ಕಲಘಟಗಿ ಅಪಾಯಕಾರಿ ಮರಗಳ ತೆರವಿಗೆ ಫೆಬ್ರವರಿ 27 ಮತ್ತು ಮಾರ್ಚ್ 11 ರಂದು ಬಹಿರಂಗ ಹರಾಜು
ಧಾರವಾಡ: ಕಲಘಟಗಿ ವಲಯದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯು ಫೆಬ್ರವರಿ 27 ಮತ್ತು ಮಾರ್ಚ್ 11, 2026 ರಂದು ಬಹಿರಂಗ ಹರಾಜು ಹಮ್ಮಿಕೊಂಡಿದೆ. ಕಲಘಟಗಿ-ಧಾರವಾಡ ಮುಖ್ಯರಸ್ತೆಯ ಹಿರೇಹೊನ್ನಳ್ಳಿ ಗ್ರಾಮದ ದೂಳಿಕೊಪ್ಪ ಕ್ರಾಸ್ ಹತ್ತಿರ ಇರುವ 3 ಅಪಾಯಕಾರಿ ಮರಗಳು ಹಾಗೂ ಗಂಜಿಗಟ್ಟಿ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದ ಆವರಣದಲ್ಲಿ ನೂತನ ವಸತಿ ನಿಲಯ ನಿರ್ಮಾಣಕ್ಕೆ ಅಡಚಣೆಯಾಗಿರುವ 26 ವಿವಿಧ ಜಾತಿಯ ಮರಗಳು ಸೇರಿದಂತೆ ಒಟ್ಟು…

