ಗದಗ: ಸಾಲಬಾಧೆ ತಾಳಲಾರದೆ ಹುನಗುಂಡಿ ಗ್ರಾಮದ ರೈತ ಆತ್ಮಹತ್ಯೆ;
ರೋಣ: ತಾಲ್ಲೂಕಿನ ಹುನಗುಂಡಿ ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ಮೃತ ರೈತನನ್ನು ಸಿದ್ದಲಿಂಗಯ್ಯ ಶಿವಯ್ಯ ವಸ್ತ್ರದ (50) ಎಂದು ಗುರುತಿಸಲಾಗಿದೆ. ಇವರು ಹುನಗುಂಡಿ ಗ್ರಾಮದಲ್ಲಿ 4 ಎಕರೆ 19 ಗುಂಟೆ ಜಮೀನು ಹೊಂದಿದ್ದರು. ಪ್ರಸಕ್ತ ಸಾಲಿನಲ್ಲಿ ಬೆಳೆ ಕೈಕೊಟ್ಟ ಕಾರಣ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಈ ತೀವ್ರ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತ ರೈತ ಸಿದ್ದಲಿಂಗಯ್ಯ ಅವರು…

