆಯ ಕಲಘಟಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು ₹4.35 ಲಕ್ಷ ಮೌಲ್ಯದ ಕಳುವಾದ ಬ್ಯಾಟರಿಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಮೋಟರ್‌ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪ್ರಮುಖ ಕಳ್ಳತನ ಪ್ರಕರಣಗಳಿಗೆ ಅಂತ್ಯಕಲಘಟಗಿ ಪೋಲಿಸ್ ಠಾಣೆಯಲ್ಲಿ (ಗುನ್ನಾ ನಂ 249/2025, ಕಲಂ 303(2) ಬಿ.ಎನ್.ಎಸ್.ಎಸ್ 2023) ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ಆಗಸ್ಟ್ 30 ಮತ್ತು…

Read More