”ಎಲ್ಲರನ್ನೂ ಕ್ಷಮಿಸು, ಎಲ್ಲರಲ್ಲೂ ಕ್ಷಮೆ ಕೇಳು… ಇನ್ನು ನೀನು ಹೊರಡು ಮಗನೇ”: 13 ವರ್ಷಗಳ ಹೋರಾಟದ ಬಳಿಕ ಹರೀಶ್ಗೆ ಅಂತಿಮ ವಿದಾಯ!
ನವದೆಹಲಿ: ಮಗನ ಉಸಿರು ನಿಲ್ಲಲಿದೆ ಎಂದು ತಿಳಿದೂ, ಭಾರವಾದ ಹೃದಯದಿಂದ ಹೆತ್ತವರು ನೀಡಿದ ಆ ಅಂತಿಮ ವಿದಾಯದ ಮಾತುಗಳು ಕಲ್ಲನ್ನು ಕರಗಿಸುವಂತಿದ್ದವು. ಕಳೆದ 13 ವರ್ಷಗಳಿಂದ ಕೋಮಾದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗಾಜಿಯಾಬಾದ್ನ ಹರೀಶ್ ರಾಣಾ ಅವರ ಸುದೀರ್ಘ ಕದನಕ್ಕೆ ಈಗ ತೆರೆ ಬೀಳುತ್ತಿದೆ. ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ಹರೀಶ್ ಅವರನ್ನು ದಾಖಲಿಸಲಾಗಿದ್ದು, ಅಲ್ಲಿ ಅವರ ಜೀವ ರಕ್ಷಕ ವ್ಯವಸ್ಥೆಯನ್ನು (Life Support) ತೆಗೆದುಹಾಕುವ ಮೂಲಕ ‘ಇಚ್ಛಾಮರಣ’ ನೀಡುವ ಪ್ರಕ್ರಿಯೆ ನಡೆಯಲಿದೆ. ಈ ದೇಶದ ಯಾವುದೇ…

