ಲಕ್ಕುಂಡಿಯಲ್ಲಿ ಉತ್ಖನನ: ಕೋಟೆ ವೀರಭದ್ರೇಶ್ವರ ದೇಗುಲದ ಎದುರು ಐತಿಹಾಸಿಕ ‘ಪಾಣಿ ಬಟ್ಟಲು’ ಶಿಲೆ ಪತ್ತೆ
ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ತಾಣವಾದ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಮಹತ್ವದ ಐತಿಹಾಸಿಕ ಶಿಲೆಯೊಂದು ಪತ್ತೆಯಾಗಿದ್ದು, ಇತಿಹಾಸ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿನ್ನೆಯಿಂದ ಆರಂಭವಾಗಿರುವ ಉತ್ಖನನದಲ್ಲಿ ಇಂದು (ಭಾನುವಾರ) ಈ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಮಣ್ಣು ಅಗೆಯುವ ಸಂದರ್ಭದಲ್ಲಿ ‘ಪಾಣಿ ಬಟ್ಟಲಿನ’ ಆಕಾರವನ್ನು ಹೋಲುವ ವಿಶೇಷವಾದ ಕಲ್ಲು ದೊರೆತಿದೆ. ಈ ಶಿಲೆಯು ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕಾಲದ ಅವಶೇಷವಿರಬಹುದು ಅಥವಾ ಪೂಜಾ ಕಾರ್ಯಕ್ಕೆ ಬಳಸುತ್ತಿದ್ದ…

